Wednesday, October 2, 2024
Wednesday, October 2, 2024

Sri Uttaradi Math ಗಣಪತಿಯನ್ನ ನಾವು ನಿತ್ಯ ಸ್ಮರಣೆ ಮಾಡಬೇಕು- ಶ್ರೀಸತ್ಯಾತ್ಮ ತೀರ್ಥರು

Date:

Sri Uttaradi Math ಎಲ್ಲ ಶುಭ ಕಾರ್ಯಗಳಲ್ಲಿ ಬರುವ ವಿಘ್ನಗಳ ಪರಿಹಾರಕ್ಕಾಗಿ ಗಣಪತಿಯನ್ನು ನಾವು ನಿತ್ಯದಲ್ಲಿ ಸ್ಮರಣೆ ಮಾಡಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರಿನಲ್ಲಿ,
ಸೋಮವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವ ಮತ್ತು ಗಣಪತಿ ಹಬ್ಬದ ನಿಮಿತ್ತ ಶಮಂತಕೋಪಾಖ್ಯಾನದ ಅನುಗ್ರಹ ಸಂದೇಶದ ನೀಡಿದರು.

ಭಗವಂತ ಆದೇಶ ಮಾಡಿದ ಸತ್ಕಾರ್ಯಗಳನ್ನು ಮಾಡುವಾಗ ಸಜ್ಜನರಿಗೆ ಬರುವಾಗ ವಿಘ್ನಗಳನ್ನು ತಡೆಯಲು ಗಣಪತಿಗೆ ವಿಶಿಷ ಸ್ಥಾನವನ್ನು ದೇವರು ಕೊಟ್ಟಿದ್ದಾನೆ.

ವಿಶ್ವನಾಮಕನಾದ ಪರಮಾತ್ಮನ 19 ಮುಖದೊಳಗಿನ ಮಧ್ಯದ ಮುಖ ಗಜಮುಖ. ಅಂತಹ ಗಜಮುಖವನ್ನು ಗಣಪತಿ ಪಡೆದಿದ್ದಾನೆ ಎಂದರು.

Sri Uttaradi Math ದೇವರ ಗುಣಗಳ ಚಿಂತನ, ದೇವರ ಸರ್ವೋತ್ತಮತ್ವ, ದೇವರ ಆಜ್ಞೆ ಪಾಲಿಸಬೇಕಾದ ಪ್ರವೃತ್ತಿ ಇದೇ ಮೊದಲಾದ ಸುಜ್ಞಾನಕ್ಕೆ ಬರುವ ವಿಘ್ನವನ್ನು ತಡೆಯಬೇಕೆಂದು ಗಣಪತಿಯಲ್ಲಿ ನಾವು ಪ್ರಾರ್ಥಿಸಬೇಕು. ವೇದವ್ಯಾಸ ದೇವರ ಆಜ್ಞೆಯಂತೆ ಮಹಾಭಾರತವನ್ನು ಬರೆದ ಗಣಪತಿ ನಮ್ಮ ಮಸ್ತಕದಲ್ಲಿಯೂ ಮಹಾಭಾರತದ ಜ್ಞಾನವನ್ನು ನೀಡುವಂತೆ ಪ್ರಾರ್ಥಿಸಬೇಕು ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...