Asia Cup ಏಷ್ಯಾ ಕಪ್ ಈ ವರ್ಷ ಭಾರತದ ಮಡಿಲು ಸೇರಿತು.
ಕ್ವಾಲಿಫೈಯರ್ ನಲ್ಲಿ ಅಜೇಯವಾಗಿ ನುಗ್ಗುತ್ತಿದ್ದ ಭಾರತಕ್ಕೆ ವೀರೋಚಿತ
ಸೋಲುಣ್ಣಿಸಿದ ಬಾಂಗ್ಲಾ ಎದುರಿನ ಪಂದ್ಯ ಬಿಟ್ಟರೆ ಮಿಕ್ಕವು ಚನ್ನಾಗಿಯೇ ಇದ್ದವು.
ಫೈನಲ್ ನಲ್ಲಿ ಶ್ರೀಲಂಕಾ ತವರಿನಲ್ಲಿ ಕಚ್ಚಿಕೊಂಡು ಆಡಿಬಿಟ್ಟರೆ ಎಂಬ ಆತಂಕವಿತ್ತು.
ಆದರೆ ಈ ಆತಂಕ ಯಾರಿಗಾದರೂ ಸಹಜವೆ.
ಕ್ರಿಕೆಟ್ ನಲ್ಲಿ ಎಲ್ಲವೂ ಅನಿಶ್ವಿತ,ಅನಿರೀಕ್ಷಿತ ಎಂಬ ಮಾತು ಅಕ್ಷರಶಹ ಸತ್ಯವಾಯಿತು.
ಭಾರತದ ಆರಂಭಿಕ ಬೌಲರ್ ಸಿರಾಜ್ ಅದನ್ನ ರುಜುವಾತು ಮಾಡಿದರು.
Asia Cup ಒಂದೇ ಓವರ್ ನಲ್ಲಿ ನಾಲ್ಕು ವಿಕೆಟ್ ಕಿತ್ತ ಸಿರಾಜ್ ಏಷ್ಯ ಕಪ್
ಭಾರತದತ್ತ ಧಾವಿಸುವುದನ್ನ
ಹುಸಿಗೊಳಿಸಲಿಲ್ಲ.
ಅವರ ಸ್ಪೆಲ್ ಇಪ್ಪತ್ತೊಂದು ರನ್ ಗಳಿಗೆ ಆರು ವಿಕೆಟ್.
ಐವತ್ತು ರನ್ ಗಳಿಗೆ ಮಂಗಳಹಾಡಿದ ಶ್ರೀಲಂಕಾ ಇನ್ನಿಂಗ್ಸ್ ಭಾರತಕ್ಕೆ ಸುಲಭ ತುತ್ತಾಯಿತು.
ಐವತ್ತೊಂದು ರನ್ ಗಳ ಗುರಿ ಭಾರತಕ್ಕೆ ಸವಾಲಾಗಲೇ ಇಲ್ಲ.
ವಿಕೆಟ್ ನಷ್ಟವಿಲ್ಲದೇ ಕಿಶನ್ ಮತ್ತು ಗಿಲ್ ಪಂದ್ಯ ಗೆಲ್ಲಿಸಿದರು.