Monday, February 2, 2026
Monday, February 2, 2026

Asia Cup ಏಷ್ಯಾ ಕಪ್ 2023 ಏಕದಿನ ಕ್ರಿಕೆಟ್ ಭಾರತ ಚಾಂಪಿಯನ್ಸ್

Date:

Asia Cup ಏಷ್ಯಾ ಕಪ್ ಈ ವರ್ಷ ಭಾರತದ ಮಡಿಲು ಸೇರಿತು.
ಕ್ವಾಲಿಫೈಯರ್ ನಲ್ಲಿ ಅಜೇಯವಾಗಿ ನುಗ್ಗುತ್ತಿದ್ದ ಭಾರತಕ್ಕೆ ವೀರೋಚಿತ 
ಸೋಲುಣ್ಣಿಸಿದ ಬಾಂಗ್ಲಾ ಎದುರಿನ ಪಂದ್ಯ ಬಿಟ್ಟರೆ ಮಿಕ್ಕವು ಚನ್ನಾಗಿಯೇ‌ ಇದ್ದವು.

ಫೈನಲ್ ನಲ್ಲಿ ಶ್ರೀಲಂಕಾ ತವರಿನಲ್ಲಿ ಕಚ್ಚಿಕೊಂಡು ಆಡಿಬಿಟ್ಟರೆ ಎಂಬ ಆತಂಕವಿತ್ತು.
ಆದರೆ ಈ ಆತಂಕ ಯಾರಿಗಾದರೂ ಸಹಜವೆ.
ಕ್ರಿಕೆಟ್ ನಲ್ಲಿ ಎಲ್ಲವೂ ಅನಿಶ್ವಿತ,ಅನಿರೀಕ್ಷಿತ ಎಂಬ ಮಾತು ಅಕ್ಷರಶಹ ಸತ್ಯವಾಯಿತು.

ಭಾರತದ ಆರಂಭಿಕ ಬೌಲರ್ ಸಿರಾಜ್ ಅದನ್ನ ರುಜುವಾತು ಮಾಡಿದರು.

Asia Cup ಒಂದೇ ಓವರ್ ನಲ್ಲಿ ನಾಲ್ಕು ವಿಕೆಟ್ ಕಿತ್ತ ಸಿರಾಜ್ ಏಷ್ಯ ಕಪ್ 
ಭಾರತದತ್ತ ಧಾವಿಸುವುದನ್ನ 
ಹುಸಿಗೊಳಿಸಲಿಲ್ಲ.

ಅವರ ಸ್ಪೆಲ್ ಇಪ್ಪತ್ತೊಂದು ರನ್ ಗಳಿಗೆ ಆರು ವಿಕೆಟ್.

ಐವತ್ತು ರನ್ ಗಳಿಗೆ ಮಂಗಳಹಾಡಿದ ಶ್ರೀಲಂಕಾ ಇನ್ನಿಂಗ್ಸ್ ಭಾರತಕ್ಕೆ ಸುಲಭ ತುತ್ತಾಯಿತು.
ಐವತ್ತೊಂದು ರನ್ ಗಳ ಗುರಿ ಭಾರತಕ್ಕೆ ಸವಾಲಾಗಲೇ ಇಲ್ಲ.
ವಿಕೆಟ್ ನಷ್ಟವಿಲ್ಲದೇ ಕಿಶನ್ ಮತ್ತು ಗಿಲ್ ಪಂದ್ಯ ಗೆಲ್ಲಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...