Wednesday, December 17, 2025
Wednesday, December 17, 2025

Uttaradi Mutt ಬಾಲ್ಯ ,ಯೌವನ, ವೃದ್ಧಾಪ್ಯ ಗತಿಗಳು ದೇವರಿಗೆ ಇರುವುದಿಲ್ಲ- ಶ್ರೀಸತ್ಯಾತ್ಮ ತೀರ್ಥರು

Date:

Uttaradi Mutt ಶ್ರೀಕೃಷ್ಣ ಪರಮಾತ್ಮ ಲೋಕ ದೃಷ್ಟಿಯಿಂದ ಬೆಳೆದಂತೆ ತೋರುತ್ತಾನೆಯೇ ಹೊರತು ಬಾಲ್ಯ, ಯೌವ್ವನ, ವೃದ್ಧಾಪ್ಯ ಹೀಗೆ ಗತಿಗಳು ದೇವರಿಗೆ ಇರುವುದಿಲ್ಲ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಸಂತಸ ವ್ಯಕ್ತಪಡಿಸಿದರು.

ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಅನಾದಿ ಕಾಲದಿಂದಲೂ ದೇವರು ಏಕಪ್ರಕಾರವಾಗಿಯೇ ಇದ್ದಾನೆ. ಅವನಿಗೆ ವೃದ್ಧಿ ಅಥವಾ ಬೇರೆ ಯಾವುದೇ ಗತಿ ಇರುವುದಿಲ್ಲ. ಯಾವ ರೀತಿಯಲ್ಲಿ ದೇವರು ಅವತಾರ ಮಾಡುತ್ತಾನೆಯೋ ಆ ಅವತಾರಕ್ಕೆ ತಕ್ಕಂತೆ ಲೋಕದಲ್ಲಿ ವೃದ್ಧಿಯನ್ನು ಹೊಂದಿದಂತೆ ತೋರುತ್ತಾನೆ. ನಿಜವಾಗಿ ದೇವರು ಮೂಲ ಸ್ವರೂಪದಲ್ಲಿ ಏಕಪ್ರಕಾರವಾಗಿಯೇ ಇದ್ದಾನೆ ಎಂದರು.

ಪ್ರವಚನ ನೀಡಿದ ಪಂಡಿತ ಗೋಪಾಲಾಚಾರ್ಯ, ಶ್ರೀಕೃಷ್ಣ ಪರಮಾತ್ಮ ಅವನ ಕಾರ್ಯ, ಅವನ ಗುಣಗಳು ಮತ್ತು ನಡೆನುಡಿ ಪ್ರತಿಯೊಂದೂ ಕೂಡ ಜೀವನದ ಆದರ್ಶವಾಗಿದೆ. ಅನುಕರಣೀಯವಾಗಿದೆ ಮತ್ತು ಚಿಂತನೆಗೆ ಯೋಗ್ಯವಾಗಿದೆ ಎಂದರು.

Uttaradi Mutt ಶ್ರೀಕೃಷ್ಣನ ಅನುಗ್ರಹದ ಬಲದಿಂದ ಇಲಿ ಹುಲಿಯಾಗಬಹುದು, ದಡ್ಡ ಜ್ಞಾನಿಯಾಗಬಹುದು, ಸಂಸಾರಿ ಮುಕ್ತನಾಗಬಹುದು. ಆದ್ದರಿಂದ ಶ್ರೀಕೃಷ್ಣನ ಕಥಾ ಶ್ರವಣವನ್ನು ನಿತ್ಯದಲ್ಲಿ ಮಾಡಲೇಬೇಕು ಎಂಬುದನ್ನು ಭಾಗವತ ಹೇಳುತ್ತದೆ ಎಂದರು.

ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಶ್ರೀಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...