Saturday, September 28, 2024
Saturday, September 28, 2024

Uttaradi Mutt ಸದ್ಗುಣಗಳ ಸಂಪತ್ತು ನಮ್ಮನ್ನು ಮೋಕ್ಷದವರೆಗೂ ಕೊಂಡೊಯ್ಯಬಲ್ಲವು- ಶ್ರೀಸತ್ಯಾತ್ಮ ತೀರ್ಥರು

Date:

Uttaradi Mutt ಮನುಷ್ಯನಿಗೆ ಎಲ್ಲ ಸದ್ಗುಣಗಳೂ ಸಂಪತ್ತು ಇದ್ದಂತೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

ಲೌಖಿಕವಾಗಿ ಯೋಚಿಸಿದರೆ ಸಂಪತ್ತು ಎಂದರೆ ಕೇವಲ ಹಣ ಮಾತ್ರ. ಅದು ಕೂಡ ಸಂಪತ್ತೇ ಮತ್ತು ಬದುಕಿಗೆ ಅವಶ್ಯಕ. ಆದರೆ ಜ್ಞಾನ, ಭಕ್ತಿ, ವೈರಾಗ್ಯ, ಶಮದಮಾದಿಗಳೂ ಕೂಡ ಅತ್ಯಂತ ಪ್ರಮುಖವಾದ ಸದ್ಗುಣಗಳ ಸಂಪತ್ತು. ಈ ಸಂಪತ್ತುಗಳು ನಮ್ಮನ್ನು ಮೋಕ್ಷದವರೆಗೆ ಕೊಂಡೊಯ್ಯಬಲ್ಲವು ಎಂದರು.

ಪ್ರವಚನ ನೀಡಿದ ಸೌರಭ ವಿದ್ಯಾಲಯದ ಪ್ರಾಚಾರ್ಯರಾದ ಪಂಡಿತ ಪ್ರಮೋದಾಚಾರ್ಯ ಪೂಜಾರ್, ಭಾಗವತ ನವಮ ಸ್ಕಂದ ನವವಿಧ ಭಕುತಿಯ ತಿಳಿಸುವ ಮತ್ತು ನವವಿಧ ದ್ವೇಷವ ಹೇಗೆ ಬಿಡಬೇಕೆಂದು ತಿಳಿಸುವ ಸ್ಕಂದ. ಇಲ್ಲಿ ನಾವು ದೇವರಿಗಿಂತ ರಾಜರ ಮತ್ತು ಋಷಿಗಳ ಬಗ್ಗೆ ಹೆಚ್ಚಾಗಿ ತಿಳಿಸುವ ಸ್ಕಂದ. ಕಾರಣ ಅವರು ಪುಣ್ಯದ ಕೀರ್ತಿಯನ್ನು ಪಡೆದವರು. ದೇವರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದವರು ಎಂದರು.

Uttaradi Mutt ಒಬ್ಬೊಬ್ಬ ರಾಜರ ಕಥೆಯೂ ಅದ್ಭುತವಾಗಿದೆ. ನಮಗೆ ದೇವರ ಮೇಲೆ ಭಕ್ತಿ ಬರಬೇಕೆಂದರೆ ದೇವರ ಭಕ್ತರಾದ ರಾಜರಾದ ನಭ, ನರಿಶ್ಯಂತ, ದಿಷ್ಟ, ಮರುತ್ ಮೊದಲಾದವರ ಕಥೆಯನ್ನು ಕೇಳಬೇಕು ಎಂದರು.

ಪಂಡಿತ ಸುರೇಶಾಚಾರ್ಯ ರಾಯಚೂರು ಪ್ರಚವನ ನೀಡಿದರು. ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿಘಿ, ರಾಮಧ್ಯಾನಿ ಅನಿಲ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ

Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ...

New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ...

Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು...

Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ

Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ...