Sunday, December 7, 2025
Sunday, December 7, 2025

Sony Camera ಸೋನಿ ಕ್ಯಾಮರಾಗಳ ದುರಸ್ತಿಗೆ ಮಂಗಳೂರಿನಲ್ಲೊಂದು ಸರ್ವೀಸ್ ಸೆಂಟರ್- ಡಿ.ವಿ.ಸತೀಶ್

Date:

Sony Camera ಸೋನಿ ಆಲ್ಪಾ ಕಂಪನಿಯ ಅಧಿಕೃತ ಸಂಸ್ಥೆಯಾದ ಶಿವಮೊಗ್ಗ ವಿಷ್ಟು ಸರ್ವಿಸ್ ಸೆಂಟರ್ ಹಾಗೂ ಮಂಗಳೂರಿನ ಅಭಿನವ್ ಎಂಟರ್‌ ಪ್ರೈಸೆಸ್ ಪಾಲುದಾರರಾದ ಡಿ.ವಿ.ಸತೀಶ್ ಅವರು ಮಂಗಳೂರಿನ ಅಭಿನವ್ ಎಂಟರ್‌ ಪ್ರೈಸೆಸ್‌ನಲ್ಲಿ ಸೋನಿ ಆಲ್ಫಾ ಕ್ಯಾಮೆರಾಗಳು, ಲೆನ್ಸ್‌ಗಳ ಬೃಹತ್ ಸರ್ವಿಸ್ ಸೆಂಟರ್ ಅನ್ನು ವಿಶಾಲ್ ಮಾಥೂರ್ ಉದ್ಘಾಟಿಸಿದರು.

ಸೋನಿ ಸಂಸ್ಥೆಯು ದೇಶಾದ್ಯಂತ 26 ಅತ್ಯಾಧುನಿಕ ಸೋನಿ ಆಲ್ಫಾ ಸೆಂಟರ್ ಆರಂಭಕ್ಕೆ ಅನುಮತಿ ನೀಡಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ ಮಂಗಳೂರಿಗೆ ಈ ಭಾಗ್ಯ ಲಭಿಸಿದೆ. ಈ ಮೊದಲು ಇಡೀ ರಾಜ್ಯದ ಎಲ್ಲಾ ಅತ್ಯಾಧುನಿಕ ಕ್ಯಾಮೆರಾಗಳನ್ನು ಬೆಂಗಳೂರಿಗೆ ಮಾತ್ರ ಕಳುಹಿಸಬೇಕಾಗಿತ್ತು. ಕ್ಯಾಮೆರಾ ದುರಸ್ಥಿಗೆ ಸಾಕಷ್ಟು ಕಾಲ ವ್ಯಯವಾಗುತ್ತಿತ್ತು. ಈಗ ಮಂಗಳೂರಿನ ಶಾಖೆಗೆ ಹೊಸ ಕಳೆ ಬಂದಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳು ಅತ್ಯಾಧುನಿಕ ಕ್ಯಾಮೆರಾ ಹೊಂದಿರುವವರಿಗೆ ಇದೊಂದು ವರದಾನವಾಗಿದೆ.

ಮಂಗಳೂರಿನ ಬಿಜೈ ಒಷ್ಯನ್ ಪರ್ಲ್ ಹೋಟೆಲ್ ಮುಂಭಾಗದಲ್ಲಿ ಆರಂಭಗೊಂಡಿದ್ದು ಜನರಿಗೆ ಸೇವೆ ನೀಡಲು ಸಿದ್ದವಾಗಿದೆ, ತಜ್ಞ ಟೆಕ್ನಿಷಿಯನ್ , ವಿಶಾಲ ಜಾಗದಲ್ಲಿ ನೂತನ ತಂತ್ರಜ್ಞಾನ ಬಳಸಿ ಎಲ್ಲಾರೀತಿಯ ಸೋನಿ ಆಲ್ಫಾ ಕ್ಯಾಮಾರಗಳ ದುರಸ್ಥಿ ಮಾಡಿಕೊಡುವುದಲ್ಲದೆ ಬಾಡಿಗಳು ಹಾಗೂ ಬಿಡಿಭಾಗಗಳು ಇಲ್ಲಿದ್ದು ಅತ್ಯಂತ ಕನಿಷ್ಟ ದರದಲ್ಲಿ ದೊರೆಯುತ್ತದೆ. ಇದು ಸೋನಿ ಕಂಪೆನಿಯ ಅಧಿಕೃತ ಏಕೈಕ ಸರ್ವಿಸ್ ಸೆಂಟರ್ ಆಗಿದೆ ಎಂದು ಇದರ ಮಾಲೀಕರಾದ ಸತೀಶ್ ಡಿ.ವಿ. ತಿಳಿಸಿದ್ದಾರೆ.

Sony Camera ಈ ಸಮಾರಂಭದಲ್ಲಿ ಎಲ್ಲಾ ಜಿಲ್ಲೆಯ ಸೋನಿ ಆಲ್ಫಾ ಸರ್ವಿಸ್ ಸೆಂಟರ್ ಮುಖ್ಯಸ್ಥರು, ಉಡುಪಿ ಹಾಗೂ ದಕ್ಷಿಣ ಜಿಲ್ಲೆಯ ಮೀಡಿಯಾ ಛಾಯಾಗ್ರಾಹಕರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...