Sunday, December 14, 2025
Sunday, December 14, 2025

Sony Camera ಸೋನಿ ಕ್ಯಾಮರಾಗಳ ದುರಸ್ತಿಗೆ ಮಂಗಳೂರಿನಲ್ಲೊಂದು ಸರ್ವೀಸ್ ಸೆಂಟರ್- ಡಿ.ವಿ.ಸತೀಶ್

Date:

Sony Camera ಸೋನಿ ಆಲ್ಪಾ ಕಂಪನಿಯ ಅಧಿಕೃತ ಸಂಸ್ಥೆಯಾದ ಶಿವಮೊಗ್ಗ ವಿಷ್ಟು ಸರ್ವಿಸ್ ಸೆಂಟರ್ ಹಾಗೂ ಮಂಗಳೂರಿನ ಅಭಿನವ್ ಎಂಟರ್‌ ಪ್ರೈಸೆಸ್ ಪಾಲುದಾರರಾದ ಡಿ.ವಿ.ಸತೀಶ್ ಅವರು ಮಂಗಳೂರಿನ ಅಭಿನವ್ ಎಂಟರ್‌ ಪ್ರೈಸೆಸ್‌ನಲ್ಲಿ ಸೋನಿ ಆಲ್ಫಾ ಕ್ಯಾಮೆರಾಗಳು, ಲೆನ್ಸ್‌ಗಳ ಬೃಹತ್ ಸರ್ವಿಸ್ ಸೆಂಟರ್ ಅನ್ನು ವಿಶಾಲ್ ಮಾಥೂರ್ ಉದ್ಘಾಟಿಸಿದರು.

ಸೋನಿ ಸಂಸ್ಥೆಯು ದೇಶಾದ್ಯಂತ 26 ಅತ್ಯಾಧುನಿಕ ಸೋನಿ ಆಲ್ಫಾ ಸೆಂಟರ್ ಆರಂಭಕ್ಕೆ ಅನುಮತಿ ನೀಡಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ ಮಂಗಳೂರಿಗೆ ಈ ಭಾಗ್ಯ ಲಭಿಸಿದೆ. ಈ ಮೊದಲು ಇಡೀ ರಾಜ್ಯದ ಎಲ್ಲಾ ಅತ್ಯಾಧುನಿಕ ಕ್ಯಾಮೆರಾಗಳನ್ನು ಬೆಂಗಳೂರಿಗೆ ಮಾತ್ರ ಕಳುಹಿಸಬೇಕಾಗಿತ್ತು. ಕ್ಯಾಮೆರಾ ದುರಸ್ಥಿಗೆ ಸಾಕಷ್ಟು ಕಾಲ ವ್ಯಯವಾಗುತ್ತಿತ್ತು. ಈಗ ಮಂಗಳೂರಿನ ಶಾಖೆಗೆ ಹೊಸ ಕಳೆ ಬಂದಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳು ಅತ್ಯಾಧುನಿಕ ಕ್ಯಾಮೆರಾ ಹೊಂದಿರುವವರಿಗೆ ಇದೊಂದು ವರದಾನವಾಗಿದೆ.

ಮಂಗಳೂರಿನ ಬಿಜೈ ಒಷ್ಯನ್ ಪರ್ಲ್ ಹೋಟೆಲ್ ಮುಂಭಾಗದಲ್ಲಿ ಆರಂಭಗೊಂಡಿದ್ದು ಜನರಿಗೆ ಸೇವೆ ನೀಡಲು ಸಿದ್ದವಾಗಿದೆ, ತಜ್ಞ ಟೆಕ್ನಿಷಿಯನ್ , ವಿಶಾಲ ಜಾಗದಲ್ಲಿ ನೂತನ ತಂತ್ರಜ್ಞಾನ ಬಳಸಿ ಎಲ್ಲಾರೀತಿಯ ಸೋನಿ ಆಲ್ಫಾ ಕ್ಯಾಮಾರಗಳ ದುರಸ್ಥಿ ಮಾಡಿಕೊಡುವುದಲ್ಲದೆ ಬಾಡಿಗಳು ಹಾಗೂ ಬಿಡಿಭಾಗಗಳು ಇಲ್ಲಿದ್ದು ಅತ್ಯಂತ ಕನಿಷ್ಟ ದರದಲ್ಲಿ ದೊರೆಯುತ್ತದೆ. ಇದು ಸೋನಿ ಕಂಪೆನಿಯ ಅಧಿಕೃತ ಏಕೈಕ ಸರ್ವಿಸ್ ಸೆಂಟರ್ ಆಗಿದೆ ಎಂದು ಇದರ ಮಾಲೀಕರಾದ ಸತೀಶ್ ಡಿ.ವಿ. ತಿಳಿಸಿದ್ದಾರೆ.

Sony Camera ಈ ಸಮಾರಂಭದಲ್ಲಿ ಎಲ್ಲಾ ಜಿಲ್ಲೆಯ ಸೋನಿ ಆಲ್ಫಾ ಸರ್ವಿಸ್ ಸೆಂಟರ್ ಮುಖ್ಯಸ್ಥರು, ಉಡುಪಿ ಹಾಗೂ ದಕ್ಷಿಣ ಜಿಲ್ಲೆಯ ಮೀಡಿಯಾ ಛಾಯಾಗ್ರಾಹಕರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...