Thursday, March 19, 2026
Thursday, March 19, 2026

Uttaradi Muth ವೇದವ್ಯಾಸರ ಮಾನಸ ಸರೋವರದ ಕಮಲವೇ ಭಾಗವತ.ಅದರ ಭ್ರಮರವೇ ಸತ್ಯಧರ್ಮರು

Date:

Uttaradi Muth ಹೊಳೆಹೊನ್ನೂರು ವೇದವ್ಯಾಸ ದೇವರ ಮಾನಸ ಸರೋವರದಲ್ಲಿ ಉತ್ಪನ್ನವಾದ ಶ್ರೀಮದ್ ಭಾಗವತವೆಂಬ ಕಮಲದಲ್ಲಿ ಶ್ರೀ ಸತ್ಯಧರ್ಮ ತೀರ್ಥರೆಂಬ ಭ್ರಮರಕ್ಕೆ ತೃಪ್ತಿಯೇ ಇಲ್ಲ. ಅಷ್ಟು ಆ ಭಾಗವತವನ್ನು ಅನುಭವಿಸಿ ಅವರು ವ್ಯಾಖ್ಯಾನ ಮಾಡಿದ್ದಾರೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.

ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

ಭಾಗವತ ಗ್ರಂಥದ ಪ್ರತಿ ಶಬ್ದವನ್ನೂ ಅನುಭವಿಸಿ ಅದಕ್ಕೆ ವ್ಯಾಖ್ಯಾನ ಮಾಡಿದ್ದಾರೆ ಸತ್ಯಧರ್ಮರು. ಅಷ್ಟೇ ಅಲ್ಲದೆ ಶ್ರೀ ಜಯತೀರ್ಥರ ಶ್ರೀಮನ್ನ್ಯಾಂಯಸುಧಾ ಗ್ರಂಥವನ್ನು ಸ್ವಹಸ್ತದಿಂದ ಅತ್ಯಂತ ಸುಂದರವಾಗಿ ಬರೆದಿದ್ದಾರೆ. ಒಂದು ಪ್ರತಿ ಶ್ರೀಮಠದಲ್ಲಿ ಮತ್ತೊಂದು ಪ್ರತಿ ಮೈಸೂರು ಅರಮನೆಯಲ್ಲಿ ಹಾಗೂ ಮಗದೊಂದು ಪ್ರತಿಯನ್ನು ತಮ್ಮ ಪೂರ್ವಾಶ್ರಮದ ಮನೆತನದವರಿಗೆ ನೀಡಿದ್ದಾರೆ.

Uttaradi Muth ಹೀಗೆ ಗ್ರಂಥಲೇಖನ, ವ್ಯಾಖ್ಯಾನ ಮತ್ತು ಪಾಠ ಪ್ರವಚನಗಳ ಮೂಲಕ ಶ್ರೀಮದಾಚಾರ್ಯರ ವಿಶೇಷ ಸೇವೆ ಮಾಡಿದವರು ಶ್ರೀ ಸತ್ಯಧರ್ಮ ತೀರ್ಥರು ಎಂದರು.

ಎಲ್ಲಿ ಕೃಷ್ಣನೋ ಅಲ್ಲಿ ಜಯ :
ಎಲ್ಲಿ ಧರ್ಮ ಇರುತ್ತದೆಯೋ ಅಲ್ಲಿ ಭಗವಂತನಿರುತ್ತಾನೆ. ಅಂತೆಯೇ ಪಾಂಡವರೊAದಿಗೆ ಶ್ರೀಕೃಷ್ಣನಿದ್ದ. ಹೀಗಾಗಿ ಪಾಂಡವರಿಗೆ ಜಯವಾಗಿತ್ತು. ಕೌರವರ ಸೇನೆ ಎಂದರೆ ಮಹಾ ಸಮುದ್ರವಿದ್ದಂತೆ. ಭೀಷ್ಮ, ದ್ರೋಣ, ಕರ್ಣರಂತಹ ಮಹಾ ಮಹಾ ಪರಾಕ್ರಮಿಗಳಿದ್ದರು.

ಬೃಹತ್ ಸೈನ್ಯ, ಆನೆ, ಕುದುರೆಗಳ ಬಲವಿತ್ತು. ಅವರನ್ನು ಸೋಲಿಸಲು ಕೇವಲ ಪಾಂಡವರಿಂದ ಅಸಾಧ್ಯವಾಗಿತ್ತು. ಆದರೂ ಪಾಂಡವರಿಗೆ ಜಯವಾಗಿದ್ದು ಶ್ರೀಕೃಷ್ಣ ಅವರೊಂದಿಗೆ ಇದ್ದ ಕಾರಣದಿಂದ. ಸಾವಿರಾರು ಜನರು ಯುದ್ಧ ಮಾಡುತ್ತಿದ್ದರೂ ಅರ್ಜುನನೊಬ್ಬನೇ ಉತ್ತರ ಕೊಡುತ್ತಿದ್ದ. ಅವನಿಗೆ ಆ ವೇಗದ ಗತಿ ಬಂದಿದ್ದೂ ಕೃಷ್ಣನ ಅನುಗ್ರಹದಿಂದ ಎಂದರು.

ಇದಕ್ಕೂ ಪೂರ್ವದಲ್ಲಿ ವೇಣುಗೋಪಾಲಾಚಾರ್ಯ ಮತ್ತು ಪೂಜಾ ಕಾಲದಲ್ಲಿ ಶ್ರೀಕಾಂತಾಚಾರ್ಯ ಮಾಳೂರು ಪ್ರವಚನ ನೀಡಿದರು. ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಪಂಡಿತರಾದ ಬಾಳಗಾರು ಜಯತೀರ್ಥಾಚಾರ್ಯ, ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮೊದಲಾದವರಿದ್ದರು. ಪ್ರಕಾಶಾಚಾರ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...