Tuesday, April 29, 2025
Tuesday, April 29, 2025

Thirthahalli to Haralimata Road ತೀರ್ಥಹಳ್ಳಿಯ ಕುರುವಳಿ ಟು ಹರಳಿಮಠ ರಸ್ತೆ ಕೆಸರುಮಯ: ಓಡಾಟಕ್ಕೆ ದುಸ್ಸಾಹಸ

Date:

Thirthahalli to Haralimata Road : ಓಡಾಟಕ್ಕೆ ದುಸ್ಸಾಹಸ ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುವಳ್ಳಿಯಿಂದ ಹರಳಿಮಠ ಹೊಗುವ ರಸ್ತೆಯ ಕೊಮನೆ ಬಸ್ ನಿಲ್ದಾಣ ಎದುರು ಅರಣ್ಯ ಇಲಾಖೆ ಅಧಿಕಾರಿಗಳ ಬೆಜಾವಬ್ದಾರಿಯಿಂದ ರಸ್ತೆ ಸಂಪೂರ್ಣ ಕೆಸರು ಮಯವಾಗಿದೆ.

ಈ ಭಾಗದ ಅನೇಕ ಸಾರ್ವಜನಿಕರು, ರೈತರು, ಶಾಲಾ ಮಕ್ಕಳು, ವಯೋವೃದ್ದರು ಈ ಮಾರ್ಗದಲ್ಲಿ ಪಟ್ಟಣಕ್ಕೆ ನಿತ್ಯ ಹೋಗಲು ಬರಲು ಇರುವುದು ಇದೊಂದೆ ಮಾರ್ಗವಾಗಿದ್ದು ಈಗಾಗಲೇ ಈ ಟಾರ್ ರಸ್ತೆ ಈಗ ಕೆಸರಿನ ರಸ್ತೆಯಾಗಿ ಮಾರ್ಪಟ್ಟಿದೆ. ಎರಡು ಮೂರುಜನ ಬೈಕ್ ಸವಾರರು ರಸ್ತೆಯಲ್ಲಿ ಬಿದ್ದ ಘಟನೆ ಕೂಡ ನಡೆದಿದೆ.

ಟಾರ್ ರಸ್ತೆ ಈಗ ಕೆಸರು ರಸ್ತೆಯಾದರು ಕೂಡ ಸಾರ್ವಜನಿಕರು ಕೆಸರಲ್ಲೆ ಓಡಾಡಿದರು ಕೂಡ
ಸಂಬಂಧ ಪಟ್ಟ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ ಎಂಬ ಮಾತು ಅ ಭಾಗದ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ದಿನನಿತ್ಯ ನೂರಾರು ಸಾರ್ವಜನಿಕರು, ನೂರಾರು ವಾಹನಗಳು ಸಂಚರಿಸುವ ರಸ್ತೆಯ ಈ ಅವ್ಯವಸ್ಥೆ ಎರಡು ವರ್ಷಗಳಿಂದ ಮುಂದುವರೆಯುತ್ತಿದೆ.

Thirthahalli to Haralimata Road : ಓಡಾಟಕ್ಕೆ ದುಸ್ಸಾಹಸ ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ಗ್ರಾಮದ ಕೆಸರುಗದ್ದೆ ರಸ್ತೆ ಕಡೆ ಗಮನಹರಿಸಿ ಸಾರ್ವಜನಿಕರಿಗೆ ಆಗುವ ಸಮಸ್ಯೆಯನ್ನು ಬಗೆಹರಿಸಿ ವಾಹನ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಬಿಜೆಪಿ ಮುಖಂಡರಾದ ಮುನ್ನೂರು ರಾಮಚಂದ್ರ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...