Sunday, August 2, 2026
Sunday, August 2, 2026

IMA Shivamogga ತಾಯಿ ಜನ್ಮದಾತೆ ವೈದ್ಯ ಮರು ಜನ್ಮದಾತ- ಡಾ.ನಾ.ಸೋಮೇಶ್ವರ್

Date:

IMA Shivamogga ವೈದ್ಯನೆಂದರೆ ಜ್ಞಾನ , ಧೈರ್ಯ , ತಾಳ್ಮೆ , ಜೀವಾಪಾಯ ಲೆಕ್ಕಿಸದ , ಸದಾ ಒತ್ತಡದಲ್ಲಿದ್ದರೂ , ಸಾಂತ್ವಾನವನ್ನು ನೀಡುವ ಅಲ್ಪಾಯುಷಿ . ಜನ್ಮಕೊಡುವವಳು ತಾಯಿ , ಆದರೆ ಮರುಜನ್ಮ ಕೊಡುವವನು ವೈದ್ಯ . ವೈದ್ಯ ಸಮೂಹವನ್ನು ಜನರು ಗೌರವದಿಂದ ಕಾಣಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ , ಥಟ್ ಅಂತ ಹೇಳಿ ಕಾರ್ಯಕ್ರಮ ಖ್ಯಾತಿಯ ಡಾ . ನಾ . ಸೋಮೇಶ್ವರ್ ಅವರು ಹೇಳಿದರು.

ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯ ರಾಷ್ಟೀಯ ವೈದ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ , ವೈದ್ಯರ ದಿನಾಚರಣೆಯ ಇತಿಹಾಸ , ಬೇರೆ ರಾಷ್ಟ್ರಗಳಲ್ಲಿ ಆಚರಿಸುವ ರೀತಿ , ಸಮಾಜ ಈ ದಿನವನ್ನು ಆಚರಿಸಬೇಕಾದ ಅಗತ್ಯತೆ ಹಾಗು ಮಾನದಂಡಗಳ ಬಗ್ಗೆ ‘ ಕಾಯಕ ಯೋಗಿಗಳು ‘ ಎಂಬ ವಿಷಯದಡಿಯಲ್ಲಿ ವಿಸ್ತಾರವಾಗಿ ವಿಶ್ಲೇಷಿಸಿದರು.

ಅಧ್ಯಕ್ಷರಾದ ಡಾ . ಅರುಣ್ .ಎಂ .ಎಸ್ ಅವರು ಎಷ್ಟೋ ವೈದ್ಯರು ತಮ್ಮ ಕುಟುಂಬಕ್ಕಿಂತ ರೋಗಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಒಂದು ಎಮರ್ಜೆನ್ಸಿ ಬಂದಾಗ ಹಗಲು, ರಾತ್ರಿ ಎನ್ನದೆ ಓಡೋಡಿ ಬಂದು ರೋಗಿಗಳ ಸೇವೆ ಮಾಡುತ್ತಾರೆ. ಪ್ರತಿಯೊಬ್ಬರ ಬದುಕಿನಲ್ಲಿ ತಾವು ಆರಾಧಿಸುವ ಒಬ್ಬ ವೈದ್ಯರು ಇದ್ದೇ ಇರುತ್ತದೆ. ಇಂತಹ ಕ್ಷಣಗಳನ್ನು ನೆನಪಿನಲ್ಲಿ ಮರುಕಳಿಸುವ ಸುದಿನವಾಗಿ ರೋಗಿಗಳು ವೈದ್ಯರನ್ನು ಈ ದಿನ ಭೇಟಿ ಮಾಡಿ ಅಭಿನಂದಿಸಿದರೆ ಅದಕ್ಕಿಂತ ಬೇರೇನೂ ಉಡುಗರೆ ವೈದ್ಯರಿಗೆ ಬೇಕಿಲ್ಲ ಎಂದು ನುಡಿದರು.

IMA Shivamogga ಉಪಾಧ್ಯಕ್ಷರಾದ ಡಾ. ರವೀಶ್ ಅವರು ಮಾತನಾಡಿ ,ಭಾರತದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಸಲ್ಲಿಸಿರುವ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ ಬಿಧಾನ್ ಚಂದ್ರ ರಾಯ್ ಅವರ ಗೌರವಾರ್ಥವಾಗಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.

ಮೊದಲ ಬಾರಿಗೆ ರಾಷ್ಟ್ರೀಯ ವೈದ್ಯರ ದಿನವನ್ನು ಜುಲೈ 1991ರಲ್ಲಿ ಆಚರಿಸಲಾಯಿತು. ಡಾ ಬಿಧಾನ್ ಚಂದ್ರ ರಾಯ್ ಅವರು 1 ಜುಲೈ 1882 ರಂದು ಜನಿಸಿದ್ದರು. ಇವರು ವಿಧಿವಶರಾಗಿದ್ದು 1 ಜುಲೈ 1962ರಂದು. ಹೀಗಾಗಿ, ಇವರ ಸ್ಮರಣಾರ್ಥ ಜುಲೈ 1 ನ್ನು ವೈದ್ಯರ ದಿನವಾಗಿ ಆಚರಣೆ ಮಾಡಲಾಗುತ್ತದೆ ಎಂದು ದಿನದ ಇತಿಹಾಸ ಹಾಗು ಪ್ರಾಮುಖ್ಯತೆ ಬಗ್ಗೆ ಬೆಳಕು ಚೆಲ್ಲಿದರು .

ಶಿವಮೊಗ್ಗದ ಐಎಂಎ ಸದಸ್ಯರಾದ ಡಾ . ನಾಗೇಂದ್ರ ಹಾಗು ಡಾ . ಲತಾ ನಾಗೇಂದ್ರ , ಡಾ . ಅಶೋಕ್ ಕುಮಾರ್ , ಡಾ . ಮಹೇಶ್ , ಡಾ . ನರೇಂದ್ರ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಹಾಗೆಯೇ ಸಮಾಜ ಸೇವೆಗಾಗಿ ವೈದ್ಯ ಸಮೂಹದಿಂದ ಊರಿನ ಪ್ರಮುಖರಾದ ರೋಟರಿಯನ್ ಶ್ರೀ . ಅಶ್ವತ್ನಾರಾಯಣ್ ಶೆಟ್ಟಿ ಅವರಿಗೆ ಗೌರವ ಸಮರ್ಪಣೆ ನೆರವೇರಿತು . ಐಎಂಎ ಪತ್ರಿಕೆಯಾದ ಐಎಂಎ – ಪಲ್ಸ್ ಅನ್ನು ಈ ಸಂದರ್ಭದಲ್ಲಿ ಸಂಪಾದಕಿ ಡಾ . ಶುಭ್ರತ ಅವರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಕಾರ್ಯದರ್ಶಿ ಡಾ. ರಕ್ಷಾ ರಾವ್ ಸ್ವಾಗತಿಸಿದರು ಹಾಗು ಖಜಾಂಚಿ ಡಾ . ಶಶಿಧರ್ ವಂದನಾರ್ಪಣೆ ಮಾಡಿದರು . 150 ಕ್ಕೂ ಹೆಚ್ಚು ಹಿರಿಯ ಕಿರಿಯ ವೈದ್ಯರು ಹಾಗು ಕುಟುಂಬದವರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...