Sunday, August 2, 2026
Sunday, August 2, 2026

Homestays in Chikmagalur ಹೋಂ ಸ್ಟೇ ಪರವಾನಗಿಯನ್ನ ಹಿಂದಿನ ಪದ್ಧತಿಯಂತೇ ಮುಂದುವರೆಸಲುಮನವಿ

Date:

Homestays in Chikmagalur ಚಿಕ್ಕಮಗಳೂರು, ಹೋಂ ಸ್ಟೇ ಕಟ್ಟಡಗಳ ಪರವಾನಗಿಯನ್ನು ಹಿಂದಿನ ಪದ್ಧತಿಯ ಪ್ರಕಾರ ಮಾಲೀಕರಿಂದ ನಮೂನೆ 11 ಬಿ ಯನ್ನು ತೆಗೆದುಕೊಂಡು ಹೋಂ ಸ್ಟೇ ಪರವಾನಗಿಯನ್ನು ನವೀಕರಿಸಿಕೊಡಬೇಕು ಎಂದು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಈ ವೇಳೆ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಎನ್.ಆರ್.ತೇಜಸ್ವಿ ಹೋಂಸ್ಟೇ ಕಟ್ಟಡಗಳಿಗೆ ಪಂಚಾ ಯತಿ ವತಿಯಿದ ತೆರಿಗೆ ಇಡೀ ಜಿಲ್ಲೆಯಲ್ಲಿ ಎಲ್ಲಾ ಹೋಂಸ್ಟೇ ಕಟ್ಟಡಗಳಿಗೆ ಏಕರೂಪ ತೆರಿಗೆಯಾಗಿ ವಿಧಿಸಬೇಕು, ಪರವಾನಗಿಯ ನವೀಕರಣದ ವಿಧಾನವನ್ನು ಸರಳಗೊಳಿಸಬೇಕು ಎಂದು ಒತ್ತಾಯಿಸಿದರು.

ಹೋಂಸ್ಟೇಗಳಿಗೆ ಮೂಲ ಸೌಕರ್ಯಗಳಾದ ಉತ್ತಮ ರಸ್ತೆಗಳು, ತಡೆರಹಿತ ವಿದ್ಯುಚ್ಚಕ್ತಿ ಹಾಗೂ ನೀರಿನ ಸರಬರಾಜು ಒದಗಿಸಬೇಕು. ವ್ಯವಸಾಯೇತರ ಚಟುವಟಿಕೆ ಎಂದು ಪರಿಗಣಿಸಿ ಮತ್ತು ಹೋಂಸ್ಟೇಗಳನ್ನು ಅನ್ಯಕ್ರಾಂತ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.

Homestays in Chikmagalur ಲಕ್ಜುರಿ ಟಾಕ್ಸ್ನಿಂದ ವಿನಾಯಿತಿ ಮತ್ತು ವಿದ್ಯುಚ್ಚಕ್ತಿ ಬಿಲ್ಲನ್ನು ಗೃಹ ಬಳಕೆ ದರದಲ್ಲಿ ಕಟ್ಟಬೇಕೆಂದು ಯೋಜನೆ ಯುನ್ನು ರೂಪಿಸಲಾಗಿರುತ್ತದೆ. ಆದ್ದರಿಂದ, ಸರ್ಕಾರದ ಸುತ್ತೋಲೆಯ ಪ್ರಕಾರ ಹೋಂಸ್ಟೇ ಘಟಕವನ್ನು ವ್ಯವಸಾಯೇತರ ಚಟುವಟಿಕೆ ಎಂದು ಪರಿಗಣಿಸಬೇಕು ಎಂದು ಹೇಳಿದರು.

ಈ ಸುತ್ತೋಲೆಗಳ ಪ್ರಕಾರ ಹೋಂಸ್ಟೇ ಮಾಲೀಕರು ಅನೇಕ ವರ್ಷಗಳಿಂದ ನಡೆಸುತ್ತಿದೆ. ಸದರಿ ಪರವಾನಗಿ ಗಳು ಈಗಾಗಲೇ ನಾಲ್ಕು ಬಾರಿ ನವೀಕರಣವಾಗಿತ್ತದೆ. ಆದರೆ ಕೆಲವು ಹೋಂಸ್ಟೇಗಳ ಪರವಾನಗಿ ನವೀಕರಣಕ್ಕೆ ಸಲ್ಲಿಸಿದ್ದು ಜಿಲ್ಲಾಧಿಕಾರಿ ಕಚೇರಿಯು ಪರವಾನಗಿಗಳಣ್ನು ನವೀಕರಿಸಬೇಕಾದರೆ ಹೋಂಸ್ಟೇ ಜಾಗವನ್ನು ಕಡ್ಡಾಯ ವಾಗಿ ಅನ್ಯಕ್ರಾಂತ ಮಾಡಬೇಕು ಸೂಚಿಸಿರುವ ಪರಿಣಾಮ ಸಮಸ್ಯೆಯಾಗಿದೆ ಎಂದರು.

ಆದ್ದರಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದೇನೆಂದರೆ ಹೋಂಸ್ಟೇ ಕಟ್ಟಡಗಳ ಪರವಾನಗಿಯನ್ನು ಹಿಂದಿನ ಪದ್ಧತಿಯ ಪ್ರಕಾರ ಮಾಲೀಕರಿಂದ ನಮೂನೆ 11ಬಿ ಯನ್ನು ತೆಗೆದುಕೊಂಡು ಪರವಾನಗಿಯನ್ನು ನವೀಕರಿಸಿಕೊಡ ಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲಲಿ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಪಿ.ಪ್ರವೀಣ್, ಕಾರ್ಯದರ್ಶಿ ಅನ್ಸರ್ ಜೋಹುರ್, ಮುಖ್ಯಸ್ಥರಾದ ಹೊಲದಗದ್ದೆ ಗಿರೀಶ್, ಅಕ್ಷತ ಪ್ರಸನ್ನ, ಔರಂಗ್, ಸಚ್ಚಿನ್‌ರಾಜ್, ವರುಣ್, ವೇಣು, ಸಂದೇಶಗೌಡ, ಯು.ಪಿ.ಮನು, ತೇಜಸ್, ಜಗದೀಶ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...