Saturday, September 28, 2024
Saturday, September 28, 2024

Karnataka Assembly Election Results 2023 ಬಿಜೆಪಿ ಪಕ್ಷಕ್ಕೀಗ ಆತ್ಮಾವಲೋಕನಕ್ಕೆ ಸಮಯ

Date:

Karnataka Assembly Election Results 2023 ಪ್ರತಿ ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಕಳೆದ ವಿಧಾನಸಭಾ ಚುನಾವಣೆಯ ಲ್ಲಿ ಬಿಜೆಪಿ ಪಕ್ಷ ಗೆಲುವನ್ನು ಸಾಧಿಸಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ.

ಪ್ರತಿ ಚುನಾವಣೆಯಲ್ಲಿಯೂ ಹೊಸ ಹೊಸ ಪ್ರಯೋಗಗಳ ಮುಖಾಂತರ ಟ್ರೆಂಡ್ ಸೃಷ್ಟಿಸುತ್ತಿದ್ದಂತಹ ಬಿಜೆಪಿ ಈ ಬಾರಿ ವಿಧಾನಸಭಾ ಚುನಾವಣೆಗೆ ಬಳಸಿದ ಕೆಲವು ಪ್ರಯೋಗಗಳು ಕೈ ಹಿಡಿದಿಲ್ಲ.

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 75 ಹೊಸ ಮುಖಗಳಿಗೆ ಅವಕಾಶಗಳನ್ನು ನೀಡಿತ್ತು. ಈ ಮುಖಾಂತರ ಹೊಸ ತಂಡವನ್ನು ರೂಪಿಸಲು ಒಂದು ಸಾಹಸಕ್ಕೆ ಕೈ ಹಾಕಿತ್ತು. ಆದರೆ ಈ ಪೈಕಿಯಲ್ಲಿ 13 ಜನ ಮಾತ್ರ ಗೆಲುವನ್ನು ಸಾಧಿಸಿದ್ದಾರೆ.

ಶ್ರೀ. ಕೆ ಎಸ್ ಈಶ್ವರಪ್ಪ ಪ್ರತಿನಿಧಿಸುತ್ತಿದ್ದಂತಹ ಶಿವಮೊಗ್ಗ ಕ್ಷೇತ್ರದಿಂದ ಚೆನ್ನಬಸಪ್ಪ ಅವರನ್ನು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಪ್ರಯೋಗ ಫಲ ಲಭಿಸಿದೆ. ಆದರೆ ಬಹುಪಾಲು ಹೊಸ ಮುಖಗಳನ್ನು ಪರಿಚಯಿಸಿದ್ದರಿಂದ ಪಕ್ಷಕ್ಕೆ ಭಾರಿ ಹಿನ್ನಡೆ ಉಂಟು ಮಾಡಿದೆ.

ಇನ್ನೊಂದು ಕಡೆ ಕರಾವಳಿಯಲ್ಲಿ ಬಿಜೆಪಿಯ ಸಂಘಟನಾತ್ಮಕ ಕೇಂದ್ರವೆಂದೇ ಪ್ರಸಿದ್ಧಿ ಪಡೆದ ಪುತ್ತೂರಿನ ಕ್ಷೇತ್ರದಲ್ಲಿ ಕಮಲ ಪಕ್ಷ ಮುದುಡಿದೆ.

ಈ ಹಿಂದೆ ರಾಜಕೀಯ ಪಕ್ಷವು ಸಾಮಾಜಿಕ ಜಾಲತಾಣವನ್ನು ಗರಿಷ್ಠ ಪ್ರಮಾಣದಲ್ಲಿ ಹೇಗೆಲ್ಲಾ ಬಳಸಬಹುದು ಎಂಬುದಕ್ಕೆ ಬಿಜೆಪಿ ಮಾದರಿ ಎಂಬಂತಿತ್ತು. ರಾಜ್ಯದಲ್ಲಿ ಹಿಂದಿನ ಚುನಾವಣೆಗಳಲ್ಲಿಯೂ ಅದನ್ನು ಸಾಬೀತುಪಡಿಸಿತ್ತು. ಈ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣವನ್ನು ಕಾಂಗ್ರೆಸ್ ಲೀಲಾಜಾಲವಾಗಿ ಬಳಸಿಕೊಂಡು ಪಕ್ಷದ ಪರ ಅಲೆ ಸೃಷ್ಟಿಸಿಕೊಳ್ಳಲು ಯಶಸ್ವಿಯಾಗಿರುವುದು ವಿಶೇಷವೇ ಸರಿ.

ಪೇ ಸಿಎಂ ಎಂಬ ಅಭಿಯಾನ ಕಾಂಗ್ರೆಸ್ ಆರಂಭಿಸಿ, ನಿರೀಕ್ಷೆಗೂ ಮೀರಿ ಯಶಸ್ಸನ್ನ ಕಂಡಿದೆ.

Karnataka Assembly Election Results 2023 ಮಾಧ್ಯಮಗಳಲ್ಲಿ 40% ಸರ್ಕಾರದ ವಿರುದ್ಧ ಅನೇಕ ಜಾಹೀರಾತುಗಳ ಸೃಷ್ಟಿಯಾಗಿ ದ್ದವು. ಬಿಜೆಪಿ ಸರ್ಕಾರದ ಅನೇಕ ವೈಫಲ್ಯಗಳ ಬಗ್ಗೆ ದಿನನಿತ್ಯವೂ ಹಲವಾರು ಪೋಸ್ಟ್ ಗಳ ಮುಖಾಂತರ ಜನರಿಗೆ ಮನನ ಮಾಡಿಕೊಡುವ ಪ್ರಯತ್ನವನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ನಿರ್ವಹಿಸುತ್ತಲೇ ಬಂತು. ಈ ಎಲ್ಲಾ ಅಂಶಗಳು ನೆಟ್ಟಿಗರ ಮೇಲೆ ಪರಿಣಾಮವನ್ನು ಬೀರಿತು. ಆದ್ದರಿಂದ ಈ ಬಾರಿ ಕಮಲ ರಾಜ್ಯದಲ್ಲಿ ಮುದುಡಿರಬಹುದು ಎಂಬುದು ಕೆಲವರ ಪ್ರಶ್ನೆ… ಬಿಜೆಪಿ ಪಕ್ಷದ ಕೆಲವೊಂದು ಎಡವಟ್ಟುಗಳಿಂದಲೇ ಈ ಬಾರಿ ಗೆಲುವಿನ ಪತಾಕೆ ಹಾರಿಸಲು ಹಿಂದೆಟು ಹಾಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...