Monday, February 2, 2026
Monday, February 2, 2026

Assembly Election ಮುಹೂರ್ತಕ್ಕೆ ಮುನ್ನ ಮತಗಟ್ಟೆಯಲ್ಲಿ ಮತ ನೀಡಿದ ಮದುವಣಿಗ

Date:

Assembly Election ಮತದಾನ ಪ್ರಜಾಪ್ರಭುತ್ವದ ಗಟ್ಟಿಯಾದ ಧ್ವನಿ. ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ನಾವು ಚಲಾಯಿಸು ತ್ತೇವೆ. ಮತದಾನ ಎಂಬುವುದು ಒಂದು ರೀತಿಯ ಹಬ್ಬದ ಹಾಗೆ. ಮತದಾನ ತಪ್ಪದೇ ಮಾಡಿ ಎಂದು ಹಲವಾರು ಸಂಘಟನೆಗಳು ಕರೆ ನೀಡುತ್ತಲೇ ಬಂದಿವೆ. ಆದರೂ ಸಹ ಹಳ್ಳಿಗೆ ಹೋಲಿಸಿದರೆ ನಗರಗಳಲ್ಲಿ ಮತದಾನದ ಪ್ರಮಾಣ ಕಡಿಮೆ.

ಪಟ್ಟಣದಲ್ಲಿರುವವರು ಅಕ್ಷರಸ್ಥ ರಾಗಿದ್ದರೂ ಸಹ ಮತದಾನವನ್ನು ಮಾಡಲು ಮತಗಟ್ಟೆಗಳಿಗೆ ಹೋಗೋದಿಲ್ಲ. ಹೀಗಿರಬೇಕಾದರೆ, ತನ್ನ ಮದುವೆ ಇಂದೇ ಇರುವ ಒಬ್ಬ ವರ ಮತದಾನ ಚಲಾವಣೆ ಮಾಡುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ. ಈ ರೀತಿ ಮತದಾನದ ಪ್ರಮಾಣ ಹೆಚ್ಚಿಸಬೇಕು ಎಂಬ ಚುನಾವಣಾ ಆಯೋಗದ ಪ್ರಯತ್ನಕ್ಕೆ ಸಾತ್ ನೀಡಿದ್ದಾರೆ.

Assembly Election ಈ ಅಪರೂಪದ ಘಟನೆ ಸಾಗರದ ಶಿವಪ್ಪ ನಗರದ ಬಡಾವಣೆಯ ನಾರಾಯಣ್ ಅವರ ಪುತ್ರ ವಿನೋದ್ ಕುಮಾರ್ ಎಂಬುವರು ಮದುವೆಯ ವರನಾಗಿದ್ದಾರೆ. ಮದುವೆಗೆ ಹೊರಡುವ ಮುನ್ನ ಮತವನ್ನು ಚಲಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ.

ವಿನೋದ್ ಅವರು ರಿಪ್ಪನ್ ಪೇಟೆಯ ಪಲ್ಲವಿ ಎಂಬುವರನ್ನು ಇಂದು ಮದುವೆಯಾಗುತ್ತಿದ್ದಾರೆ. ಇವರ ವಿವಾಹದ ದಿನಾಂಕ ಚುನಾವಣೆಯ ದಿನಾಂಕಕ್ಕೂ ಮುನ್ನವೇ ನಿರ್ಧಾರವಾಗಿತ್ತು. ತನ್ನ ಮದುವೆಯಿಂದಾಗಿ ತನ್ನ ಪ್ರಜಾಪ್ರಭುತ್ವದ ಹಕ್ಕು ಕೆಡಬಾರದು ಎಂದು ತನ್ನ ಕುಟುಂಬಸ್ಥರೊಂದಿಗೆ ವಿವಾಹದ ದಿನ ಬೆಳಿಗ್ಗೆ ಮತ ಚಲಾವಣೆ ಮಾಡಿದ್ದಾರೆ.

ಈ ಮೂಲಕ ನಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ನಾವು ನಿಷ್ಠೆಯಿಂದ ಪಾಲಿಸಬೇಕು ಎಂಬುದಕ್ಕೆ ಇವರು ಮಾದರಿಯಾಗಿದ್ದಾರೆ.

-ರಚನಾ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...