Thursday, March 19, 2026
Thursday, March 19, 2026

Chamber Of Commerce Shivamogga ಸಂಸ್ಕೃತ ಧ್ವಜವನ್ನು ಹಿಮಾಲಯದೆತ್ತರ ಹಾರಿಸುವುದು ಸಂತೋಷದ ಸಂಗತಿ- ಎನ್.ಗೋಪಿನಾಥ್

Date:

Chamber Of Commerce Shivamogga ನಮ್ಮ ಹೆಮ್ಮೆಯ ಚಾರಣಿಗರು ದೇವಭೂಮಿಯಾದ ಹಿಮಾಲಯದ ಶ್ರೇಣಿಯಲ್ಲಿ ದೇವಭಾಷೆಯಾದ ಸಂಸ್ಕೃತ ಪಸರಿಸಲು ಹಾಗೂ ಸಂಸ್ಕೃತ ಧ್ವಜವನ್ನು ಹಿಮಾಲಯದೆತ್ತರ ಶ್ರೇಣಿಯಲ್ಲಿ ಹಾರಿಸಲು ಹೊರಟಿರುವುದು ಸಂತೋಷದ ಸಂಗತಿ ಎಂದು ನನ್ನ ಕನಸಿನ ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ಗೀರ್ವಾಣ ಭಾರತಿ ಘಟಕ, ಶ್ರೀ ಆದಿಚುಂಚನಗಿರಿ, ಮಂಡ್ಯ ಜಿಲ್ಲೆ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ತರುಣೋದಯ ಘಟಕ, ಶಿವಮೊಗ್ಗ ಜಿಲ್ಲೆ, ಸಂಸ್ಕೃತ ಭಾರತಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್ ಮಾತನಾಡಿ, ಚಾರಣದ ಸಮಯದಲ್ಲಿ ಚಾರಣಿಗರಿಗೆ ಹಲವು ಉತ್ತಮ ಮಾಹಿತಿ ನೀಡಿದರು.

ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಅಧ್ಯಕ್ಷ ವಾಗೀಶ, ಚಾರಣಿಗರಿಗೆ ಶುಭಕೋರುತ್ತಾ ಹಿಮಾಲಯ ಚಾರಣದ ಸಮಯದಲ್ಲಿ ಪ್ರಕೃತಿಯ ವಿಸ್ಮಯಕರ ಸಂಧರ್ಭಗಳ ಬಗ್ಗೆ ಮಾಹಿತಿ ಕೊಟ್ಟರು.

ಐಎಂಎ ಅಧ್ಯಕ್ಷ ಡಾ. ಅರುಣ್ ಎರಡು ದಿನಗಳ ಹಿಂದೆ ಲೇಹ್ ಮತ್ತು ಲಡಾಕ್ ಚಾರಣ ಮಾಡಿದ್ದಾರೆ. ಚಾರಣದ ಸಮಯದಲ್ಲಿ ಚಾರಣ ಮಾಡುವವರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಹೇಗೆ ಎದುರಿಸಬೇಕೆಂದು ಉತ್ತಮ ಮಾಹಿತಿ ನೀಡಿದರು.

Chamber Of Commerce Shivamogga ದಿಲೀಪ್ ನಾಡಿಗ್ ಅವರಿಂದ ಕುಲು ಮನಾಲಿಯ ಮಣಿಕರಣ್ ಸ್ಥಳದ ಬಗ್ಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಸಂಸ್ಕೃತ ಭಾಷಿಗರ ತಂಡದೊಂದಿಗೆ ಚಾರಣವನ್ನು ಏರ್ಪಡಿಸಿರುವ ಅ.ನಾ.ವಿಜೇಂದ್ರ ರಾವ್ ಅವರು ಹಿಮಾಲಯ ಪ್ರದೇಶಗಳಲ್ಲಿ ಚಾರಣದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಕಾರ್ಯಕ್ರಮದ ವಿವರಗಳನ್ನು ನೀಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಕೃಪಾಶೀರ್ವಾದದಿಂದ ಹಿಮಾಲಯದ ಉನ್ನತ ಶಿಖರ ಚಂದ್ರಕಣಿಗೆ ರಾಜಸ್ಥಾನ, ಕರ್ನಾಟಕ ಹಾಗೂ ವಿವಿಧ ರಾಜ್ಯಗಳಿಂದ ನಲವತ್ತು ಜನ ಸಂಸ್ಕೃತ ಸಂಭಾಷಣಿಗರ ತಂಡ ಹಿಮಾಲಯ ಚಾರಣಕ್ಕೆ ಹೊರಟಿದ್ದು, ಶಿವಮೊಗ್ಗದಲ್ಲಿ ಬೀಳ್ಕೊಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...