Wednesday, April 23, 2025
Wednesday, April 23, 2025

Interesting Election News ಎಲೆಕ್ಷನ್ ಸುದ್ದಿ ಸ್ವಾರಸ್ಯ

Date:

Interesting Election News *ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಸಭೆ ನಡೆಯಿತು. ಈ ಸಭೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದರು. ವೇದಿಕೆ ಮೇಲೆ ನರೇಂದ್ರ ಮೋದಿಯವರು ಬರುತ್ತಿದ್ದ ಹಾಗೆಯೇ ಬಿಎಸ್ ವೈ ಹಾಗೂ ಈಶ್ವರಪ್ಪ ಅವರ ಕೈ ಹಿಡಿದು ಮೇಲೆತ್ತಿರುವ ದೃಶ್ಯ ಕಂಡು ಬಂತು.

*ಗೋಪಾಲಕೃಷ್ಣ ಬೇಳೂರು ಪರವಾಗಿಯೇ ಇದ್ದೇನೆ ಎಂದು ಕಾಗೋಡು ತಿಮ್ಮಪ್ಪ ಅವರು ಹೇಳಿದ್ದಾರೆ. ಬೇಳೂರು ಹಿಂದೆಯೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ನ ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಆದ್ದರಿಂದ ನಾನು ಗೋಪಾಲಕೃಷ್ಣ ಬೇಳೂರು ಅವರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ.

*ಜನಬಾರದೇ ಬಹಿರಂಗ ಸಭೆ ರದ್ದಾಗಿರುವ ಘಟನೆ ಆನವಟ್ಟಿಯಲ್ಲಿ ನಡೆದಿದೆ. ಆನೆಮಟ್ಟಿ ಅಭ್ಯರ್ಥಿ ಬಿ ಜಿ ಪರಶುರಾಮ ಅವರು ಶೋ ದಲ್ಲಿ ಕುಸಿದು ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ರೋಡ್ ಶೋಗೆ ಬಾರದೇ ಇರುವುದರಿಂದ ಬಹಿರಂಗ ಸಭೆ ರದ್ದಾಗಿದೆ. ಇದರಿಂದ ಸಭೆ ನಡೆಯುವ ಪ್ರದೇಶದಲ್ಲಿ ಕುರ್ಚಿಗಳು, ಶಾಮಿಯಾನ ಖಾಲಿಯಾಗಿದ್ದವು ಖಾಲಿ ಆದ ದೃಶ್ಯ ಕಂಡು ಬಂದಿದೆ.

*ಬಿ.ಕೆ ಸಂಗಮೇಶ್ ಅವರು ಈ ಬಾರಿ ಚುನಾವಣೆಯಲ್ಲಿ ಗೆದ್ದು, ಸಚಿವರಾಗುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗೆಲ್ಲುವುದು ಖಚಿತ ಎಂದು ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಸಿಎಂ ಖಾದೀರ್ ಸಾಬ್ ಅವರು ಭವಿಷ್ಯ ನುಡಿದಿದ್ದಾರೆ.

Interesting Election News *ಹೊಸನಗರ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಮತದಾನ ಬಹಿಷ್ಕಾರ ಮಾಡಲಾಗುತ್ತದೆ ಎಂದು ಕುಂಭತ್ತಿ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...