Tuesday, August 4, 2026
Tuesday, August 4, 2026

Karnataka Neuroscience Academy ಏಪ್ರಿಲ್ 28 ರಂದು ಶಿವಮೊಗ್ಗದಲ್ಲಿ ನರರೋಗ ವಿಜ್ಞಾನ ತಜ್ಞರ ವಾರ್ಷಿಕ ಸಮಾವೇಶ ಉದ್ಘಾಟನೆ

Date:

Karnataka Neuroscience Academy ಕರ್ನಾಟಕ ನ್ಯುರೋ ಸೈನ್ಸ್ ಅಕಾಡೆಮಿ ವತಿಯಿಂದ 12ನೇ ವಾರ್ಷಿಕ ವೈಜ್ಞಾನಿಕ ಸಮ್ಮೇಳನವನ್ನು ಏ.28,29,30ರಂದು ಶಿವಮೊಗ್ಗದ ಸುಬ್ಬಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಮಟ್ಟದ ಈ ಸಮ್ಮೇಳನದ ಜವಾಬ್ದಾರಿ ಹಾಗೂ ಆತಿಥ್ಯವನ್ನು ಶಿವಮೊಗ್ಗದ ಸಹ್ಯಾದ್ರಿ, ನ್ಯೂರೋ ಸೈಕ್ಯಾಟರಿ ಅಸೋಸಿಯೇಷನ್ ವಹಿಸಲಿದೆ ಎಂದು ಸಮ್ಮೇಳನದ ಆಯೋಜಕ ಡಾ.ಎ. ಶಿವರಾಮಕೃಷ್ಣ ಆರೂರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಏ.28 ಮತ್ತು 29ರಂದು ಪೂರ್ವಭಾವಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿದೆ.

Karnataka Neuroscience Academy ಹಾಗೆಯೇ ಏ.29ರ ಮಧ್ಯಾಹ್ನ 12 ಗಂಟೆಗೆ ಉದ್ಘಾಟನಾ ನಡೆಯಲಿದ್ದು, ಮುಖ್ಯ ಅತಿಥಿ ಯಾಗಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್ ನ ಬ್ರೈನ್ ರೀಸರ್ಚ್ ಲ್ಯಾಬ್‌ನ ನಿರ್ದೇಶಕ ಡಾ.ವೈ. ನರಹರಿ, ಎಸ್ ಎನ್ ಪಿಎ ಅಧ್ಯಕ್ಷ ಡಾ. ಹರೀಶ್ ದೇಲಂತಬೆಟ್ಟು, ಡಾ. ಕೆ ಆರ್ ಶ್ರೀಧರ ಆಗಮಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕೆಎನ್ಎ ಅಧ್ಯಕ್ಷರಾದ ಡಾ.ಎಸ್.ಪಿ‌‌. ಬಳಿಗಾರ್ ವಹಿಸಲಿದ್ದಾರೆ.

ಈ ಸಮ್ಮೇಳನದಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ನರಶಾಸ್ತ್ರ ತಜ್ಞರು, ನರ ರೋಗ ಶಸ್ತ್ರ ಚಿಕಿತ್ಸಕರು, ಮನು ವೈದ್ಯರು ಹಾಗೂ ಇತರೆ ವೈದ್ಯರು ಆಗಮಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ನ್ಯುರೋ ಸರ್ಜನ್ ಡಾ.ಎಲ್. ಕೃಷ್ಣಮೂರ್ತಿ, ಡಾ. ಬಿ. ಎ. ಚಂದ್ರಮೌಳಿ, ಡಾ ಜಿ ಎಸ್ ಉಮಾಮಹೇಶ್ವರ ರಾವ್ ಅವರನ್ನು ಸನ್ಮಾನಿಸಲಾಗುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...