Monday, April 28, 2025
Monday, April 28, 2025

Shivamogga ಬಾಹುಸಾರ ಕ್ಷತ್ರಿಯ ಸಮಾಜ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯದ ಪ್ರತೀಕ- ಡಾ.ಧನಂಜಯ ಸರ್ಜಿ

Date:

Shivamogga  ಭಾವಸಾರ ಸಮಾಜ ಸ್ವಾಭಿಮಾನದ ಪ್ರತೀಕವಾಗಿದ್ದು, ನಾಡಿಗೆ ಅದರ ಕೊಡುಗೆ ಅಪಾರ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆದ ಶ್ರೀ ಹಿಂಗುಲಾಂಬಿಕಾ ಮಹಿಳಾ ವಿಕಾಸ ವೇದಿಕೆಯ 25ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Shivamogga ಪರಶುರಾಮ ಮಹಾರಾಜರು ಕ್ಷತ್ರಿಯ ವಂಶವನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಾಗ ಉಳಿದ ಇಬ್ಬರು ಯೋಧರೆಂದರೆ, ಬಾಹು ಮತ್ತು ಸಾರ. ಇವರಿಬ್ಬರು ತಮ್ಮ ಪ್ರಾಣ ರಕ್ಷಣೆಗಾಗಿ ಹಿಂಗುಲಾಂಬಿಕಾ ದೇವಿಯ ಆಶ್ರಯ ಪಡೆದ ಇವರಿಂದ ನಂತರ ಕ್ಷತ್ರಿಯ ವಂಶ ವೃದ್ಧಿಯಾಯಿತು ಎಂಬುದು ಇತಿಹಾಸಗಳಿಂದ ತಿಳಿದು ಬರುತ್ತದೆ.

ನಂತರ ಬಟ್ಟೆ ಹೊಲಿಯುವುದು, ಮತ್ತು ಬಟ್ಟೆ ವ್ಯಾಪಾರ ಮಾಡುವುದು ಬಹುಮುಖ್ಯ ಕಸುಬಾಗಿಸಿಕೊಂಡು ಅತ್ಯಂತ ಸ್ವಾಭಿಮಾನ ಹಾಗೂ ಆತ್ಮಸ್ಥೆರ್ಯದೊಂದಿಗೆ ಅಭಿವೃದ್ಧಿ ಹೊಂದುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸಮಾಜದ ಮಹಿಳಾ ಬಂಧುಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮನ್ವಯತೆಯೊಂದಿಗೆ ಸಮರ್ಥವಾಗಿ ಮುನ್ನಡೆಸಿಕೊಂಡು ಒಗ್ಗಟ್ಟಿನೊಂದಿಗೆ ಸಂಸ್ಥೆ ಬೆಳೆಯುತ್ತಿರುವುದು ಶ್ಲಾಘನೀಯ ಎಂದರು.

ಈ ಬೆಳ್ಳಿ ಮಹೋತ್ಸವ ಅಂಗವಾಗಿ ಹೊರ ತರಲಾಗಿರುವ ಸ್ಮರಣ ಸಂಚಿಕೆ ಅತ್ಯಂತ ಸೊಗಸಾಗಿ ಮೂಡಿ ಬಂದಿದೆ. ಅದರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ, ಭಾವಸಾರ ಸಮಾಜದ ಆಚಾರ-ವಿಚಾರ, ಸಂಪ್ರದಾಯ ಆಚರಣೆಗಳ ಬಗ್ಗೆ ಅಭಿವ್ಯಕ್ತಿಸಲಾಗಿದೆ. ಸನಾತನ ಧರ್ಮದ ಆಚರಣೆಗಳಿಗೂ ವೈಜ್ಞಾನಿಕ ಕಾರಣವಿದೆ. ಈ ಆಚರಣೆಗಳ ಬಗ್ಗೆ ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಿರುವುದು ಅಭಿನಂದನೀಯ ಎಂದರು.

ಈ ಸಂದರ್ಭ ಡಾ.ಧನಂಜಯ ಸರ್ಜಿ ಅವರು ಸನ್ಮಾನ ಸ್ವೀಕರಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿದರು.

ಹಿಂಗುಲಾಂಬಿಕಾ ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾದ ವಾಣಿ ಸತೀಶ್ಚಂದ್ರ ಕಮಿತ್‌ಕರ್‌, ಉಪಾಧ್ಯಕ್ಷೆ ರೋಹಿಣಿ ಪುರುಷೋತ್ತಮ್, ಕಾರ್ಯದರ್ಶಿ ಶೀಲಾ ಕೆ. ಮೂರ್ತಿ, ಜಂಟಿ ಕಾರ್ಯದರ್ಶಿ ವೀಣಾ ಗೋಪಾಲಕೃಷ್ಣ ರಂಗದೋಳ್‌ ಅವರೇ, ಖಜಾಂಚಿ ಗೌರಿ ಆತ್ಮ ರಂಗದೊಳ್‌, ಭಾವಸಾರ ವಿಕಾಸ ವೇದಿಕೆಯ ಅಧ್ಯಕ್ಷರಾದ ಗೋಪಾಲಕೃಷ್ಣ ರಂಗದೋಳ್‌, ಭಾವಾಸಾರ ಶ್ರೀರಾಮ ಸೇವಾ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾದ ಓಂಪ್ರಕಾಶ್‌ ತೇಲ್ಕರ್‌, ಭದ್ರಾವತಿ ಭಾವಸಾರ ಸಮಾಜದ ಅಧ್ಯಕ್ಷರಾದ ರಾಘವೇಂದ್ರ ರಾವ್ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chanakya Chess School ಮೇ 2 ರಿಂದ ಮುಕ್ತ ಚೆಸ್ ತರಬೇತಿ ಶಿಬಿರ

Chanakya Chess School ಚಾಣಕ್ಯ ಚೆಸ್ ಸ್ಕೂಲ್ ವತಿಯಿಂದ ಶಿವಮೊಗ್ಗ ನಗರದ...