Friday, June 20, 2025
Friday, June 20, 2025

Karntaka Assembly ಕಿವಿ ಮೇಲೆ ಹೂ…

Date:

ಈಗೀಗ ವಿಚಿತ್ರ ಘಟನೆಗಳು‌ ನಮ್ಮ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ಜರುಗುತ್ತಿವೆ.

Karntaka Assembly ಹಾಸಿಗೆ ದಿಂಬು ಇರಿಸಿಕೊಂಡು ರಾತ್ರಿಯೆಲ್ಲಾ ಸಂಪು ಹೂಡುವುದು.
‌ಮೇಜಿನ ಮೇಲೆ ನಿಂತು ತಾವು ತೊಟ್ಡಿದ್ದ ಜುಬ್ಬವನ್ನ ಹರಿದುಕೊಳ್ಳುವುದು..ಅರ್ಧ ಬೆತ್ತಲೆ ನಿಲ್ಲುವುದು…ಮೊಬೈಲ್ ನಲ್ಲಿ ನೀಲಿಚಿತ್ರಗಳ ವೀಕ್ಷಣೆ..ಹೀಗೆ
ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇಂಥದೇ ಸಾಲಿನಲ್ಲಿ ಈಗ ಮತ್ತೊಂದು ಸೇರ್ಪಡೆ. ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು, ಶಾಸಕರು ಕಿವಿಗೆ ಚೆಂಡು ಹೂ ಸಿಗಿಸಿಕೊಂಡಿರುವುದು.

Karntaka Assembly ಸಾಂಕೇತಿಕವಾಗಿ ಆಡಳಿತ ಪಕ್ಷದ
ಬಜೆಟ್ ಬಗ್ಗೆ ಇದೊಂದು ವಿಡಂಬನೆ ಎನ್ನಬಹುದು.

ಆದರೆ ಈ ರೀತಿಯ ನಡವಳಿಕೆಗಳಿಂದ ಗಂಭೀರ ರಾಜಕೀಯ ನಡೆಗೆ ಹೆಸರಾದ ನಾಯಕರು ಇಷ್ಟು ಕೆಳಗಿನ ಮಟ್ಟಕ್ಕಿಳಿದರೆ? ಎಂಬ ಭಾವನೆಯೂ ಬರಲಿಕ್ಕೆ ಸಾಧ್ಯ.

ಏಕೆಂದರೆ ” ನಾವೇನೂ ಕಿವಿಗೆ ಹೂವಿಟ್ಟುಕೊಂಡಿಲ್ಲ!” ಎನ್ನುವ ಲೋಕಾರೂಢಿಯ ಮಾತಿಗೆ
ಸಾದೃಶ್ಯವಾಗಿ ತೋರಿಸಬೇಕಿಲ್ಲ.
ಆ ರೀತಿಯ ನಡವಳಿಕೆ ಇನ್ನೊಂದು ದಿನ “ನೀವೇ ಕಿವಿ ಮೇಲೆ ಹೂ ಇಟ್ಟುಕೊಂಡಿದ್ರಲ್ಲ?” ಎಂದು ಆಡಳಿತ ಪಕ್ಷ ಹೀಯಾಳಿಸಲಿಕ್ಕೂ
ಅವಕಾಶ ಕಲ್ಪಿಸಿದಂತಾಗುತ್ತದೆ.

ಈಗಿನ ರಾಜಕೀಯದಲ್ಲಿ ಯಾವ ಪಕ್ಷ
ಯಾವ ವ್ಯಕ್ತಿ ಆಡಳಿತ ಗಾದಿಗೇರುತ್ತಾರೋ ಗೊತ್ತಿಲ್ಲ.
ಇಂತಹ ನಡವಳಿಕೆಗಳು ಮುಂದೊಂದು ದಿನ ಲೇವಡಿಗೆ ವಸ್ತುವಾಗುವುದಂತೂ ನಿಜ. ಹೌದಲ್ಲವೆ!??

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Health and Family Welfare Department ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ

District Health and Family Welfare Department ಕರ್ನಾಟಕ ಮೆದುಳು ಆರೋಗ್ಯ...

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...