ಚಿಕ್ಕಮಗಳೂರು: ಗ್ರಾಮೀಣ ಶಾಲೆಯ ಮಕ್ಕಳು ಕ್ರೀಡಾ ಚಟುವಟಿಕೆ ಹಾಗೂ ಪಠ್ಯದಲ್ಲಿ ಹೆಚ್ಚು ಆಸಕ್ತಿಯಿಂದ ಅಧ್ಯಯನ ನಡೆಸುವ ಮೂಲಕ ಪಟ್ಟಣದ ಮಕ್ಕಳಿಗಿಂತ ತಾವೇನು ಕಡಿಮೆವಿಲ್ಲ ವೆಂಬಂತೆ ಬಿಂಬಿಸಿಕೊಳ್ಳಬೇಕು ಸಾಧನೆ ಮಾಡಬೇಕು ಎಂದು ಜಿಲ್ಲಾ ರೌಂಡ್ ಟೇಬಲ್ ಸಂಸ್ಥೆ ಅಧ್ಯಕ್ಷ ದೇವಾ ನಂದ್ ಅವರು ಹೇಳಿದರು.
ತಾಲ್ಲೂಕಿನ ಕೆಳಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಉಚಿತ ಸ್ಮಾರ್ಟ್ಕ್ಲಾಸ್ ಕಾರ್ಯಕ್ರಮ ಆಯೋಜಿಸಿ ಮಂಗಳವಾರ ಅವರು ಮಾತನಾಡುತ್ತಿದ್ದರು.
ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಪ್ರಾಜೆಕ್ಟರ್ ಸೇರಿದಂತೆ ಅನೇಕ ರೀತಿಯ ಸ್ಮಾರ್ಟ್ಕ್ಲಾಸ್ನ್ನು ಪರಿಚಯಿಸಲಾಯಿತು. ಇವುಗಳನ್ನು ಮಕ್ಕಳು ಅತ್ಯಂತ ಶ್ರದ್ದೆಯಿಂದ ಅಭ್ಯಾಸಿಸುವ ಮೂಲಕ ಕಾರ್ಯ ಕ್ರಮದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆ ಮಾಜಿ ಅಧ್ಯಕ್ಷ ಹೆಚ್.ಡಿ.ವಿನಯ್ರಾಜ್ ಮಾತನಾಡಿ ಇದೇ ಮೊದಲ ಬಾರಿಗೆ ಸಂಸ್ಥೆ ವತಿ ಯಿಂದ ಕೆಳಗೂರಿನಲ್ಲಿ ಸ್ಮಾರ್ಟ್ಕ್ಲಾಸ್ ಆಯೋಜನೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಜನೋಪ ಯೋಗಿ ಹಾಗೂ ಮಕ್ಕಳಿಗೆ ಉತ್ತಮ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಸ್ಲಾರ್ಟ್ಕ್ಲಾಸ್ ಕಾರ್ಯಕ್ರಮದಲ್ಲಿ ಶಾಲೆಯ ಸುಮಾರು 300 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ನಾಗಾರ್ಜುನ್, ಕಾರ್ಯದರ್ಶಿ ಅಶ್ಚಿನ್, ಸ್ಥಳೀಯ ಮುಖಂಡ ಸತೀಶ್ ಕಬ್ಬಿಣಸೇತುವೆ ಹಾಗೂ ಶಾಲಾ ಸಿಬ್ಬಂದಿಗಳು ಹಾಜರಿದ್ದರು.