Saturday, April 26, 2025
Saturday, April 26, 2025

ಕನ್ನಡದ ಕಾಂತಾರಕ್ಕೆ ನೂರುದಿನದ ಮೆರುಗು

Date:

2022 ರ ಸಾಲಿನಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಸಿನಿಮಾ ಎಂದರೆ ಅದು ಕಾಂತಾರ. ಇದರಲ್ಲಿ ರಿಷಬ್‌ ಶೆಟ್ಟಿ ಅವರದ್ದು ಪ್ರಧಾನ ಭೂಮಿಕೆ. ರಿಷಬ್ ಶೆಟ್ಟಿ ಅವರ ಅಭಿನಯ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದೆ.

ಈ ಜನಪ್ರಿಯ ಪಡೆದ ಕಾಂತಾರ ಸಿನಿಮಾವು ತೆರೆಕಂಡು100 ದಿನಗಳು ಕಳೆದಿವೆ. ಭಾರತದಲ್ಲಿ ರಿಷಬ್‌ ಶೆಟ್ಟಿ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ ಎಂದೇ ಖ್ಯಾತಿ ಗಳಿಸಿದೆ. ಈಗ ಈ ಸಿನಿಮಾವು 100 ದಿನದ ಸಂಭ್ರಮದಲ್ಲಿದೆ.

ಕಾಂತಾರ ಸಿನಿಮಾವು 16 ಕೋಟಿ ರೂ. ಬಜೆಟ್‌ ನಲ್ಲಿ ತಯಾರಾಗಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿದ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ತುಳು ಭಾಷೆಯಲ್ಲೂ ಕೂಡ ಡಬ್ ಆಗಿದೆ.

ಚಿತ್ರೀಕರಣ,ಕಥೆ,ಅಭಿನಯ, ಲೊಕೇಶನ್, ಎಲ್ಲಾ ದೃಷ್ಟಿಯಿಂದ ತಯಾರಾಗಿ ಕಾಂತಾರ
ಊಹೆಗೂ ಮೀರಿದ ಗಲ್ಲಾ ಪೆಟ್ಟಿಗೆ ಯಶಸ್ಸು ಗಳಿಸಿದೆ.

ಕಾಂತಾರ ಸಿನಿಮಾವನ್ನು ಅಮೇಜಾನ್‌ ಪ್ರೈಮ್‌ ಓಟಿಟಿ ಖರೀದಿ ಮಾಡಿರುವುದು ಅದರ ಹೆಗ್ಗಳಿಕೆ.

ಇದೇ ಜ.15 ರಂದು ಕಿರುತೆರೆಯಲ್ಲೂ ಕಾಂತಾರ ಸಿನಿಮಾ ಶೋ ಆಗಲಿದೆ.

ತುಳುನಾಡಿನ ಆಚರಣೆ ಮತ್ತು ಅಲ್ಲಿನ, ಕಾಡಿನಲ್ಲಿವಾಸಿಸುವ ಜನರ ಬದುಕನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ದೈವದ ಬಗೆಗಿನ ನಂಬಿಕೆಯ ಮೇಲೆ ಸಿನಿಮಾ ಸಾಗುತ್ತದೆ.

ಸಾಮಾನ್ಯವಾಗಿ ಇಂಥಹ ಸಿನಿಮಾಗಳು ಕರಾವಳಿ ಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಆದರೆ ಕಾಂತಾರ ಮಾತ್ರ ಕರಾವಳಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ತನ್ನದೇ ಜನಪ್ರಿಯತೆ ಪಡೆದಿದೆ.

ರಜಿನಿಕಾಂತ್‌, ಕಮಲ್‌ ಹಾಸನ್‌ ಹೀಗೆ ಅನೇಕ ದೊಡ್ಡ ದೊಡ್ಡ ಸ್ಟಾರ್‌ ಗಳು ಸಿನಿಮಾದ ಬಗ್ಗೆ ಶ್ಲಾಘಿಸಿದ್ದಾರೆ.

ಸಿನಿಮಾಕ್ಕೆ ಎಲ್ಲೆಡೆ ಸಿಕ್ಕ ಪ್ರತಿಕ್ರಿಯೆ ನೋಡಿದಾಗ ಪ್ರತಿಕ್ರಿಯೆ ಅತ್ಯಂತ ಆಪ್ತವಾಗಿದೆ. ಅಷ್ಟೇ ಅಲ್ಲ ಇದರ ಎರಡನೇ ಭಾಗ ಚಲನಚಿತ್ರ ಆಗಬೇಕೆಂದು ಪ್ರೇಕ್ಷಕರು ಬಯಸಿದ್ದಾರೆ. ಆದರೆ, ಇದುವೆರೆಗೂ ಕಾಂತಾರ -2 ಸಿನಿಮಾ ಬರುತ್ತದೆ ಎನ್ನುವ ಬಗ್ಗೆ ಅಧಿಕೃತವಾಗಿ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.

ಸಿನಿಮಾ ರಿಲೀಸ್ ಆಗಿ 100 ದಿನಗಳು ಪೂರೈಸಿದೆ. ಈ ಬಗ್ಗೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಟ್ವಿಟರ್‌ ನಲ್ಲಿ ಹೀಗೆ ಬರೆದು ಕೊಂಡಿದ್ದಾರೆ. ” ಬೆಳಕು..!! ಆದರೆ, ಇದು ಬೆಳಕಲ್ಲಾ 100 ದಿನದ ದರ್ಶನ” ಎಂದು ಬರೆದುಕೊಂಡಿದ್ದಾರೆ. ಹೀಗೆ ಕಾಂತಾರ ಸಿನಿಮಾದ 100 ದಿನದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Defense University ಪಠ್ಯಕ್ರಮದ ರಚನೆ & ಕೌಶಲ್ಯಾಭಿವೃದ್ಧಿಗೆಒತ್ತು-ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ವೃತ್ತಿ ಸಮಾಲೋಚನೆ ಯಶಸ್ವಿ

National Defense University ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU), ಶಿವಮೊಗ್ಗ ಕ್ಯಾಂಪಸ್ನಲ್ಲಿ,...

Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ

Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು...

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...