ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶಿವಮೊಗ್ಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನಿಧಿಗೆ ಹೋಬಳಿ ಘಟಕ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಜನೂರು ಶಾಲೆಯಲ್ಲಿ ನಿಧಿಗೆ ಹೋಬಳಿ ಘಟಕದ ಉದ್ಘಾಟನೆ ಹಾಗೂ ದಿವಂಗತ ವಸುದೇವ ಭೂಪಾಳಂ ಅವರ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ ಮಂಜುನಾಥ್ ಅವರು ನೆರವೇರಿಸಿ ಮಾತನಾಡುತ್ತಾ ಕನ್ನಡಕ್ಕೆ ಸಾವಿಲ್ಲ ಕನ್ನಡವು ನಿತ್ಯ ನೂತನ ಇಂತಹ ಕನ್ನಡವನ್ನು ಮತ್ತಷ್ಟು ಬಲಿಷ್ಠವಾಗಿ ಮಾಡಲು ಇಂತಹ ಹೋಬಳಿ ಘಟಕಗಳನ್ನು ಸ್ಥಾಪಿಸಿ ಆ ಮೂಲಕ ಪ್ರತಿ ತಿಂಗಳು ಒಂದು ಕಾರ್ಯಕ್ರಮದ ಮೂಲಕ ಮಕ್ಕಳು ಹಾಗೂ ಸಮುದಾಯವನ್ನು ಕನ್ನಡ ಪರವಾಗಿ ನಿಲ್ಲುವಂತೆ ಮತ್ತು ಅದರ ಮಹತ್ವ ಮತ್ತು ಮಾನ್ಯತೆಯನ್ನು ಅರಿತು ಮೈಗೂಡಿಸಿಕೊಳ್ಳುವುದಕ್ಕೆ ಇದು ಸಹಕಾರಿಯಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಹಾಗೆಯೇ ಕಾರ್ಯಕ್ರಮದ ಮುಖ್ಯ ಉಪನ್ಯಾಸವನ್ನು ಶ್ರೀ ಜಿ ವಿ ಸಂಗಮೇಶ್ವರ ಹಿರಿಯ ಸಾಹಿತಿಗಳು ಇವರು ಮಾತನಾಡುತ್ತಾ, ಶ್ರೀ ವಸುದೇವ ಭೂಪಾಳಂ ಅವರು ಮಹಾತ್ಮ ಗಾಂಧಿ ಅವರಿಗೆ ಕನ್ನಡವನ್ನು ಕಲಿಸಿದವರು ಹಾಗೆ ತುಂಗಾ ನದಿಯ ಬಗ್ಗೆ ಸಹ ಅನೇಕ ಪದ್ಯಗಳನ್ನು ಬರೆದಿದ್ದಾರೆ. ಇವರ ಹಾಸ್ಯ ಬರಹ ಹಾಗೂ ಗಂಭೀರ ವಿಚಾರದ ಬರಹಗಳು ಸಹ ಇದೆ ಹಾಗೆ ಇವರು ಕುವೆಂಪು ಅವರ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ ಹಾಗೆಯೇ ಇವರು ಬರಿ ಬರಹಗಳಷ್ಟೇ ಅಲ್ಲದೆ ಕನ್ನಡ ಪ್ರೋತ್ಸಾಹಕರು ಆಗಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಬಳಿ ಘಟಕದ ಅಧ್ಯಕ್ಷರಾದ ವಿ ಜಗದೀಶ್ ವಹಿಸಿದ್ದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಜನೂರು ಮುಖ್ಯೋಪಾಧ್ಯಾಯರ ಶ್ರೀ.ಬಿ. ಅರುಣ್ ಕುಮಾರ್ ರವರು ಪ್ರಾಸ್ತವಿಕವನ್ನು ಮಾತನಾಡುತ್ತಾ ಇಂದು ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆದಿದ್ದರಿಂದ ಹೊಸ ವರ್ಷದ ದಿನ ಮಕ್ಕಳಿಗೆ ಜ್ಞಾನದ ದಾಸೋಹವನ್ನು ನೀಡಿದ್ದು ಸಾಕಷ್ಟು ಉಪಯೋಗವಾಗಿದೆ ಎಂದು ತಿಳಿಸಿದರು. ಹಾಗೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ್ ಅಧ್ಯಕ್ಷರಾದ ಮಹಾದೇವಿಯವರು ಭೂಪಾಳಂ ಅವರ ಗೀತೆಯನ್ನು ಹಾಡಿದರು ಕಾರ್ಯಕ್ರಮದಲ್ಲಿ ಮಿತಿಗೆ ಹೋಬಳಿ ಘಟಕದ ಕಾರ್ಯದರ್ಶಿಯಾದ *ದಿನೇಶ್ ಹೊಸನಗರ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಾಲಿಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಈ ಶಾಲೆಯ ವಿದ್ಯಾರ್ಥಿ ಕು.ರಾಜು ಅವರನ್ನು ಹಾಗೂ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕು. ನೀಲಮ್ಮ ಅವರನ್ನು ಸನ್ಮಾನಿಸಲಾಯಿತು
