Saturday, June 21, 2025
Saturday, June 21, 2025

ದೇವಿ ಬ್ರಹ್ಮಚಾರಿಣಿ

Date:

ನವ ದುರ್ಗೆಯರಲ್ಲಿ ಒಬ್ಬಳಾದ ದೇವಿ ಬ್ರಹ್ಮಚಾರಿಣಿ ಯನ್ನು ನವರಾತ್ರಿಯ ದ್ವಿತೀಯ ದಿನ ಆರಾಧಿಸಿ ಪೂಜಿಸಿ ಸಂಕಲ್ಪ ಸಿದ್ದಿಗೆ ಪ್ರಾರ್ಥಿಸುತ್ತಾರೆ .
ಒಂದು ದಂತಕಥೆ ಪ್ರಚಲಿತದಲ್ಲಿರುವಂತೆ , ಕನ್ಯೆ ಪಾರ್ವತೀ ದೇವಿಯು ಪರಶಿವನನ್ನು ವರಿಸಲು ನಿರ್ಧರಿಸಿ ದಾಗ ತಂದೆತಾಯಿಯರು ಅಸಮ್ಮತಿ ಸೂಚಿಸುತ್ತಾರೆ . ಆದರೆ ದೇವಿಯ ನಿರ್ಧಾರ ಅಚಲ , ಅಲ್ಲದೆ ಶತ ಪ್ರಯತ್ನಮಾಡಿದರೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸುಮಾರು 5000 ವರ್ಷಗಳ ಕಾಲ ಘನ ಘೋರ ತಪಸ್ಸನ್ನು ಮಾಡುತ್ತಾಳೆ , ಶಿವನಿರುವೆಡೆಯಲ್ಲೆಲ್ಲ ಅವನ ಗಮನ ಸೆಳೆಯಲು ಕಾಡುಮೇಡುಗಳಲ್ಲಿ , ಬೆಟ್ಟಗುಡ್ಡಗಳಲ್ಲಿ , ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಾಳೆ , ಅವನ ಕೆಲಸ ಕಾರ್ಯಗಳಲ್ಲಿ ಸಹಕರಿಸುತ್ತಾಳೆ , ಸಂಚರಿಸುತ್ತಾಳೆ . ದೇವರುಗಳು . ಸಹ ಶಿವನಲ್ಲಿ ಪ್ರೀತಿ ಪ್ರೇಮ ಕಾಮ ಜಾಗೃತವಾಗಲು ಕಾಮದೇವನನ್ನು ಪ್ರಚೋದಿಸುತ್ತಾರೆ , ಆದರೆ ಎಲ್ಲಾ ಪ್ರಯತ್ನಗಳಲ್ಲಿ ವಿಫಲರಾಗುತ್ತಾರೆ . ಮತ್ತೊಂದೆಡೆ ಪಾರ್ವತಿಯ ತಪಸ್ಸಿಗೆ ಭಂಗ ತರಲು ಪ್ರಚಂಡಾ ಸುರ ರಾಕ್ಷಸನು ರಾಕ್ಷಸರೊಡನೆ ಸ್ವತಃ ಉಪಟಳ ನೀಡುವ ಮೂಲಕ ಪ್ರಯತ್ನಿಸಿ ದೇವಿಯ ಕೆಂಗಣ್ಣಿಗೆ ಗುರಿಯಾಗಿ ಭಸ್ಮವಾಗುತ್ತಾನೆ .
ಕೊನೆಗೂ ಶಿವನ ಅನೇಕ ಪರೀಕ್ಷೆಗಳಲ್ಲಿ ಸೂಕ್ತ ರೀತಿಯಲ್ಲಿ ಪಾರ್ವತಿ ಗೆಲ್ಲುತ್ತಾಳೆ , ಆಗ ಶಿವನು ತನ್ನ ಸಂಕಲ್ಪವನ್ನು ಸಡಿಲಿಸಿ ಪಾರ್ವತಿಯನ್ನು ಮದುವೆಯಾಗುತ್ತಾನೆ .
ಪಾರ್ವತಿ ಗೆ ತನ್ನ ತಪಸ್ಸಿನ ಅವಧಿಯಲ್ಲಿ ಕೇವಲ ಬಿಲ್ವಪತ್ರೆ ಮತ್ತು ನದಿಯ ನೀರೇ ಆಹಾರವಾಗಿತ್ತು . ಪಾರ್ವತಿಯ ನಿಶ್ಚಲತೆ , ದೃಢತೆ , ಬ್ರಹ್ಮಚರ್ಯ ಪಾಲನೆ , ಕಷ್ಟ ಸಹಿಷ್ಣುತೆ , ಯ ಗುಣಗಳು ಮಹಿಳೆಯರಿಗೆ ಮಾರ್ಗದರ್ಶಿ . ಹಾಗಾಗಿ ಅವಳನ್ನು ಭಕ್ತಿ ಯಿಂದ ನವರಾತ್ರಿಯಲ್ಲಿ ಆರಾಧಿಸುತ್ತಾರೆ .
ಲೇ: ಎಮ್. ತುಳಸಿರಾಮ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...