Monday, March 23, 2026
Monday, March 23, 2026

ನವರಾತ್ರಿಯ ನವದುರ್ಗೆಯರು

Date:

ದೇವಿ ಚಂದ್ರ ಘಂಟಿ ;
ಶಿವ ಮಹಾ ಪುರಾಣದ ಅನ್ವಯ , ಚಂದ್ರ ಘಂಟಿ ಯಲ್ಲಿ ಚಂದ್ರಶೇಖರನ ರೂಪದಲ್ಲಿ ಶಿವನ ” ಶಕ್ತಿ “. ಶಿವನ (ಅರ್ಧನಾರೀಶ್ವರ) ಪ್ರತಿಯೊಂದು ಅಂಶವು ಶಕ್ತಿಯಿಂದ ಕೂಡಿದೆ.


ಚಂದ್ರಘಂಟಿದೆವಿಯನ್ನು ಚಂದ್ರ ಚೂಡ – ಚಂಡಿಕಾ – ರಣಚಂಡಿ ಎಂಬ ನಾನಾ ಹೆಸರುಗಳಿಂದ ಕರೆಯುತ್ತಾರೆ.
ಚಂದ್ರಘಂಟಿ ಹತ್ತು ಕೈಗಳನ್ನು ಹೊಂದಿದ್ದು ತ್ರಿಶೂಲ, ಗದೆ ,ಬಿಲ್ಲು ಬಾಣ , ಕತ್ತಿ , ಕಮಲ ಪುಷ್ಪ ,ಘಂಟೆ , ಕಮಂಡಲು ಗಳನ್ನು ಪಿಡಿದಿದ್ದು, ಒಂದು ಕೈ ಅಭಯಮುದ್ರೆ ಅಥವ ಆಶೀರ್ವಾದ ಕ್ಕಾಗಿ ಇದೆ .ಹಣೆಯ ಮೇಲೆ ಘಂಟೆಯನ್ನು ಚಿತ್ರಿಸುವ ಅರ್ಧjಚಂದ್ರ , ಹಣೆಯ ಮಧ್ಯದಲ್ಲಿ ಮೂರನೇ ಕಣ್ಣನ್ನು ಹೊಂದಿದ್ದಾಳೆ . ಸಿಂಹಾರೂಡಳು.


ಚಂದ್ರಘಂಟಿ ದೇವಿಯಲ್ಲಿ ರೂಪ ಸೌಂದರ್ಯ, ತೇಜಸ್ಸಿನೊಡನೆ ಧೈರ್ಯ , ಶೌರ್ಯ, ಸಾಹಸಗಳೂ ಸಮ್ಮಿಳಿತ ವಾಗಿವೆ .
ದಯಾಮಯಿ , ಮಾತೃ ಹೃದಯಿ , ಕರುಣಾಮಯಿ ತನ್ನ ಭಕ್ತರಿಗೆ ಶಾಂತಿ ಸಮೃದ್ಧಿ ನೀಡಿ ತಾಯಿ ಪ್ರೇಮ ನೀಡುವಳು .
ರಾಕ್ಷಸ ಸಂಹಾರ ಯುದ್ಧದಲ್ಲಿ ದೇವಿಯ ಘಂಟೆಯಿಂದ ಉತ್ಪತ್ತಿಯಾಗಿ ಬರುತ್ತಿದ್ದ ಗುಡುಗಿನ ಶಬ್ದಕ್ಕೆ ದಿಗ್ಬ್ರಮೆ ಗೊಂಡು ರಾಕ್ಷಸರು ಪಾರ್ಶ್ವವಾಯು ಪೀಡಿತರಾದರೆಂಬ ಮಾತು ಜನಪದರಲ್ಲಿದೆ . ದುಷ್ಟರಿಗೆ ರಾಕ್ಷಸರಿಗೆ ಸಿಂಹ ಸ್ವಪ್ನ ವಾಗಿದ್ದಾಳೆ .
ನವರಾತ್ರಿ ಯ ಮೂರನೇ ದಿನ ದೇವಿಯ ಅನುಗ್ರಹಕ್ಕಾಗಿ ಭಕ್ತಿಯಿಂದ ಆರಾಧಿಸುವ ಮೂಲಕ ಭಕ್ತರು ಶಾಂತಿ ಸಮೃದ್ಧಿ ಪಡೆಯುತ್ತಾರೆ .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು...