Thursday, February 5, 2026
Thursday, February 5, 2026

ಅನುಕಂಪ ಆಧಾರದ ನೌಕರಿ ಕೇಂದ್ರ ಸರ್ಕಾರದನಿಯಮ ಸುಧಾರಣೆ

Date:

ಅನುಕಂಪದ ಆಧಾರದ ಮೇಲೆ ನಡೆಯಲಿರುವ ನೇಮಕಾತಿಗಳ ಕುರಿತು ಸರಕಾರ ಮಹತ್ವದ ಘೋಷಣೆ ಮಾಡಿದೆ. ವಾಸ್ತವವಾಗಿ, ಕೇಂದ್ರ ಗೃಹ ಸಚಿವಾಲಯವು ಅನುಕಂಪದ ನೇಮಕಾತಿ ನೀತಿಯಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದೆ.

ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ‘ಸರ್ಕಾರಿ ನೌಕರನ ಅವಲಂಬಿತರಿಗೆ ಅನುಕಂಪದ ನೇಮಕಾತಿಯನ್ನ ಒದಗಿಸುವುದು ಅನುಕಂಪದ ನೇಮಕಾತಿ ಯೋಜನೆಯ ಉದ್ದೇಶವಾಗಿದೆ. ಸೇವೆಯಲ್ಲಿ ಮರಣ ಹೊಂದಿದ ಅಥವಾ ವೈದ್ಯಕೀಯ ಆಧಾರದ ಮೇಲೆ ನಿವೃತ್ತಿ ಹೊಂದಿದ ನೌಕರರು, ಯಾರ ಕುಟುಂಬಗಳು ಅಸಹಾಯಕತೆ ಹೊಂದಿದ್ದರೂ ಮತ್ತು ಜೀವನೋಪಾಯವಿಲ್ಲದೇ ಉಳಿದಿರುವವರು, ಅಂತಹ ಅವಲಂಬಿತರು ಇದರಿಂದ ಪ್ರಯೋಜನ ಪಡೆಯುತ್ತಾರೆ.

ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಸಂಬಂಧಪಟ್ಟ ಸರ್ಕಾರಿ ನೌಕರನ ಕುಟುಂಬವನ್ನ ಹೊರಗೆ ಕರೆತರುವುದು ಈ ನಿರ್ಧಾರದ ಉದ್ದೇಶವಾಗಿದೆ. ಹೊಸ ಮಾರ್ಗಸೂಚಿಗಳು ಹೆಚ್ಚು ಪಾರದರ್ಶಕತೆಯನ್ನ ಮತ್ತು ಸಹಾನುಭೂತಿಯ ನೇಮಕಾತಿ ಪ್ರಕ್ರಿಯೆಯನ್ನು ವಸ್ತುನಿಷ್ಠವಾಗಿಸುತ್ತದೆ.

ಸರ್ಕಾರದ ಈ ದೊಡ್ಡ ನಿರ್ಧಾರದ ನಂತರ ಇದೀಗ ಕೇಂದ್ರ ಅರೆಸೇನಾ ಪಡೆಗಳ ನೌಕರರ ಕುಟುಂಬಗಳಿಗೂ ಉದ್ಯೋಗ ಸಿಗಲಿದೆ.
ಇದಕ್ಕಾಗಿ MHA ಅನುಕಂಪದ ನೇಮಕಾತಿಗಳ ಪರಿಷ್ಕೃತ ನೀತಿಯನ್ನ ಅನುಮೋದಿಸಿದೆ.
ಈ ತಿದ್ದುಪಡಿಗೆ ಒಪ್ಪಿಗೆ ದೊರೆತ ನಂತರ ಸೇವಾವಧಿಯಲ್ಲಿ ಪ್ರಾಣ ಕಳೆದುಕೊಂಡ ನೌಕರರ ಬಂಧುಗಳಿಗೆ ಹಾಗೂ ವೈದ್ಯಕೀಯ ಕಾರಣದಿಂದ ನಿವೃತ್ತಿಯಾಗುವ ನೌಕರರ ಬಂಧುಗಳಿಗೆ ಅನುಕಂಪದ ನೇಮಕಾತಿಯನ್ನು ನೀಡಲಾಗುವುದು.

ಸರ್ಕಾರದ ಈ ಹೊಸ ನೀತಿಯಿಂದ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ಭಯೋತ್ಪಾದಕರ ದಾಳಿ, ಘರ್ಷಣೆ ಇತ್ಯಾದಿಗಳಲ್ಲಿ ಪ್ರಾಣ ಕಳೆದುಕೊಳ್ಳುವ ಕೇಂದ್ರ ಅರೆಸೇನಾ ಪಡೆಗಳ ಸಿಬ್ಬಂದಿಯನ್ನೂ ಪರಿಷ್ಕೃತ ನೀತಿಯಲ್ಲಿ ಸೇರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಈ ನಿರ್ಧಾರದಿಂದ ಸೈನಿಕರ ಕುಟುಂಬಗಳಿಗೆ ದೊಡ್ಡ ಪರಿಹಾರ ನೀಡಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...