Monday, December 15, 2025
Monday, December 15, 2025

ಅನುಕಂಪ ಆಧಾರದ ನೌಕರಿ ಕೇಂದ್ರ ಸರ್ಕಾರದನಿಯಮ ಸುಧಾರಣೆ

Date:

ಅನುಕಂಪದ ಆಧಾರದ ಮೇಲೆ ನಡೆಯಲಿರುವ ನೇಮಕಾತಿಗಳ ಕುರಿತು ಸರಕಾರ ಮಹತ್ವದ ಘೋಷಣೆ ಮಾಡಿದೆ. ವಾಸ್ತವವಾಗಿ, ಕೇಂದ್ರ ಗೃಹ ಸಚಿವಾಲಯವು ಅನುಕಂಪದ ನೇಮಕಾತಿ ನೀತಿಯಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದೆ.

ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ‘ಸರ್ಕಾರಿ ನೌಕರನ ಅವಲಂಬಿತರಿಗೆ ಅನುಕಂಪದ ನೇಮಕಾತಿಯನ್ನ ಒದಗಿಸುವುದು ಅನುಕಂಪದ ನೇಮಕಾತಿ ಯೋಜನೆಯ ಉದ್ದೇಶವಾಗಿದೆ. ಸೇವೆಯಲ್ಲಿ ಮರಣ ಹೊಂದಿದ ಅಥವಾ ವೈದ್ಯಕೀಯ ಆಧಾರದ ಮೇಲೆ ನಿವೃತ್ತಿ ಹೊಂದಿದ ನೌಕರರು, ಯಾರ ಕುಟುಂಬಗಳು ಅಸಹಾಯಕತೆ ಹೊಂದಿದ್ದರೂ ಮತ್ತು ಜೀವನೋಪಾಯವಿಲ್ಲದೇ ಉಳಿದಿರುವವರು, ಅಂತಹ ಅವಲಂಬಿತರು ಇದರಿಂದ ಪ್ರಯೋಜನ ಪಡೆಯುತ್ತಾರೆ.

ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಸಂಬಂಧಪಟ್ಟ ಸರ್ಕಾರಿ ನೌಕರನ ಕುಟುಂಬವನ್ನ ಹೊರಗೆ ಕರೆತರುವುದು ಈ ನಿರ್ಧಾರದ ಉದ್ದೇಶವಾಗಿದೆ. ಹೊಸ ಮಾರ್ಗಸೂಚಿಗಳು ಹೆಚ್ಚು ಪಾರದರ್ಶಕತೆಯನ್ನ ಮತ್ತು ಸಹಾನುಭೂತಿಯ ನೇಮಕಾತಿ ಪ್ರಕ್ರಿಯೆಯನ್ನು ವಸ್ತುನಿಷ್ಠವಾಗಿಸುತ್ತದೆ.

ಸರ್ಕಾರದ ಈ ದೊಡ್ಡ ನಿರ್ಧಾರದ ನಂತರ ಇದೀಗ ಕೇಂದ್ರ ಅರೆಸೇನಾ ಪಡೆಗಳ ನೌಕರರ ಕುಟುಂಬಗಳಿಗೂ ಉದ್ಯೋಗ ಸಿಗಲಿದೆ.
ಇದಕ್ಕಾಗಿ MHA ಅನುಕಂಪದ ನೇಮಕಾತಿಗಳ ಪರಿಷ್ಕೃತ ನೀತಿಯನ್ನ ಅನುಮೋದಿಸಿದೆ.
ಈ ತಿದ್ದುಪಡಿಗೆ ಒಪ್ಪಿಗೆ ದೊರೆತ ನಂತರ ಸೇವಾವಧಿಯಲ್ಲಿ ಪ್ರಾಣ ಕಳೆದುಕೊಂಡ ನೌಕರರ ಬಂಧುಗಳಿಗೆ ಹಾಗೂ ವೈದ್ಯಕೀಯ ಕಾರಣದಿಂದ ನಿವೃತ್ತಿಯಾಗುವ ನೌಕರರ ಬಂಧುಗಳಿಗೆ ಅನುಕಂಪದ ನೇಮಕಾತಿಯನ್ನು ನೀಡಲಾಗುವುದು.

ಸರ್ಕಾರದ ಈ ಹೊಸ ನೀತಿಯಿಂದ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ಭಯೋತ್ಪಾದಕರ ದಾಳಿ, ಘರ್ಷಣೆ ಇತ್ಯಾದಿಗಳಲ್ಲಿ ಪ್ರಾಣ ಕಳೆದುಕೊಳ್ಳುವ ಕೇಂದ್ರ ಅರೆಸೇನಾ ಪಡೆಗಳ ಸಿಬ್ಬಂದಿಯನ್ನೂ ಪರಿಷ್ಕೃತ ನೀತಿಯಲ್ಲಿ ಸೇರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಈ ನಿರ್ಧಾರದಿಂದ ಸೈನಿಕರ ಕುಟುಂಬಗಳಿಗೆ ದೊಡ್ಡ ಪರಿಹಾರ ನೀಡಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...