ವಿಜಯಪುರ ಜಿಲ್ಲೆಯ ಯಾರಾದರು ಅಮರನಾಥ ಗುಹಾ ದೇವಾಲಯ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದರೆ ಅವರ ಸಂಬಂಧಿಕರು ಕರ್ನಾಟಕ ರಾಜ್ಯದ ತುರ್ತು ಸಹಾಯವಾಣಿ ಸಂಖ್ಯೆ 080-1070,22340676 ಅಥವಾ ಇನ್ನೀತರ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ಎನ್ ಡಿ ಆರ್ ಫ್, ಐಟಿಬಿಪಿ, ಭಾರತೀಯ ಸೇನೆ, ಸಿಆರ್ ಪಿ ಎಪ್, ಬಿಎಸ್ಎಫ್ ಎಸ್ಡಿಆರ್ ಎಫ್ ಸೇರಿದಂತೆ ಅನೇಕ ಪಡೆಗಳಿಂದ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲಿ ಸಿಕ್ಕಿಬಿದ್ದವರಿಗೆ ಸಹಾಯ ಒದಗಿಸಲು ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಅಮರನಾಥ ಪ್ರದೇಶದ ಬಳಿ ಕರ್ನಾಟಕದ ಯಾವುದೇ ಸಿಕ್ಕಿಬಿದ್ದ ವ್ಯಕ್ತಿ ಸಹಾಯಕ್ಕಾಗಿ ಕರ್ನಾಟಕ ರಾಜ್ಯದ ತುರ್ತು ಸಹಾಯವಾಣಿ ಸಂಖ್ಯೆ 080-1070, 22340676 ಅಥವಾ ಎನ್ ಡಿ ಆರ್ ಎಫ್ ಸಹಾಯವಾಣಿ ಸಂಖ್ಯೆ 011-23438252 ಅಥವಾ 011-23438253, ಕಾಶ್ಮೀರ ವಿಭಾಗೀಯ ಸಹಾಯವಾಣಿ 0194-2469240, ದೇಗುಲ ಮಂಡಳಿಯ ಸಹಾಯವಾಣಿ 0194-2313149 ಅಥವಾ ಪೊಲೀಸ್ ನಿಯಂತ್ರಣ ಕೊಠಡಿ ಅನಂತನಾಗ್ ಸಂಖ್ಯೆ 9596777669 ಅಥವಾ ಪೊಲೀಸ್ ನಿಯಂತ್ರಣ ಕೊಠಡಿ ಪಹಲಗಮ್ 9596779039 ಅಥವಾ ರೆಸಿಡೆಂಟ್ ಕಮಷನರ್ ಆಫೀಸ್ 011-24103701, 24103702 ಅಥವಾ ಕರ್ನಾಟಕ ಭವನ ನವದೆಹಲಿ ಸಂಖ್ಯೆ 011-26115515, 011-26117666 ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತರಾದ ಮನೋಜ ರಾಜನ್ ಅವರು ತಿಳಿಸಿದ್ದಾರೆ.
ಈ ಸಹಾಯವಾಣಿ ಸಂಖ್ಯೆ ಬಳಸಿ ಮಾಹಿತಿ ನೀಡಿದಲ್ಲಿ ಅವರ ಸುರಕ್ಷತೆ ಮತ್ತು ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.