Sunday, May 31, 2026
Sunday, May 31, 2026

ಸರ್ಕಾರಿ ಶಾಲೆಗಳಿಗೆ ಪ್ರವೇಶ ದಾಖಲಾತಿ ಏರಿಕೆ

Date:

ಸರ್ಕಾರಿ ಶಾಲೆಗಳಲ್ಲಿ ಕೊರೋನಾ ವೇಳೆಯಲ್ಲಿ ದಾಖಲಾತಿ ಏರಿಕೆ ಕಂಡಿದೆ ಎಂದು ಕೇಂದ್ರ ಶಿಕ್ಷಣ ಇಲಾಖೆಯ ಮುಖಾಂತರ ತಿಳಿದು ಬಂದಿದೆ.

2020-21ನೇ ಸಾಲಿನಲ್ಲಿ ಕೊರೋನಾ ಸೋಂಕು ಏರಿಕೆಯಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ ಎಂದು ಯು-ಡೈಸ್ ಮೂಲಕ ತಿಳಿದು ಬಂದಿದೆ.

ಯುನಿಫ್ರೈಡ್ ಡಿಸ್ಟ್ರಿಕ್ ಇನ್ಫಾರ್ಮೇಷನ್ ಸಿಸ್ಟಮ್ ಫಾರ್ ಎಜುಕೇಷನ್ ಪ್ಲಸ್ ನಲ್ಲಿ ದೇಶದ ಶಾಲೆಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗತ್ತದೆ.

ಕರ್ನಾಟಕದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಮಕ್ಕಳ ದಾಖಲಾತಿ, ಶಾಲೆಯ ಸ್ಥಿತಿಗತಿ, ಸೌಲಭ್ಯಗಳ ಮಾಹಿತಿಯನ್ನು ಸಹ ಕಲೆ ಹಾಕಿದೆ.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಗಣನೀಯವಾಗಿ ದಾಖಲೆ ಏರಿಕೆಯಾಗಿದ್ದರೆ, ಅನುದಾನಿತ ಶಾಲೆ ಶಾಲೆಗಳಲ್ಲಿ ಅಲ್ಪ ಪ್ರಮಾಣದ ದಾಖಲೆ ಕುಸಿತವಾಗಿದೆ. ಅನುದಾನ ರಹಿತ ಶಾಲೆಗಳಲ್ಲಿ ಹೆಚ್ಚು ಮಕ್ಕಳ ದಾಖಲೆ ಕುಸಿತವಾಗಿರುವುದು ಕಂಡು ಬಂದಿದೆ. ಕೊರೋನಾ ಸಮಯದಲ್ಲಿ ಮಕ್ಕಳು ಖಾಸಗಿ ಶಾಲೆಗಳಲ್ಲಿ ಫೀಸ್ ಕಟ್ಟಲಾಗದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಹೆಚ್ಚು ಹೆಚ್ಚು ದಾಖಲೆಯನ್ನು ಮಾಡಿರುವುದು ಯು-ಡೈಸ್ ಪ್ಲಸ್ ಮುಖಾಂತರವಾಗಿ ತಿಳಿದುಬಂದಿದೆ.

ಶೈಕ್ಷಣಿಕ ವರ್ಷ 2020-21ನೇ ಸಾಲಿನಲ್ಲಿ ಕರ್ನಾಟಕದಲ್ಲಿರುವ 72,000ಕ್ಕೂ ಅಧಿಕ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಮಾಹಿತಿಯಂತೆ 2019-20ನೇ ಸಾಲಿಗೆ ಹೋಲಿಕೆಯನ್ನು ಮಾಡಿದರೇ ಮಕ್ಕಳ ದಾಖಲಾತಿ ಪ್ರಮಾಣ ಶೇ 2.32ರಷ್ಠು ಕಡಿಮೆಯಾಗಿದೆ. ಆದರೆ ಸರ್ಕಾರಿ ಶಾಲೆಯ ದಾಖಲಾತಿಯಲ್ಲಿ ಶೇ1.25ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಒಂದರಿಂದ ಹನ್ನೆರಡನೇ ತರಗತಿಯವರೆಗೂ 1,18,56,736 ದಾಖಲಾತಿಯನ್ನು ಪಡೆದಿದ್ದಾರೆ. ಆದರೆ ಹಿಂದಿನ ಶೈಕ್ಷಣಿಕ ಸಾಲಿಗೆ ಹೋಲಿಕೆಯನ್ನು ಮಾಡಿದರೆ 2.82ಲಕ್ಷ ವಿದ್ಯಾರ್ಥಿಘಳು ಕಡಿಮೆ ದಾಖಲಾಗಿದ್ದಾರೆ. ಇದಕ್ಕೆ ಕೊರೋನಾ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರಿ ಶಾಲೆ 2019-20ಯಲ್ಲಿ 49,06,231 ಮಕ್ಕಳು ದಾಖಲಾಗಿದ್ದರು 2020-21ನೇ ಸಾಲಿನಲ್ಲಿ 50,30,606 ಮಕ್ಕಳು ದಾಖಲಾಗಿದ್ದರು ಇವರು ಶೇಕಡವಾರು ಹೋಲಿಕೆಯನ್ನು ಗಮನಿಸಿದರೇ 1.25% ಮಕ್ಕಳು ಹೆಚ್ಚು ದಾಖಲಾಗಿದ್ದಾರೆ. ಅನುದಾನಿತ ಶಾಲೆ 2019-20ಯಲ್ಲಿ 15,46,326 ಮಕ್ಕಳು ದಾಖಲಾಗಿದ್ದರು 2020-21ನೇ ಸಾಲಿನಲ್ಲಿ 15,06,780 ಮಕ್ಕಳು ದಾಖಲಾಗಿದ್ದರು ಇವರು ಶೇಖಡವಾರು ಹೋಲಿಕೆಯನ್ನು ಗಮನಿಸಿದರೇ 2.05% ಕಡಿಮೆ ಮಕ್ಕಳು ದಾಖಲಾಗಿದ್ದಾರೆ.

ಅನುದಾನಿತ ಶಾಲೆ 2019-20ಯಲ್ಲಿ 56,85,879 ಮಕ್ಕಳು ದಾಖಲಾಗಿದ್ದರು 2020-21ನೇ ಸಾಲಿನಲ್ಲಿ 53,17,640 ಮಕ್ಕಳು ದಾಖಲಾಗಿದ್ದರು. ಇವರು ಶೇಕಡವಾರುು ಹೋಲಿಕೆಯನ್ನು ಗಮನಿಸಿದರೇ 6.47% ಕಡಿಮೆ ಮಕ್ಕಳು ದಾಖಲಾಗಿದ್ದಾರೆ. ಒಟ್ಟಾರೆ ಕೊರೋನಾ ಸಮಯದಲ್ಲಿ ಮಕ್ಕಳ ದಾಖಲಾತಿ ಇಳಿ ಮುಖವಾಗಿದೆ. 2.32% ಮಕ್ಕಳು ಕಡಿಮೆ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Mining Geology ಅಕ್ರಮ ಮರಳುಗಾರಿಕೆ ದಂಧೆ: ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ.

Department of Mining Geology ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಲೋಕಾಯುಕ್ತ...

Breaking News ಬೇಲಿ ಜಗಳ: ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ.

Breaking News ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕರಡಿಗ ಗ್ರಾಮದಲ್ಲಿ ರಸ್ತೆ...