Wednesday, May 21, 2025
Wednesday, May 21, 2025

ರಾಜ್ಯದಲ್ಲಿ 68 ಎಥೆನಾಲ್ ಘಟಕಗಳ ಸ್ಥಾಪನೆ ಗುರಿ- ರಾಜೇಂದ್ರ ಕುಮಾರ್

Date:

ರಾಜ್ಯದಲ್ಲಿ ಹೊಸದಾಗಿ 68 ಎಥೆನಾಲ್‌ ಘಟಕಗಳನ್ನು ಸ್ಥಾಪಿಸಲು ಮತ್ತು ಪ್ರಸ್ತುತ ಇರುವುದರ ಸಾಮರ್ಥ್ಯ ಹೆಚ್ಚಿಸುವ ಸಂಬಂಧ ಕೇಂದ್ರ ಸರಕಾರದಿಂದ ಅನುಮೋದನೆ ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿಗಮದ ಅಧ್ಯಕ್ಷ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಅವರು ತಿಳಿಸಿದ್ದಾರೆ‌.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ 400 ಕೋಟಿ ಲೀಟರ್‌ ಎಥೆನಾಲ್‌ ಉತ್ಪಾದಿಸುತ್ತಿದ್ದು, ಈಗಾಗಲೇ ಶೇ.10ರಷ್ಟು ಮಿಶ್ರಣದ ಗುರಿ ಸಾಧಿಸಲಾಗಿದೆ. 2025ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೇ.20ರಷ್ಟು ಮಿಶ್ರಣದ ಗುರಿ ಹೊಂದಿದ್ದಾರೆ. ಇದಕ್ಕೆ ಬೇಕಾಗಿರುವ 900 ಕೋಟಿ ಲೀಟರ್‌ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರತ ಸಕ್ಕರೆ ಕಾರ್ಖಾನೆಗಳಲ್ಲಿ 32 ಕಾರ್ಖಾನೆಗಳಲ್ಲಿ ಎಥೆನಾಲ್‌ ಉತ್ಪಾದನ ಘಟಕಗಳಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಘಟಕ ಸ್ಥಾಪಿಸುವ ಗುರಿ ಇದೆ ಎಂದರು.

ಎಥೆನಾಲ್‌ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ರೀತಿಯಲ್ಲಿ ರಾಜ್ಯವೂ ಒಂದು ನೀತಿ ರೂಪಿಸುವ ಅಗತ್ಯವಿದೆ. ಜತೆಗೆ ಮುಂದಿನ ದಿನಗಳಲ್ಲಿ ಪೊಟ್ಯಾಷಿಯಂ ಮಿಶ್ರಣ ಘಟಕಗಳನ್ನು ಸ್ಥಾಪಿಸಿ ವ್ಯಾಪಾರ ವಹಿವಾಟು ಸ್ಥಾಪಿಸುವ ಕುರಿತಂತೆ ಚಿಂತನೆ ನಡೆಸಲಾಗಿದೆ ಎಂದರು.

ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕ ಆರ್‌. ಶ್ರೀಧರ್‌ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Santosh Lad ಪತ್ರಿಕಾ ವಿತರಕರ ವಿಮಾ ಯೋಜನೆ. ಕೆಲ ಷರತ್ತುಗಳ ಸಡಿಲಿಕೆಗೆ ಮನವಿ

Santosh Lad ಪತ್ರಿಕಾ ವಿತರಕರ ಅಪಘಾತ ವಿಮಾ ಪರಿಹಾರ ನೀಡುವಲ್ಲಿ ನಿಬಂಧನೆಗಳ...

Shimoga News ವ್ಯಾಪಾರದ ಜೊತೆ ಸಾರ್ವಜನಿಕ ಸೇವೆಯೂ‌ ಮುಖ್ಯ- ಹೆಚ್.ವೈ.ಸತೀಶ್

Shimoga News ವ್ಯಾಪಾರದ ಜತೆಯಲ್ಲಿ ಸಾರ್ವಜನಿಕ ಸೇವೆಯು ಮುಖ್ಯ. ಹಲವಾರು ಎಪಿಎಂಸಿಗಳಲ್ಲಿ...

Guarantee scheme ಕಾಲೇಜಿಗೆ ಹೋಗಿಬರಲು “ಶಕ್ತಿ” ನೀಡಿದ ಪಾಸ್ ನಿಂದನಾನೀಗ ನಿರಾಳ- ದೀಕ್ಷಾ

Guarantee scheme ನಾನು ಗೋಪಾಳದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ವ್ಯಾಸಂಗ...

Gruha Lakshmi Scheme ಸಮಾಜಸೇವೆಗೆ ಮನಸ್ಸು ಮಾಡಿದ “ಗೃಹ ಲಕ್ಷ್ಮಿ” ಫಲಾನುಭವಿ ಅನುಪಮಾ

Gruha Lakshmi Scheme ಸಾಕಷ್ಟು ಓದಿಕೊಂಡಿರುವ ನಾನು ಬಡವರಿಗೆ ಸಹಾಯ ಮಾಡುವ,...