ಶಿವಮೊಗ್ಗ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಯೋಗಚಾರ್ಯ ಶ್ರೀ ಸಿವಿ ರುದ್ರಾರಾಧ್ಯ ಯೋಗ ಮಂದಿರ ನಾಮಕರಣ ಸಮಾರಂಭ
ಶಿವಮೊಗ್ಗ ನಗರದ ಗುಂಡಪ್ಪ ಶೆಡ್ ಬಡಾವಣೆಯಲ್ಲಿ ನಿರ್ಮಿಸಿರುವ ಯೋಗ ಮಂದಿರಕ್ಕೆ ಸೂಕ್ತ ವ್ಯಕ್ತಿಯ ಹೆಸರನ್ನು ನಾಮಕರಣ ಮಾಡಬೇಕೆಂದು ನಿವಾಸಿಗಳು ಸಭೆ ಸೇರಿದ್ದರು. ಸಭೆಯ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಕೆಎಸ್ ಈಶ್ವರಪ್ಪನವರ ವಹಿಸಿದ್ದರು. ಶಿವಮೊಗ್ಗ ನಗರ ದ ವಿವಿಧ ಬಡಾವಣೆಗಳಲ್ಲಿ 29 ಯೋಗ ಶಾಲೆಗಳನ್ನು ಆರಂಭಿಸಿ ಉಚಿತ ಯೋಗ ತರಗತಿಗಳನ್ನು ನಡೆಸುತ್ತಿರುವ ಪ್ರತಿ ಮನೆ -ಮನೆಗೂ ಯೋಗ ಎಂಬ ಧ್ಯೇಯವನ್ನು ಹೊಂದಿ ಆರೋಗ್ಯಪೂರ್ಣ ಸಮಾಜ ದ ಚಿಂತನೆಯನ್ನು ಹೊಂದಿ ಶಿವಮೊಗ್ಗ ಜನತೆಗೆ ಯೋಗ ಉಚಿತ ಶಿಕ್ಷಣವನ್ನು 2004ರಿಂದಲೂ ನೀಡುತ್ತಿರುವ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಗಿ ಶ್ರೀ ಶಿವಗಂಗಾ ಯೋಗ ಮಹಾವಿದ್ಯಾಲಯವನ್ನು ಸ್ಥಾಪಿಸಿ ಜನಸಾಮಾನ್ಯರಿಗೆ ಯೋಗ ಪ್ರಪಂಚದ ದಾರಿಯಲ್ಲಿ ಸಾಗುವಂತೆ ಮಾಡಿದ ಶ್ರೀ ಶಿವಗಂಗಾ ಯೋಗ ಕೇಂದ್ರದ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಶ್ರೀ ಸಿವಿ ರುದ್ರಾರಾಧ್ಯ ಯೋಗ ಮಂದಿರ ಎಂಬುದಾಗಿ ನಾಮಕರಣ ಮಾಡುವುದು ಸೂಕ್ತವೆಂದು ಒಮ್ಮತ ದಿಂದ ನಿರ್ಣಯ ಕೈಗೊಳ್ಳಲಾಯಿತು.
ಈ ಮೂಲಕ ಅವರ ಸೇವೆಯನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಸದಾವಕಾಶ ಶಿವಮೊಗ್ಗ ಜನತೆಗೆ ದೊರೆಯುವುದೆಂಬ ಧನ್ಯತಾಭಾವ ಅದಾಗಿತ್ತು.
ಈ ಉದ್ದೇಶಕ್ಕಾಗಿ ಎಂಟನೇ ಅಂತರರಾಷ್ಟ್ರೀಯ ಯೋಗದಿನದ ಮುನ್ನವೇ ನಾಮಕರಣ ಸಮಾರಂಭ ಏರ್ಪಡಿಸಿ ತನ್ಮೂಲಕ ಯೋಗದಿನದ ಯೋಗೋತ್ಸವ ಕ್ಕೆ ಮುನ್ನುಡಿಯಾಗಿ ನಾಮಕರಣ ಉತ್ಸವ
ಈ ದಿವ್ಯವಾದ ಸಮಾರಂಭಕ್ಕೆ ಶಿವಮೊಗ್ಗ ನಗರದ ಸಾರ್ವಜನಿಕರು, ಯೋಗಾಸಕ್ತರು ಆಗಮಿಸಬೇಕೆಂದು ಕೋರುತ್ತಿದ್ದೇವೆ ಎಂದು ಶಿವಮೊಗ್ಗ ದ ಪತ್ರಿಕಾಭವನದಲ್ಲಿ ಕೆ. ಇ ಕಾಂತೇಶ್ ಮಾಜಿ ಸದಸ್ಯರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್
ಶಿವಮೊಗ್ಗ
ಸುಧಾಕರ್, ಯೋಗ ಶಿಕ್ಷಕರು, ಶಿವಗಂಗಾ ಯೋಗ ಕೇಂದ್ರ
ಶ್ರೀ ವಿಜಯ್ ಕುಮಾರ್, ಶ್ರೀ ಶ್ರೀಧರ್ ಮತ್ತಿತರು ಉಪಸ್ಥಿತರಿದ್ದರು.
