Monday, April 13, 2026
Monday, April 13, 2026

ಪ್ರವಾಸಿಗರನ್ನ ರಕ್ಷಿಸಿದ ಭಾರತೀಯ ಸೇನೆ

Date:

ದುರ್ಗಮ ರಸ್ತೆಗಳಲ್ಲಿ ಚಾಲನೆ ಮಾಡುವುದು ಕೆಲವರಿಗೆ ಗೀಳು. ಇನ್ನೂ ಕೆಲವರಿಗೆ ಸಾಹಸ ಮಾಡುವ ಹುಮ್ಮಸ್ಸು ಇರುತ್ತದೆ.
ಆದರೆ, ಹಲವು ಬಾರಿ ಇಂತಹ ಸಾಹಸ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿ ವಿಲವಿಲನೆ ಒದ್ದಾಡುವಂತಾಗುತ್ತದೆ.

ಸಿಂಧ್ ನದಿಯಲ್ಲಿ ಇಂತಹ ಸಹಾಸ ಮಾಡಲು ಹೋಗಿ ಪ್ರವಾಸಿಗರ ತಂಡವೊಂದು ಸಿಲುಕಿತ್ತು.

ಇವರ ನೆರವಿಗೆ ಧಾವಿಸಿದ್ದು ಭಾರತೀಯ ಸೇನೆ. ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್ ನಲ್ಲಿನ ಸಿಂಧ್ ನದಿ ಉಕ್ಕಿ ಹರಿಯುತ್ತಿತ್ತು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಬೇಕಾದ ರಸ್ತೆ ಮೇಲೆ ನದಿ ನೀರು ಧುಮ್ಮಿಕ್ಕಿ ಹರಿಯುತ್ತಿತ್ತು.

ಇಂತಹ ಸಂದರ್ಭದಲ್ಲಿಯೇ ಪ್ರವಾಸಿಗರ ತಂಡ ತಮ್ಮ ಜಿಪ್ಸಿ ವಾಹನದಲ್ಲಿ ರಸ್ತೆಯನ್ನು ದಾಟಲು ಮುಂದಾಗಿದೆ. ಆದರೆ, ನೀರು ಹರಿವು ಹೆಚ್ಚಾಗಿದ್ದರಿಂದ ದಾರಿ ಮಧ್ಯದಲ್ಲಿ ನೀರಿನಲ್ಲಿ ಸಿಲುಕಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು.

ಈ ವಿಷಯ ಅರಿತ ಭಾರತೀಯ ಸೇನೆಯ ಸೈನಿಕರು ತಮ್ಮ ಸೇನಾ ಟ್ರಕ್ ನೊಂದಿಗೆ ಕ್ರೇನ್ ಸ್ಥಳಕ್ಕೆ ತಂದರು. ಈ ಕ್ರೇನ್ ಸಹಾಯದಿಂದ ನೀರಿನಲ್ಲಿ ಸಿಲುಕಿದ್ದ ಜಿಪ್ಸಿ ವಾಹನ ಮತ್ತು ಅದರಲ್ಲಿದ್ದ ಪ್ರವಾಸಿಗರನ್ನು ದಡ ಸೇರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.ಸೈನಿಕರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related