Friday, February 6, 2026
Friday, February 6, 2026

ಸೇರಿಗೆ ಸವ್ವಾಸೇರು… ಈ ಘಟನೆ!

Date:

ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ವಿಚಿತ್ರ ಘಟನೆ ನಡೆದಿದೆ.

ಲೈನ್‌ಮ್ಯಾನ್‌ ಒಬ್ಬಾತನ ಬೈಕ್‌ಗೆ ದಾಖಲೆ ಪತ್ರಗಳಲ್ಲಿ ಎಂದು ಪೊಲೀಸ್‌ ಅಧಿಕಾರಿ ದಂಡ ವಿಧಿಸಿದರು. ಇದಕ್ಕೆ ಪ್ರತಿಯಾಗಿ ಇದೇ ಲೈನ್‌ಮ್ಯಾನ್‌, ಪೊಲೀಸ್‌ ಠಾಣೆಗೆ ಮೀಟರ್‌ ಸಂಪರ್ಕವಿಲ್ಲ ಎಂದು ಪವರ್‌ ಕಟ್‌ ಮಾಡಿ ಸುದ್ದಿಯಾಗಿದ್ದಾರೆ.

ಹರ್ದಾಸ್‌ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ತನಿಖೆಗೆ ವಿದ್ಯುತ್‌ ಇಲಾಖೆ ಆದೇಶ ನೀಡಿದೆ.

ಹರ್ದಾಸ್‌ಪುರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್‌ ಅಧಿಕಾರಿ ಮೋದಿ ಸಿಂಗ್‌ ವಾಹನ ತಪಾಸಣೆ ಮಾಡುತ್ತಿದ್ದರು. ಆಗ ಅದೇ ದಾರಿಯಲ್ಲಿ ಲೈನ್‌ಮ್ಯಾನ್‌ ಭಗವಾನ್‌ ಸ್ವರೂಪ್ ಬೈಕ್‌ ಚಲಾಯಿಸಿಕೊಂಡು ಬಂದಿದ್ದರು. ಅವರ ಬೈಕ್‌ ಅನ್ನು ತಡೆದ ಮೋದಿ ಸಿಂಗ್‌, ಅಗತ್ಯ ದಾಖಲೆಗಳನ್ನು ತೋರಿಸಲು ಹೇಳಿದ್ದರು. ಈಗ ಇಲ್ಲ, ಮನೆಗೆ ಹೋಗಿ ತಂದು ತೋರಿಸುವೆ ಎಂದು ಭಗವಾನ್‌ ಮನವಿ ಮಾಡಿದ್ದರು.

ಆದರೆ, ಭಗವಾನ್‌ ಅವರ ಮನವಿಯನ್ನು ತಿರಸ್ಕರಿಸಿದ ಮೋದಿ ಸಿಂಗ್‌, 500 ರೂಪಾಯಿ ದಂಡ ಪಾವತಿಸುವಂತೆ ಚಲನ್‌ ನೀಡಿದ್ದರು. ಇದರಿಂದ ನೊಂದ ಭಗವಾನ್‌, ತನ್ನ ಸಹೋದ್ಯೋಗಿಗಳಿಗೆ ಕರೆ ಮಾಡಿ ವಿವರ ನೀಡಿದ್ದ. ಅಲ್ಲದೆ, ಪೊಲೀಸ್‌ ಠಾಣೆಯ ಪವರ್‌ ಕಟ್‌ ಮಾಡುವಂತೆ ಕೇಳಿಕೊಂಡಿದ್ದ.

ಶನಿವಾರ ರಾತ್ರಿ ವಿದ್ಯುತ್‌ ಇಲಾಖೆ ಸಿಬ್ಬಂದಿ ಹರ್ದಾಸ್‌ಪುರ ಪೊಲೀಸ್‌ ಠಾಣೆಯ ಪವರ್‌ ಕಟ್‌ ಮಾಡಿದ್ದರು. ಏಕೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಕೇಳಿದಾಗ ಭಗವಾನ್‌ ಹೆಸರು ಪ್ರಸ್ತಾಪವಾಗಿದೆ. ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಆತ, ಪೊಲೀಸ್‌ ಠಾಣೆಯಲ್ಲಿ ವಿದ್ಯುತ್‌ ಮೀಟರ್‌ ಇರಲಿಲ್ಲ. ಹೀಗಾಗಿ ಅದು ಅಕ್ರಮ ವಿದ್ಯುತ್‌ ಸಂಪರ್ಕ ಎಂದು ಹೇಳಿದ್ದಾನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...