ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮೇ. 21ರಂದು ಶನಿವಾರ ಬೆಳಿಗ್ಗೆ ಶಾಂತವೇರಿ ಗೋಪಾಲಗೌಡರ ದತ್ತಿ ಮತ್ತು ಕಾಗೋಡು ಹೋರಾಟ ಒಂದು ಚಿಂತನೆ ದತ್ತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವನ್ನು ದತ್ತಿ ದಾನಿಗಳಾದ ಪ್ರೊ. ಎಂ. ಬಿ. ನಟರಾಜ್ ಉದ್ಘಾಟಿಸಿದರು. ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ರೈತನಾಯಕರಾದ ಕೆ. ಟಿ. ಗಂಗಾಧರ ಉಪನ್ಯಾಸ ನೀಡಿದರು. ಎನ್. ಹೆಚ್. ಶ್ರೀಕಾಂತ್, ಡಾ. ಮಧು, ಟಿ. ಪಿ. ನಾಗರಾಜ್, ಮೂರ್ತಿ ಅವರು ಭಾಗವಹಿಸಿದ್ದರು.