Monday, December 15, 2025
Monday, December 15, 2025

ಪುಟಿನ್ ಅನಾರೋಗ್ಯ: ರಷ್ಯದಲ್ಲಿ ಆಂತರಿಕ ದಂಗೆ?-ಜ.ಬುಡಾನೊವ್

Date:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಕಾನ್ಸರ್​ ಮತ್ತು ಇನ್ನಿತರ ಗಂಭೀರ ಕಾಯಿಲೆಗಳು ಇವೆ ಎನ್ನಲಾಗಿದೆ.

ರಷ್ಯಾದಲ್ಲಿ ದಂಗೆ ರೂಪುಗೊಳ್ಳುತ್ತಿದ್ದು, ಅವರ ಅಧಿಕಾರದ ಅವಸಾನಕ್ಕೆ ಈ ಯುದ್ಧವೇ ಕಾರಣ ಆಗಲಿದೆ ಯೂಕ್ರೇನ್​ ಆರೋಪಿಸಿದೆ.
ರಷ್ಯಾದಲ್ಲಿ ಜನರು ದಂಗೆಯನ್ನು ತಡೆಯಲು ಯಾರಿದಂಲೂ ಸಾಧ್ಯವಾಗುವುದಿಲ್ಲ. ಇದಕ್ಕೆ ಪುತಿನ್​ ಬಲಿಪಶು ಆಗುವುದು ಮತ್ತು ರಷ್ಯಾ ಪತನ ನಿಶ್ಚಿತ ಎಂದು ಯೂಕ್ರೇನ್​ ಸೇನೆಯ ಬೇಹುಗಾರಿಕಾ ವಿಭಾಗದ ಮುಖ್ಯಸ್ಥ ಮೇಜರ್​ ಜನರಲ್​ ಕಿರಿಲೋ ಬುಡಾ-ನೋವ್​ ಹೇಳಿದ್ದಾರೆ.

ಈ ಯುದ್ಧವು ಆಗಸ್ಟ್​ ಎರಡನೇ ವಾರದಲ್ಲಿ ನಿರ್ಣಾಯಕ ಹಂತ ತಲುಪುವ ಸಾಧ್ಯತೆ ಇದೆ. ಈ ವರ್ಷಾಂತ್ಯಕ್ಕೆ ಸಕ್ರಿಯ ಸಮರ ಕೊನೆಯಾಗಲಿದೆ. ಡಾನ್​ಬಾಸ್​, ಕ್ರಿಮಿಯಾ ಸೇರಿ ನಮ್ಮೆಲ್ಲ ಪ್ರದೇಶಗಳ ಮೇಲೆ ಪಾರಮ್ಯ ಸಾಧಿಸಲಿದ್ದೇವೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಡೊನೆಟ್​ಸ್ಕ್​ ಪ್ರಾಂತ್ಯದ ಕೈಗಾರಿಕಾ ಪ್ರದೇಶಗಳಿಗೆ ಪೂರೈಕೆಯ ಮಾರ್ಗವನ್ನು ನಾಶ ಮಾಡಲು ಮಾರ್ಟರ್​ ದಾಳಿಯನ್ನು ರಷ್ಯಾ ಆರಂಭಿಸಿದೆ ಎಂದು ತಿಳಿಸಿದೆ.

ಖಾರ್ಕಿವ್​ನಿಂದ ಹಿಂದೆ ಸರಿದ ರಷ್ಯಾ ಪಡೆ
ಯೂಕ್ರೇನ್​ ಎರಡನೇ ಅತಿ ದೊಡ್ಡ ನಗರ ಖಾರ್ಕಿವ್​ ಮೇಲೆ ಒಂದು ವಾರ ಬಾಂಬ್​ ಹಾಕಿ, ಅದನ್ನು ಸುತ್ತುವರಿದಿದ್ದ ರಷ್ಯಾ ಸೇನೆ ಈಗ ಹಿಂದೆ ಸರಿಯುತ್ತಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...