Sunday, October 6, 2024
Sunday, October 6, 2024

ಟಾಟಾ ಐಪಿಎಲ್ 22 ಪಂಜಾಬ್ ಎದುರು ಸುಲಭ ಸೋಲಿಗೆ ತುತ್ತಾದ ಆರ್.ಸಿ.ಬಿ.

Date:

ಪಂಜಾಬ್​ ನೀಡಿದ ಬೃಹತ್​ ಮೊತ್ತದ ಗುರಿಯನ್ನು ಬೆನ್ನತ್ತಿದ್ದ ಆರ್​ಸಿಬಿಗೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕರಾದ ವಿರಾಟ್​ ಕೊಹ್ಲಿ 20 ರನ್​, ನಾಯಕ ಫಾಫ್ ಡು ಪ್ಲೆಸಿಸ್ 10 ರನ್​ ಮತ್ತು ಮಹಿಪಾಲ್ 6 ರನ್​ ಗಳಿಸಿ ಪೆವಿಲಿಯನ್​ ಹಾದಿ ಹಿಡಿದರು. ಪವರ್​ ಪ್ಲೇನಲ್ಲೇ ಆರ್​ಸಿಬಿ 40 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಬಳಿಕ ಬಂದ ಮ್ಯಾಕ್ಸ್​ವೆಲ್ ಅವರು​ ರಜತ್ ಪಟಿದಾರ್ ಜೊತೆಗೂಡಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಈ ಇಬ್ಬರು ಆಟಗಾರ ಅಬ್ಬರಿಸಿ 64 ರನ್​ಗಳ ಜೊತೆಯಾಟವಾಡಿದರು. ಆದ್ರೆ ರನ್​ ಗಳಿಸುವ ಭರದಲ್ಲಿ ಪಟಿದಾರ್ 26ಕ್ಕೆ ಔಟಾದರು. ಇದರ ಬೆನ್ನಲ್ಲೇ 35 ರನ್​ ಗಳಿಸಿ ಅಬ್ಬರಿಸುತ್ತಿದ್ದ ಮ್ಯಾಕ್ಸ್​ವೆಲ್​ ಸಹ ಪೆವಿಲಿಯನ್​ ದಾರಿ ಹಿಡಿದರು.

ಮ್ಯಾಕ್ಸ್​ವೆಲ್​ ಔಟಾದ ಬಳಿಕ ಉಳಿದ ಬ್ಯಾಟ್ಸ್​ಮನ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ದಿನೇಶ್ ಕಾರ್ತಿಕ್ 11 ರನ್​, ಅಹ್ಮದ್​ 9 ರನ್​, ವನಿಂದು ಹಸರಂಗ 1 ರನ್​, ಹರ್ಷಲ್ ಪಟೇಲ್ 11 ರನ್​, ಮೊಹಮ್ಮದ್ ಸಿರಾಜ್ 9 ಮತ್ತು ಜೋಸ್ ಹ್ಯಾಜಲ್​ವುಡ್ 7 ರನ್​ ಗಳಿಸಿ ಅಜಯರಾಗಿ ಉಳಿದರು. ಒಟ್ಟಿನಲ್ಲಿ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಿಗೆ 9 ವಿಕೆಟ್​ ಕಳೆದುಕೊಂಡು 155 ರನ್​ ಗಳಿಸಲು ಮಾತ್ರ ಸಶಕ್ತವಾಯಿತು.

155 ರನ್​ಗಳನ್ನು ಕಲೆ ಹಾಕುವ ಮೂಲಕ ಆರ್​ಸಿಬಿ ತಂಡ ಪಂಜಾಬ್​ ವಿರುದ್ಧ 54 ರನ್​ಗಳ ಹೀನಾಯ ಸೋಲು ಕಂಡಿತು. ಪಂಜಾಬ್​ ಪರ ಕಾಗಿಸೋ ರಬಾಡಾ 3 ವಿಕೆಟ್​ ಪಡೆದ್ರೆ, ಧವನ್​ ಮತ್ತು ರಾಹುಲ್ ಚಹರ್​ ತಲಾ ಎರಡು ವಿಕೆಟ್​ ಕಬಳಿಸಿದ್ರು. ಹರ್ಪ್ರಿತ್​ ಬ್ರಾರ್​ ಮತ್ತು ಹರ್ಷದೀಪ್​ ಸಿಂಗ್ ತಲಾ ಒಂದೊಂದು ವಿಕೆಟ್​ ಪಡೆದು ತಂಡದ ಗೆಲುವಿಗೆ ಆಸರೆಯಾದರು.

ಪ್ಲೇ-ಆಫ್​ ರೇಸ್​​ನಲ್ಲಿ ಉಳಿದುಕೊಳ್ಳಲು ಪಂಜಾಬ್ ತಂಡಕ್ಕೆ ನಿನ್ನೆಯ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅತಿ ಅವಶ್ಯವಾಗಿತ್ತು. ಅದರಂತೆ ತಂಡ 54 ರನ್​ಗಳಿಂದ ಆರ್​ಸಿಬಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ಪ್ಲೇ ಆಫ್​ ಕನಸು ಇನ್ನು ಜೀವಂತವಾಗಿದೆ. ಆರ್​ಸಿಬಿಗೂ ಪ್ಲೇ ಆಫ್​ ಕನಸು ಜೀವಂತವಾಗಿದ್ದು, ಬಲಿಷ್ಠ ಲಖನೌ ತಂದ ವಿರುದ್ಧ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.

ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಎದುರಾಗಿದ್ದ ಈ ಉಭಯ ತಂಡಗಳು ಪ್ಲೇ-ಆಫ್​ ರೇಸ್​ನಲ್ಲಿದ್ದಾವೆ. ಈ ಎರಡು ತಂಡಗಳಿಗೂ ನಿನ್ನೆಯ ಪಂದ್ಯ ಅತಿ ಮುಖ್ಯವಾಗಿತ್ತು. ಐಪಿಎಲ್​​ನಲ್ಲಿ ಆರ್​​ಸಿಬಿ ಇಲ್ಲಿಯವರೆಗೆ 13 ಪಂದ್ಯಗಳ ಪೈಕಿ 7ರಲ್ಲಿ ಜಯ, 6ರಲ್ಲಿ ಸೋಲು ಕಂಡಿದ್ದು, 14 ಪಾಯಿಂಟ್​​ಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆರ್​ಸಿಬಿ ವಿರುದ್ಧ ಗೆದ್ದ ಪಂಜಾಬ್​ ಸದ್ಯ 6ನೇ ಸ್ಥಾನಕ್ಕೇರಿದೆ.

ಇಂದು ಸಂಜೆ 7.30ಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ಪಂದ್ಯ ನಡೆಯಲಿದ್ದು, ಹೈದರಾಬಾದ್​ ತಂಡಕ್ಕೆ ಪ್ಲೇ ಆಫ್​ ಕನಸು ಜೀವಂತವಾಗಿರಿಸಲು ಗೆಲುವು ಅವಶ್ಯಕವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಅಕ್ಟೋಬರ್ 7 ರಂದು ಆಲ್ಕೊಳ‌ ಸುತ್ತಮುತ್ತ ವಿದ್ಯುತ್ ಸರಬರಾಜು ಇರುವುದಿಲ್ಲ

MESCOM ಶಿವಮೊಗ್ಗ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಶಿವಮೊಗ್ಗ...

Nehru Stadium Shimoga ಪ್ರಾಥಮಿಕ ಶಾಲಾಮಕ್ಕಳ ಕ್ರೀಡಾಕೂಟ ಉದ್ಘಾಟನೆ

Nehru Stadium Shimoga ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ...

Shimoga Dasara 2024 ಶಿವಮೊಗ್ಗ ರಂಗದಸರಾದಲ್ಲಿ ಅ.5 ರಿಂದ ನಾಟಕ ಪ್ರದರ್ಶನಗಳ ಸುಗ್ಗಿ

Shimoga Dasara 2024 ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯು ಆಯೋಜನೆ...

Shivamogga News ಕೆರೆ,ಕಟ್ಟೆ,ಹಳ್ಳ ಜಮೀನು ಇತರೆ ಸರ್ಕಾರದ ಸ್ವತ್ತು ಒತ್ತುವರಿ ಗಮನಕ್ಕೆ ಬಂದಾಕ್ಷಣ ಕ್ರಮ ಕೈಗೊಳ್ಳಿ-ನ್ಯಾ.ಬಿ.ಎ.ಪಾಟೀಲ್

Shivamogga News ಸರ್ಕಾರದ ಸ್ವತ್ತಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು...