Wednesday, December 17, 2025
Wednesday, December 17, 2025

ಉಕ್ರೇನ್ ಶಾಲೆಯ ಮೇಲೆ ರಷ್ಯ ಬಾಂಬ್ದಾಳಿ:6೦ ಸಾವು

Date:

ಪೂರ್ವ ಉಕ್ರೇನ್​ ನ ಲುಹಾನ್ ಸ್ಕ್​ ಪ್ರಾಂತ್ಯದ ಬಿಲೋಹೊರಿವ್ಕಾ ಎಂಬಲ್ಲಿನ ಶಾಲೆಯ ಮೇಲೆ ರಷ್ಯಾ ಸೇನೆ ನಡೆಸಿದ ಬಾಂಬ್​ ದಾಳಿಗೆ ಮಕ್ಕಳು ಸೇರಿ 60 ಜನ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರನ್ನು ಸ್ಥಳದಿಂದ ಪಾರುಮಾಡಲಾಗಿದ್ದು, ಏಳು ಜನ ಗಂಭೀರ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್​ ಸೆರ್​ಹಿಯ್​ ಗೈಡಾಯ್​ ತಿಳಿಸಿದ್ದಾರೆ.

ಶಾಲೆಯನ್ನು ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತಿಸಲಾಗಿತ್ತು. ಅಲ್ಲಿ ಮಕ್ಕಳು ಸೇರಿ 90ಕ್ಕೂ ಹೆಚ್ಚು ಜನ ಆಶ್ರಯ ಪಡೆದುಕೊಂಡಿದ್ದರು. ಭಾನುವಾರ ಅಪರಾಹ್ನ ರಷ್ಯಾ ಸೇನೆ ಈ ಶಾಲೆಯ ಮೇಲೆ ಬಾಂಬ್​ ದಾಳಿ ನಡೆಸಿತು.

ಸ್ಫೋಟದಿಂದ ಉಂಟಾದ ಬೆಂಕಿ ನಾಲ್ಕು ಗಂಟೆ ಕಾಲ ಹೊತ್ತಿ ಉರಿದಿದೆ ಎಂದು ಗೈಡಾಯ್​ ವಿವರಿಸಿದರು.

ದಾಳಿ ನಡೆಸುತ್ತಿರುವ ರಷ್ಯಾ ವನ್ನು ಎದುರಿಸುವುದಕ್ಕೆ ಅಗತ್ಯವಾದ ಹೆಚ್ಚುವರಿ ಸೇನಾ ನೆರವು ನೀಡುವುದನ್ನು ಬ್ರಿಟನ್​ ಖಾತರಿಪಡಿಸಿದೆ. 1.3 ಶತಕೋಟಿ ಪೌಂಡ್ಸ್​ ಸೇನಾ ನೆರವು ನೀಡುವುದಾಗಿ ಬ್ರಿಟನ್​ ಘೋಷಿಸಿದೆ.

ರಷ್ಯಾ ಸೇನೆ ವಿಶೇಷ ಸೇನಾ ಕಾರ್ಯಾಚರಣೆ ಹೆಸರಿನಲ್ಲಿ ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ. ಮರಿಯುಪೋಲ್​ ಸುತ್ತಮುತ್ತ ನಾಗರಿಕರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದಕ್ಕೆ ಸಾಕ್ಷ$್ಯಗಳು ಬಹಿರಂಗವಾಗಿವೆ ಎಂದು ಯೂಕ್ರೇನ್​ ಮತ್ತು ಅದರ ಪಾಶ್ಚಾತ್ಯ ಮಿತ್ರ ರಾಷ್ಟ್ರಗಳು ಆರೋಪಿಸಿವೆ. ಆದರೆ, ಈ ಆರೋಪವನ್ನು ಮಾಸ್ಕೋ ನಿರಾಕರಿಸಿದೆ.

ಮರಿಯುಪೋಲ್​ ವಶಕ್ಕೆ ಯತ್ನ
ಯೂಕ್ರೇನ್​ನ ಬಂದರು ನಗರ ಮರಿಯುಪೋಲ್​ ಬಹುತೇಕ ನಾಶವಾಗಿದ್ದು, ರಷ್ಯಾ ವಶದಲ್ಲಿದೆ. ಈ ನಗರದ ಸ್ಟೀಲ್​ ಟಕ ಆವರಣದಲ್ಲಿ ನಾಗರಿಕರು ಮತ್ತು ಯೂಕ್ರೇನ್​ ಸೇನೆ ಆಶ್ರಯ ಪಡೆದುಕೊಂಡಿದ್ದು, ರಷ್ಯಾ ಸೇನೆಗೆ ತೀವ್ರ ಪ್ರತಿರೋಧ ತೋರಿದ್ದಾರೆ.

ಇವರನ್ನೆಲ್ಲ ಹೊರ ಹಾಕಿ ಅಥವಾ ಶರಣಾಗುವಂತೆ ಮಾಡಿ ಮರಿಯುಪೋಲ್​ ಅನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಳ್ಳಲು ರಷ್ಯಾ ಸೇನೆ ಪ್ರಯತ್ನ ಮುಂದುವರಿಸಿದೆ.

ಎರಡನೇ ವಿಶ್ವ ಮಹಾಯುದ್ಧದಲ್ಲಿ 1945 ಮೇ 8ರಂದು ಗೆಲುವು ಸಾಧಿಸಿದ ನೆನಪಿಗಾಗಿ ವಿಕ್ಟರಿ ಇನ್​ ಯುರೋಪ್​ ಡೇ ಆಚರಿಸಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಜಿ7 ನಾಯಕರು ವರ್ಚುವಲ್​ ಆಗಿ ಮಾತುಕತೆ ನಡೆಸಿದ ವೇಳೆ, ಬ್ರಿಟನ್​ ಈ ನೆರವನ್ನು ಖಾತರಿಪಡಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...