Monday, July 27, 2026
Monday, July 27, 2026

ನನ್ನ ಕುಟುಂಬವನ್ನೇ ಸೆರೆ ಹಿಡಿಯಲು ರಷ್ಯ ಪ್ರಯತ್ನಿಸಿತು- ಝೆಲೆನ್ಸ್ಕಿ

Date:

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಇತ್ತೀಚಿನ ಸಂದರ್ಶನವೊಂದರಲ್ಲಿ ರಷ್ಯಾದ ಪಡೆಗಳು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಸೆರೆ ಹಿಡಿಯಲು ತುಂಬಾ ಸಮೀಪಕ್ಕೆ ಬಂದಿದ್ದವು ಎಂದು ಹೇಳಿದ್ದಾರೆ.

ಉಕ್ರೇನ್ ಯುದ್ಧದ ಆರಂಭಿಕ ದಿನಗಳ ತೀವ್ರತೆಯನ್ನು ನೆನಪಿಸಿಕೊಳ್ಳುತ್ತಾ ಅವರು ಟೈಮ್ ನಿಯತಕಾಲಿಕೆಯೊಂದಿಗೆ ಮಾತನಾಡುವಾಗ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ನಾನು ಮತ್ತು ಪತ್ನಿ ಒಲೆನಾ ಝೆಲೆನ್‌ಸ್ಕಿ, ಮಲಗಿದ್ದ 17 ವರ್ಷದ ಮಗಳು ಮತ್ತು 9 ವರ್ಷದ ಮಗನನ್ನು ಎಬ್ಬಿಸಿ ಬಾಂಬ್ ದಾಳಿ ಆರಂಭವಾಗಿದೆ ಎಂದು ಹೇಳಿದ್ದೆವು ಎಂದು ಆ ಭೀಕರ ಕ್ಷಣಗಳನ್ನು ನೆನಪಿಸಿಕೊಂಡ ಝೆಲೆನ್‌ಸ್ಕಿ, ಆಗ ಹೊರಗಡೆ ಶಬ್ಧ ಜೋರಾಗಿತ್ತು. ಅಲ್ಲಿ ಸ್ಫೋಟಗಳು ಸಂಭವಿಸಿದ್ದವು’ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆ ವೇಳೆಗಾಗಲೇ ತನ್ನನ್ನು ಗುರಿಯಾಗಿಸಿಕೊಂಡಿದ್ದರು ಮತ್ತು ಕಚೇರಿಗಳು ಸುರಕ್ಷಿತ ಸ್ಥಳವಲ್ಲ ಎಂದು ಶೀಘ್ರದಲ್ಲೇ ಸ್ಪಷ್ಟವಾಯಿತು. ಅವರನ್ನು ಮತ್ತು ಅವರ ಕುಟುಂಬದವರನ್ನು ಕೊಲ್ಲಲು ಅಥವಾ ಸೆರೆಹಿಡಿಯಲು ರಷ್ಯಾದ ಪಡೆಗಳು ಕೀವ್‌ಗೆ ಧುಮುಕಿರುವುದಾಗಿ ನನಗೆ ಮಾಹಿತಿ ದೊರಕಿತು ಎಂದು ತಿಳಿಸಿದ್ದಾರೆ.

ಉಕ್ರೇನ್‌ನ ಮಿಲಿಟರಿ ಗುಪ್ತಚರ ಸೇವೆಯ ಹಿರಿಯ ಅಧಿಕಾರಿ ಓಲೆಕ್ಸಿ ಅರೆಸ್ಟೋವಿಚ್, ಈ ದೃಶ್ಯವು ‘ವಿಚಿತ್ರವಾಗಿತ್ತು’ ಮತ್ತು ಝೆಲೆನ್‌ಸ್ಕಿ ಹೆಂಡತಿ ಮತ್ತು ಮಕ್ಕಳು ಇನ್ನೂ ಅಲ್ಲಿದ್ದಾಗ ರಷ್ಯಾದ ಪಡೆಗಳು ಎರಡು ಬಾರಿ ಕಾಂಪೌಂಡ್‌ಗೆ ದಾಳಿ ಮಾಡಲು ಯತ್ನಿಸಿದವು ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Prahlad Joshi ಅತ್ಯಂತ ವಿನಮ್ರತೆ ಹಾಗೂ ನಿಷ್ಠೆಯಿಂದೀ ಕರ್ತವ್ಯ ಸ್ವೀಕರಿಸುತ್ತಿದ್ದೇನೆ- ಪ್ರಹ್ಲಾದ ಜೋಷಿ.

Prahlad Joshi ಇಂದು ಭಾರತ ಸರ್ಕಾರದ ಕೇಂದ್ರ ಶಿಕ್ಷಣ ಸಚಿವರಾಗಿ ಶ್ರೀ ಪ್ರಹ್ಲಾದ...

Samarth Ramdas”ಸಾತ್ವಿಕ ಹೃದಯಿ” ಸಮರ್ಥ ರಾಮದಾಸರು. ಲೇ; ಪ್ರಸಾದ್ ಶ್ರೀವತ್ಸ, ದಾವಣಗೆರೆ.

Samarth Ramdas ಜಾಂಬ ಎಂಬ ಪುಟ್ಟ ಹಳ್ಳಿ ಔರಂಗಾಬಾದ್‌ ಜಿಲ್ಲೆಯಲ್ಲಿದೆ. ಅಲ್ಲಿ...

K.S.Eshwarappa ಕನಕರ ಸ್ಥಳಮಾಹಿತಿ ಉತ್ಖನನ ಕಾರ್ಯ ಅರ್ಥಪೂರ್ಣ. ಇಂತಹ ಸಂಶೋಧನೆಗಳಿಗೆ ನನ್ನ ಬೆಂಬಲವಿದೆ – ಕೆ.ಎಸ್.ಈಶ್ವರಪ್ಪ.

K.S.Eshwarappa ಪ್ರಸ್ತುತ ಸಮಾಜದಲ್ಲಿ ಇತಿಹಾಸ ಪ್ರಜ್ಞೆ ಕೊರತೆಯಿದೆ. ಇಂತಹಸನ್ನಿವೇಶದಲ್ಲಿ ಇತಿಹಾಸ ಪ್ರಾಧ್ಯಾಪಕ,...

Dharmendra Pradhan ಧರ್ಮೇಂದ್ರ ಪ್ರಧಾನ್ ರಾಜಿನಾಮೆ,ಕೇವಲ ನೈತಿಕ ಜವಾಬ್ದಾರಿ ಎತ್ತಿ ಹಿಡಿದಿದೆ ಅಷ್ಟೆ- ವಸಂತಕುಮಾರ್.

Dharmendra Pradhan ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಕೇವಲ ನೈತಿಕತೆಯ ಜವಾಬ್ದಾರಿ ಎತ್ತಿ...