Sunday, November 16, 2025
Sunday, November 16, 2025

ಸುಮಾತ್ರಾ ದ್ವೀಪದಲ್ಲಿ ಚಿನ್ನದಗಣಿ ಕುಸಿದು 12 ಸಾವು

Date:

ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಅನಧಿಕೃತ ಚಿನ್ನದ ಗಣಿಗಾರಿಕೆ ನಡೆಯುತ್ತದ್ದಾಗ ಭೂಕುಸಿತ ಸಂಭವಿಸಿದ್ದ 12 ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಎರಡು ಗಂಟೆಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ಗಾಯಗೊಂಡ ಇಬ್ಬರು ಮಹಿಳೆಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಮತ್ತು 12 ಇತರ ಮಹಿಳೆಯರ ದೇಹಗಳನ್ನು ಅವಶೇಷಗಳಿಂದ ಹೊರತೆಗೆದಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮರ್ಲಾನ್ ರಾಜಗುಕ್ಗುಕ್ ಹೇಳಿದರು.

ಉತ್ತರ ಸುಮಾತ್ರದ ಮಾಂಡೈಲಿಂಗ್ ನಟಾಲ್ ಜಿಲ್ಲೆಯಯ ಹಳ್ಳಿಯೊಂದರಲ್ಲಿ ಸ್ಥಳೀಯ ಗ್ರಾಮದ ಮಹಿಳೆಯರು ಚಿನ್ನದ ಗಣಿಯ ವಯಯದಲ್ಲಿ ಸುಮಾರು 2 ಮೀಟರ್ (6.5 ಅಡಿ) ಆಳದ ಹೊಂಡ ತೆಗೆದು ನಿನ್ನೆ ಸಂಜೆ ಚಿನ್ನದ ಮೆತ್ತಿರುವ ಕಲ್ಲು ಹೊಡೆದು ಸಂಗ್ರಹಿಸುವ ವೇಳೆ ಭೂಕುಸಿತ ಉಂಟಾಗಿದೆ.

ಇಲ್ಲಿನ ಬೆಟ್ಟ ಗುಡ್ಡದಲ್ಲಿ ಚಿನ್ನದ ನಿಕ್ಷೇಪ ವಿದ್ದು ಅದನ್ನು ತೆಗೆಯಲು ಸ್ತಳೀಯರು ಅಪಾಯವನ್ನು ಲೆಕ್ಕಿಸದೆ ಸಾಂಪ್ರದಾಯಕವಾಗಿ ಸಣ್ಣ ಗಣಿಗಾರಿಕೆ ನಡೆಸುತ್ತಾರೆ. ಚಿನ್ನದ ಮುಖ್ಯ ಮೂಲವಾಗಿದ್ದ ಈ ಪ್ರದೇಶದಲ್ಲಿ ಅಕಾರಿಗಳು ಅಕ್ರಮ ಚಿನ್ನದ ಹೊಂಡಗಳನ್ನು ಮುಚ್ಚಿದ್ದಾರೆ ಆದರೂ ಇಂಡೋನೇಷ್ಯಾದಲ್ಲಿ ಅನೌಪಚಾರಿಕ ಗಣಿಗಾರಿಕೆ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ. ಹೆಚ್ಚಿನ ಅಪಾಯವಿರುವ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ಅಲ್ಪ ಜೀವನೋಪಾಯವನ್ನು ಒದಗಿಸುತ್ತದೆ ಎಂದು ತಿಳಿದುಬಂದಿದೆ.

ಕಳೆದ ಫೆಬ್ರವರಿ 2019 ರಲ್ಲಿ ಉತ್ತರ ಸುಲವೆಸಿ ಪ್ರಾಂತ್ಯದ ಅಕ್ರಮ ಚಿನ್ನದ ಗಣಿಗಾರಿಕೆ ವೇಳೆ ಭೂಕುಸಿತ ಉಂಟಾಂಗಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಶಿವಮೊಗ್ಗದ ಎಸ್.ಕೆ.ಮರಿಯಪ್ಪ ಅವರಿಗೆ “ಸಹಕಾರಿ ರತ್ನ” ಪ್ರಶಸ್ತಿ ಪ್ರದಾನ

CM Siddharamaiah ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ 72ನೇ...

World Diabetes Day ಮಧುಮೇಹವನ್ನ ಆರಂಭಿಕ ಪತ್ತೆ ಮತ್ತು ನಿಯಮಿತ ಪರೀಕ್ಷೆ ಮೂಲಕ ನಿಯಂತ್ರಿಸಬಹುದು- ಡಾ.ನಾಗರಾಜ ನಾಯ್ಕ್

World Diabetes Day ಮಧುಮೇಹವು ಸಾಂಕ್ರಾಮಿಕವಲ್ಲದ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದ್ದು, ಇದನ್ನು...

ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಶಿವಮೊಗ್ಗದ ಜಿ.ಎಂ.ಜಗದೀಶ್ ನಿರ್ದೇಶಕರಾಗಿ ಆಯ್ಕೆ

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ಗುತ್ತಿಗೆದಾರರ ಸಮಿತಿಗೆ ನಿರ್ದೇಶಕರಾಗಿ ಶಿವಮೊಗ್ಗ...