Thursday, February 5, 2026
Thursday, February 5, 2026

ಎಮ್ಮೆ ನಿನಗೆ ಸಾಟಿಯಿಲ್ಲ! ರೈಲನ್ನೇ ನಿಲ್ಲಿಸಿದೆಯಲ್ಲ!

Date:

ಎಮ್ಮೆ ನಿನಗೆ ಸಾಟಿಯಿಲ್ಲ ..ಹಾಡನ್ನ ನೀವೆಲ್ಲಾ ಕೇಳಿದ್ದೀರಿ.
ಬಿಸಿಲೋ ಬಿರುಗಾಳಿಯೋ ಮಳೆ ಚಳಿಗೆ ಊಹ್ಞೂಂ ಜಗ್ಗದ ಪ್ರಾಣಿ.
ಆದರೆ ಅವು ನಾವು ಪ್ರಯಾಣಿಸೋ ರೈಲನ್ನ ಜಗ್ಗಿ ನಿಲ್ಲುವಂತೆ ಮಾಡಿವೆ.
ರೈಲಿನ ಚಾಲಕ ಬಗ್ಗಿ ನೋಡಿ ಎಮ್ಮೆಗಳು ಹಳಿಯ ಮೇಲೆ ನಡೆಯುತ್ತಿದ್ದನ್ನ ಕಣ್ಣಾರೆ ನೋಡಿದ್ದಾನೆ.
ಪಾಪ..ಮೂಕ ಪ್ರಾಣಿ ಎಂಬ ಕನಿಕರ ಮೂಡಿದೆ. ರೈಲನ್ನ ನಿಲ್ಲಿಸಿದ. ಎಮ್ಮೆಗಳ ಪ್ರಾಣವುಳೀತು
ಈ ಘಟನೆ ನಡೆದದ್ದು ಶಿವಮೊಗ್ಗದ ಕಾಶೀಪುರ ರೈಲ್ವೇ ಗೇಟಿನ ಸಮೀಪ.

ಎಮ್ಮೆ ತಾನೆ ಅಂತ ಈಗ ಲಾರಿ ಬಸ್ಸುಗಳು
ಅವುಗಳ ಮೇಲೇಯೇ ಹರಿಸಿಕೊಂಡು ಭರ್ರನೆ ಹೋಗುವ ಎಷ್ಟೋ ಪ್ರಸಂಗ ನೋಡಿದ್ದೇವೆ.
ಕೆಲ ಸೆಕೆಂಡುಗಳ ಹೊತ್ತು ರೈಲನ್ನ ನಿಲ್ಲಿಸಿದಾಗ ಪ್ರಯಾಣಿಕರು ಗಾಭರಿಯಾದರು.ರೈಲು ತಾಳಗುಪ್ಪ ಕಡೆಗೆ ಹೊರಟಿತ್ತು. ಬಹುತೇಕ ನಡುಬಿಸಿಲ 1-10 ರ ಮಟಮಟ ಮಧ್ಯಾಹ್ನದ ವೇಳೆಯಾಗಿತ್ತು.
ಇದೇನು ಯಾವುದಾದರೂ ಅಪಘಾತವಾಗಿದೆಯ? ಎಂದು ಯೋಚಿಸತೊಡಗಿದರು.

ಆದರೆ ‌ನಿಜಾಂಶ ತಿಳಿದಾಗ ಚಾಲಕ ಮಹಾಶಯನ ಮಾನವೀಯ ನಡವಳಿಕೆಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಕಳೆದ ಮಂಗಳವಾರ
ಈ ಘಟನೆ ಸಂಭವಿಸಿದೆ.

ಆದರೆ ಎಮ್ಮೆಗಳು ಮಾತ್ರ
ಈ ಯಾವುದರ ಉಸಾಬರಿ ಹಚ್ಚಿಕೊಳ್ಳದೇ ಹಳಿಯಿಂದ ಅತ್ತ ನಡೆದು ಜಾಗ ಖಾಲಿಮಾಡಿವೆ.
ಅದಕ್ಕೆ ಹೇಳಿದ್ದು
ಎಮ್ಮೆ ನಿನಗೆ ಸಾಟಿಯಿಲ್ಲ!!!.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...