Monday, August 24, 2026
Monday, August 24, 2026

ಕೊಲ್ಕತ್ತಾ ವಿರುದ್ಧ ರಾಯಲ್ಸ್ ಜಯ

Date:

ಬ್ರಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್ 15ನೇ ಆವೃತ್ತಿಯ 30ನೇ ಪಂದ್ಯದಲ್ಲಿ ರನ್ ಸುರಿಮಳೆ!.
ಮೊದಲು ಬ್ಯಾಟ್ ಮಾಡಿ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 217 ರನ್ ಬಾರಿಸಿದರೆ, ಎದುರಾಳಿ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ 19.4 ಓವರ್ ಗಳಲ್ಲಿ 210 ರನ್ ಗಳಿಗೆ ಸರ್ವ ಪತನಗೊಂಡು 7 ರನ್ ಗಳಿಂದ ಸೋಲನ್ನು ಒಪ್ಪಿಕೊಂಡಿತು. ಆರ್ ಆರ್ ಪರ ಆರಂಭಿಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ (103 ರನ್, 61 ಎಸೆತ, 9 ಫೋರ್, 5 ಸಿಕ್ಸರ್) ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ಹಾಗೂ ಐಪಿಎಲ್ ನಲ್ಲಿ ಒಟ್ಟಾರೆ ಮೂರು ಶತಕ ಬಾರಿಸುವ ಮೂಲಕ ಗೆಲುವಿನ ರುವಾರಿಯಾದರು ಹಾಗೆಯೇ ಇನ್ನಿಂಗ್ಸ್ ನ 17ನೇ ಓವರ್ ಎಸೆದ ಸ್ಪಿನ್ನರ್ ಯಜುವೇಂದ್ರ ಚಹಲ್ ಕೇವಲ ಎರಡು ರನ್ ನೀಡಿ ಹ್ಯಾಟ್ರಿಕ್ ಸಮೇತ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.


ಕೊನೆಯ ಓವರ್ ತನಕವೂ ಗೆಲುವು ಅತ್ತಿತ್ತ ಓಡಾಡುತ್ತಲೇ ಕೊನೆಗೆ ರಾಜಸ್ಥಾನ್ ರಾಯಲ್ಸ್ ಪಾಲಿಗೆ ದಕ್ಕಿತು. ಗುರಿ ಬೆನ್ನಟ್ಟಿದ ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ 85 ರನ್ ಭಾರಿಸಿದರೆ, ಆರಂಭಿಕ ಬ್ಯಾಟರ್ ಫಿಂಚ್ ಸ್ಪೋಟಕ 58 ರನ್ ಗಳಿಸಿದರು. ಕೊನೆಯಲ್ಲಿ ಉಮೇಶ್ ಯಾದವ್ ಎರಡು ಸಿಕ್ಸರ್ ಗಳ ಸಮೇತ 21ರನ್ ಬಾರಿಸಿ ಗೆಲುವಿನ ಆಸೆ ಮೂಡಿಸಿದರು ಆದರೆ ಒಬೇದ್ ಮುಕಾಯ್ ಎಸೆತಕ್ಕೆ ಬೌಲ್ಡ್ ಆದರೂ
ಮೊದಲು ಬ್ಯಾಟ್ ಮಾಡಲು ಸಿಕ್ಕಿದ ಅವಕಾಶವನ್ನು ಆರ್ ಆರ್ ತಂಡದ ಆರಂಭಿಕರಾದ ದೇವದತ್ ಪಡಿಕ್ಕಲ್ (24) ಹಾಗೂ ಜೋಸ್ ಬಟ್ಲರ್ ಸದುಪಯೋಗ ಪಡೆದುಕೊಂಡರು.

ಕೆಕೆಆರ್ ಬೌಲರ್ ಗಳನ್ನು ನಿರಂತರ ಕಾಡುತ್ತಾ ಮೊದಲ ವಿಕೆಟ್ ಗೆ 9.4 ಓವರ್ ಗಳಲ್ಲಿ 97 ರನ್ ಬಾರಿಸಿದರು.
ಮೂರನೆಯ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ನಾಯಕ ಸಂಜು ಸಮ್ಸನ್ ಕೂಡ 19 ಎಸೆತಗಳಲ್ಲಿ 38 ರನ್ ಬಾರಿಸಿ ರಸೆಲ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಶಿವಂ ಮಾವಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಗೆ ಮರಳಿದರು. ಬಳಿಕ ಶಿಂಬ್ರೋನ್ ಕೂಡ 13 ಎಸೆತಗಳಲ್ಲಿ ಅಜೇಯ 26 ರನ್ ಬಾರಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟುವಂತೆ ನೋಡಿಕೊಂಡರು. ಇನ್ನಿಂಗ್ಸ್ ನ 16ನೇ ಓವರ್ ಎಸೆದ ಪ್ಯಾಟ್ ಕಮಿನ್ಸ್ ಎಸೆತವನ್ನು ಸಿಕ್ಸರ್ ಗೆ ಹಟ್ಟಿದ ಬಟ್ಲರ್ ತಮ್ಮ ಎರಡನೇ ಶತಕ ಪೂರೈಸಿದರು ಆದರೆ, ಅದೇ ಓವರ್ ನಲ್ಲಿ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿ ಚಕ್ರವರ್ತಿ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ರಿಯಾನ್ ಪರಾಗ್ (5) ಹಾಗೂ ಕರುಣ್ ನಾಯರ್ (3) ಕಡಿಮೆ ಮೊತ್ತಕ್ಕೆ ನಿರ್ಗಮಿಸಿದರು ಕೆಕೆಆರ್ ಪರ ಸುನಿಲ್ ನರೈನ್ 21 ರನ್ ವೆಚ್ಚದಲ್ಲಿ ಎರಡು ವಿಕೆಟ್ ಪಡೆದರು.

ಬ್ರಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್ 15ನೇ ಆವೃತ್ತಿಯ 30ನೇ ಪಂದ್ಯದಲ್ಲಿ ರನ್ ಸುರಿಮಳೆ!.
ಮೊದಲು ಬ್ಯಾಟ್ ಮಾಡಿ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 217 ರನ್ ಬಾರಿಸಿದರೆ, ಎದುರಾಳಿ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ 19.4 ಓವರ್ ಗಳಲ್ಲಿ 210 ರನ್ ಗಳಿಗೆ ಸರ್ವ ಪತನಗೊಂಡು 7 ರನ್ ಗಳಿಂದ ಸೋಲನ್ನು ಒಪ್ಪಿಕೊಂಡಿತು. ಆರ್ ಆರ್ ಪರ ಆರಂಭಿಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ (103 ರನ್, 61 ಎಸೆತ, 9 ಫೋರ್, 5 ಸಿಕ್ಸರ್) ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ಹಾಗೂ ಐಪಿಎಲ್ ನಲ್ಲಿ ಒಟ್ಟಾರೆ ಮೂರು ಶತಕ ಬಾರಿಸುವ ಮೂಲಕ ಗೆಲುವಿನ ರುವಾರಿಯಾದರು ಹಾಗೆಯೇ ಇನ್ನಿಂಗ್ಸ್ ನ 17ನೇ ಓವರ್ ಎಸೆದ ಸ್ಪಿನ್ನರ್ ಯಜುವೇಂದ್ರ ಚಹಲ್ ಕೇವಲ ಎರಡು ರನ್ ನೀಡಿ ಹ್ಯಾಟ್ರಿಕ್ ಸಮೇತ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.


ಕೊನೆಯ ಓವರ್ ತನಕವೂ ಗೆಲುವು ಅತ್ತಿತ್ತ ಓಡಾಡುತ್ತಲೇ ಕೊನೆಗೆ ರಾಜಸ್ಥಾನ್ ರಾಯಲ್ಸ್ ಪಾಲಿಗೆ ದಕ್ಕಿತು. ಗುರಿ ಬೆನ್ನಟ್ಟಿದ ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ 85 ರನ್ ಭಾರಿಸಿದರೆ, ಆರಂಭಿಕ ಬ್ಯಾಟರ್ ಫಿಂಚ್ ಸ್ಪೋಟಕ 58 ರನ್ ಗಳಿಸಿದರು. ಕೊನೆಯಲ್ಲಿ ಉಮೇಶ್ ಯಾದವ್ ಎರಡು ಸಿಕ್ಸರ್ ಗಳ ಸಮೇತ 21ರನ್ ಬಾರಿಸಿ ಗೆಲುವಿನ ಆಸೆ ಮೂಡಿಸಿದರು ಆದರೆ ಒಬೇದ್ ಮುಕಾಯ್ ಎಸೆತಕ್ಕೆ ಬೌಲ್ಡ್ ಆದರೂ
ಮೊದಲು ಬ್ಯಾಟ್ ಮಾಡಲು ಸಿಕ್ಕಿದ ಅವಕಾಶವನ್ನು ಆರ್ ಆರ್ ತಂಡದ ಆರಂಭಿಕರಾದ ದೇವದತ್ ಪಡಿಕ್ಕಲ್ (24) ಹಾಗೂ ಜೋಸ್ ಬಟ್ಲರ್ ಸದುಪಯೋಗ ಪಡೆದುಕೊಂಡರು. ಕೆಕೆಆರ್ ಬೌಲರ್ ಗಳನ್ನು ನಿರಂತರ ಕಾಡುತ್ತಾ ಮೊದಲ ವಿಕೆಟ್ ಗೆ 9.4 ಓವರ್ ಗಳಲ್ಲಿ 97 ರನ್ ಬಾರಿಸಿದರು.
ಮೂರನೆಯ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ನಾಯಕ ಸಂಜು ಸಮ್ಸನ್ ಕೂಡ 19 ಎಸೆತಗಳಲ್ಲಿ 38 ರನ್ ಬಾರಿಸಿ ರಸೆಲ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಶಿವಂ ಮಾವಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಗೆ ಮರಳಿದರು. ಬಳಿಕ ಶಿಂಬ್ರೋನ್ ಕೂಡ 13 ಎಸೆತಗಳಲ್ಲಿ ಅಜೇಯ 26 ರನ್ ಬಾರಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟುವಂತೆ ನೋಡಿಕೊಂಡರು. ಇನ್ನಿಂಗ್ಸ್ ನ 16ನೇ ಓವರ್ ಎಸೆದ ಪ್ಯಾಟ್ ಕಮಿನ್ಸ್ ಎಸೆತವನ್ನು ಸಿಕ್ಸರ್ ಗೆ ಹಟ್ಟಿದ ಬಟ್ಲರ್ ತಮ್ಮ ಎರಡನೇ ಶತಕ ಪೂರೈಸಿದರು ಆದರೆ, ಅದೇ ಓವರ್ ನಲ್ಲಿ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿ ಚಕ್ರವರ್ತಿ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ರಿಯಾನ್ ಪರಾಗ್ (5) ಹಾಗೂ ಕರುಣ್ ನಾಯರ್ (3) ಕಡಿಮೆ ಮೊತ್ತಕ್ಕೆ ನಿರ್ಗಮಿಸಿದರು ಕೆಕೆಆರ್ ಪರ ಸುನಿಲ್ ನರೈನ್ 21 ರನ್ ವೆಚ್ಚದಲ್ಲಿ ಎರಡು ವಿಕೆಟ್ ಪಡೆದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...