ರಷ್ಯಾದ ದಾಳಿಗಿಂತ ಮುಂಚೆ ಮರಿಯೂಪೋಲ್ ತುಂಬಾ ಶಾಂತಿಯಿಂದ ಬಾಳ್ವೆ ಮಾಡುತ್ತಿದ್ದಂತ ನಗರವಾಗಿತ್ತು. ಆದರೆ ಈಗ ಬಾಂಬ್ ದಾಳಿಯಿಂದಾಗಿ 95% ನಗರ ಹಾಳಾಗಿದೆ. ಅದರಲ್ಲಿ ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಆದರೂ ಉಕ್ರೇನಿನ ಪಡೆ ತನ್ನ ಅಧಿಪತ್ಯವನ್ನು ಬಿಟ್ಟುಕೊಟ್ಟಿಲ್ಲ.
ಗಾಯಾಳುಗಳು ಮತ್ತು ಸತ್ತವರ ಕಳೇಬರಗಳನ್ನು ಅವಶೇಷಗಳಿಂದ ಹೊರತೆಗೆಯಬೇಕಿದೆ. ಅಲ್ಲಿಂದ ಸ್ಥಳಾಂತರಗೊಳ್ಳಬೇಕಿದೆ. ಹಾಗೆಯೇ, ಸಾವಿರಾರು ನಾಗರಿಕರು, ಚಿಕ್ಕ ಮಕ್ಕಳು, ಹಿರಿಯರು, ಇವರಿಗೆಲ್ಲಾ ಪುನರ್ವಸತಿ ಬೇಕಿದೆ. ಪ್ರಸ್ತುತ ಅಲ್ಲಿಯ ಜನ ಆಹಾರ ಮತ್ತು ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ.
ಈ ಸ್ಥಿತಿಯಲ್ಲೂ ಯುದ್ಧ 50 ದಿನಗಳು ಕಳೆದರೂ ಕೂಡ ಅಲ್ಲಿನ ಸರ್ಕಾರದ ಮೊರೆ ಹೀಗಿದೆ. ನಮಗೆ ಯುದ್ಧಸನ್ನದ್ಧ ವಾಹನಗಳನ್ನು ಕೊಡಿ. ಬಹು ರಾಕೆಟ್ ಚಿಮ್ಮಿಸುವ ವ್ಯವಸ್ಥೆ ಕೊಡಿ. ಹೆಚ್ಚುದೂರ ಸಾಗಬಲ್ಲ ಕ್ಷಿಪಣಿಗಳನ್ನು ಕೊಡಿ.