Thursday, December 11, 2025
Thursday, December 11, 2025

ಯಾವ ಕಾರಣಕ್ಕೂ ರಾಜಿನಾಮೆ ನೀಡೋದಿಲ್ಲ- ಈಶ್ವರಪ್ಪ

Date:

ಗುತ್ತಿಗೆದಾರ ಸಂತೋಷ್ ಕುಮಾರ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಎನ್ನುವ ಕೂಗು ಕೇಳುತ್ತಿರುವಾಗಲೇ ಸಚಿವ ಕೆ. ಎಸ್. ಈಶ್ವರಪ್ಪ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಕುರಿತು ಮಾತನಾಡಿದ ಅವರು, ಕಾನೂನುಬಾಹಿರವಾಗಿ ನಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆ ನಡೆಸಿದಂತಹ ವಿಚಾರದಲ್ಲಿ ಕಾಂಗ್ರೆಸ್ಸಿನವರು ರಾಜಿನಾಮೆ ನೀಡಿ ಎನ್ನುತ್ತಿದ್ದಾರೆ. ಇದು ಒಂದು ಕಡೆಯಾದರೆ ಇನ್ನೊಂದೆಡೆ ಸಂತೋಷ್ ಪಾಟೀಲ್ ಅವರು ಡೆತ್ ನೋಟ್ ಬರೆದಿಲ್ಲ. ಆದರೂ ಸಹ ಡೆತ್ ನೋಟ್ ಬರೆದಿದ್ದಾರೆಂದು ಸುಳ್ಳು ಆರೋಪ ಹೊರಿಸಿ ರಾಜಿನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದರು.

ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಬೇಕಾದರೆ ಮೊದಲು ತಾಂತ್ರಿಕ ಅನುಮೋದನೆ ಯಾಗಬೇಕು. ಅದಾದ ನಂತರ ಹಣ ಬಿಡುಗಡೆಯಾಗುತ್ತದೆ. ವರ್ಗಾವಣೆ ಹಂಚಿಕೆಯಾಗಬೇಕು. ಕೆಲಸ ಮಾಡುವಂತಹ ಸಂದರ್ಭದಲ್ಲಿ ಸರ್ಕಾರಿ ಇಲಾಖೆಯವರು ಅದರ ಮುತವರ್ಜಿ ವಹಿಸಬೇಕು. ಕೆಲಸ ಮುಗಿದಮೇಲೆ ಬಿಲ್ ಪೇಮೆಂಟ್ ಆಗಬೇಕು. ಇದ್ಯಾವ ಪದ್ಧತಿಯು ಇಲ್ಲದೇನೆ ಸಿದ್ದರಾಮಯ್ಯನವರು ಮತ್ತು ಡಿಕೆಶಿ ಅವರಿಗೆ ನಾನು ಪ್ರಶ್ನಿಸುತ್ತೆನೆ. ತುಂಬಾ ವರ್ಷಗಳಿಂದ ನೀವು ಆಡಳಿತ ನಡೆಸಿದ್ದರಾ ಅಲ್ಲವೇ? ಈ ನಿಯಮಗಳನ್ನು ಗಾಳಿಗೆ ತೂರಿ ಬಿಲ್ ಗಳನ್ನು ಪೇಮೇಂಟ್ ಮಾಡಿದ್ದೀರಾ ಎಂದರು.

ಈಗಾಗಲೇ ನನಗೆ ರಾಜ್ಯದ ಹಲವು ಕಡೆಯಿಂದ ಕರೆಗಳು ಬಂದಿವೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಎಂದು ಒತ್ತಾಯಿಸುತ್ತಿದ್ದಾರೆ.ಆ ಅಭಿಮಾನಿಗಳಿಗೆ ನಾನು ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ತಿಳಿಯುತ್ತಿಲ್ಲ ಎಂದರು.

ಕಾಂಗ್ರೆಸ್ ನವರು ಗಣಪತಿಯವರ ಡೆತ್ ನೋಟ್ ಇಟ್ಟುಕೊಂಡು ಹೋರಾಟ ಮಾಡಿ ಜಾರ್ಜ್ ಅವರ ರಾಜೀನಾಮೆ ತೆಗೆದುಕೊಂಡಿದ್ದಿರಿ. ಸ್ವತಃ ಗಣಪತಿಯವರು ಸಾಯುವುದಕ್ಕೂ ಮುನ್ನ ನಾನು ಡೆತ್ ನೋಟ್ ಬರೆದಿದ್ದೇನೆ ಎಂದು ಹೇಳಿದ್ದರು. ಆ ಡೆತ್ ನೋಟ್ ಗೆ ಸಹಿ ಮಾಡಿದ್ದರು. ಇದು ಡೆತ್ ನೋಟ್ ಇರುವ ವ್ಯವಸ್ಥೆ. ಆದರೆ ಇಲ್ಲಿ ಆಗಿರುದೇನು ಎಂದು ಪ್ರಶ್ನಿಸಿದರು.

ಸಂತೋಷ್ ಪಾಟೀಲ್ ವಿಚಾರದಲ್ಲಿ ವಾಟ್ಸಪ್ ಮೆಸೇಜ್ ನಲ್ಲಿ ಟೈಪ್ ಮಾಡಲಾಗಿದೆ. ಅದು ಸಂತೋಷ್ ಪಾಟೀಲ್ ಬರೆದಿರುವ ಡೆತ್ ನೋಟೋ ಅಥವಾ ಇನ್ಯಾರು ಬರೆದಿರುವುದೋ ಗೊತ್ತಿಲ್ಲ. ಆ ಮೆಸೇಜ್ ಇಟ್ಟುಕೊಂಡು ರಾಜಿನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ನಾನು ಯಾವ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ಡಿಸೆಂಬರ್ 12 & 13, ಶಿವಮೊಗ್ಗದಲ್ಲಿ ಕಂದಾಯ ಇಲಾಖಾ ನೌಕರರಿಂದ ” ಕಂದಾಯೋತ್ಸವ”- ವಿ.ಅಭಿಷೇಕ್

DC Shivamogga ಒತ್ತಡದಲ್ಲಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ತಮ್ಮ...

MESCOM ಡಿಸೆಂಬರ್ 11 & 12 ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿಲ್ಲ, ಒಳ ಮಂಡಳಿ ಪ್ರಕಟಣೆ

MESCOM ಶಿವಮೊಗ್ಗ ನಗರದ ಮಂಡ್ಲಿ ಭಾಗದಲ್ಲಿ ಮೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ...

Department of School Education ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಗೆ ಸಮಗ್ರ ಚಾಂಪಿಯನ್ ಪಟ್ಟ

Department of School Education ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ...