Sunday, December 7, 2025
Sunday, December 7, 2025

ಆರ್ ಸಿ ಬಿ ಹೋರಾಟ ವ್ಯರ್ಥ ಚೆನೈ ಗೆ ಜಯ

Date:

ಉತ್ತಪ್ಪ-ಶಿವಂ ಜೊತೆಯಾಟದ ರಂಗು
ಉತ್ತಪ್ಪ, ದುಬೆ 165 ರನ್ ಜೊತೆಯಾಟ/ತೀಕ್ಷಣ ಗೆ 4 ವಿಕೆಟ್/ಆರ್ಸಿಬಿ ಗೆ 23 ರನ್ ನಿಂದ ಸೋಲು
ಸಿಕ್ಸರ್ ಮತ್ತು ಬೌಂಡರಿ ಗಳೊಂದಿಗೆ ರಂಜಿಸಿದ ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಅಬ್ಬರಿಸಿದರು. ಅವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಬೃಹತ್ ಮೊತ್ತ ಕಲೆಯಾಗಿತು. ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದಲ್ಲಿ ಇವರಿಬ್ಬರಿಂದ ಒಟ್ಟು 17 ಸಿಕ್ಸರ್ ಮತ್ತು 9 ಬೌಂಡರಿಗಳು ಸಿಡಿದವು. ಇದರ ಫಲವಾಗಿ ತಂಡ4 ಕ್ಕೆ 116 ರನ್ ಮೊತ್ತ ಕಲೆ ಹಾಕಿತು.

ಇದು, ಐಪಿಎಲ್ ನ 15ನೇ ಆವೃತ್ತಿಯಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ. ಮೂರನೇ ವಿಕೆಟ್ಗೆ 165 ರನ್ ಸೇರಿಸಿದ ರಾಬಿನ್-ಶಿವಂ ಜೋಡಿ ಶತಕದಿಂದ ವಂಚಿತರಾದರು. ಆದರೆ ಇವರಿಬ್ಬ ರಿಂದ ವೈಯಕ್ತಿಕ ಗರಿಷ್ಠ ರನ್ ದಾಖಲಿಸುವಲ್ಲಿ ಯಶಸ್ವಿಯಾದರು. ಕೇವಲ 19 ರನ್ ಗಳಿಸುವಷ್ಟರಲ್ಲಿ ತಂಡದ ಮೊದಲ ವಿಕೆಟ್ ಕಳೆದುಕೊಂಡಿತ್ತು. ಮೂರು ಬೌಂಡರಿ ಸಿಡಿಸಿ ಭರವಸೆ ಮೂಡಿಸಿದ್ದ ಋತುರಾಜ ಗಾಯಕ್ವಾಡ್ ಈ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದ ಜೋಶ್ ಹ್ಯಾಂಡಲ್ ವುಡ್ ಎಸೆತದಲ್ಲಿ ಎಲ್ ಡಬ್ಲ್ಯೂ ಬಲೆಗೆ ಬಿದ್ದರು.


ಸುಯಶ್ ಪ್ರಭುದೇಸಾಯಿ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಮಿಂಚಿನ ಆಟಕ್ಕೆ ಮೋಹಿನ್ ಅಲಿ ವಿಕೆಟ್ ಕಳೆದುಕೊಂಡರು. ಲೈನ್ ಮ್ಯಾಕ್ಸ್ವೆಲ್ ಹಾಕಿದ ಏಳನೇ ಓವರ್ ನ ನಾಲ್ಕನೇ ಎಸೆತವನ್ನು ಅಲ್ಲಿ ಕಟ್ ಮಾಡಿದರು. ಬ್ಯಾಕ್ವರ್ಡ್ ಪಾಯಿಂಟ್ ನಲ್ಲಿ ಸುಯಶ್ ಕಡೆಗೆ ಸಾಗಿತ್ತು. ಚುರುಕಿನ ಫೀಲ್ಡಿಂಗ್ ಮಾಡಿದ ಸುಯಶ್ ನಿಖರ ಮಾಡಿದರು. ದಿನೇಶ್ ಕಾರ್ತಿಕ್ ಸೊಗಸಾಗಿ ವೇಲ್ಸ್ ಎರಗಿಸಿದರು.

ನಂತರ ರಾಬಿನ್ ಮತ್ತು ಶಿವಂ ಆಟ ರಂಗೇರಿತು. ಎಂಟನೇ ಓವರ್ನಲ್ಲಿ ಇಬ್ಬರು ತಲಾ ಒಂದೊಂದು ಬೌಂಡರಿ
ಗಳಿಸುವ ಮೂಲಕ ಆಕ್ರಮಣಕಾರಿ ಆಟದ ಮುನ್ಸೂಚನೆ ನೀಡಿದರು. ನಂತರ ಪ್ರತಿ ಓವರ್ ನಲ್ಲೂ ಬೌಂಡರಿಗಳು ಹರಿದುಬಂದವು. ಹದಿಮೂರನೇ ಓವರ್ನಲ್ಲಿ ಮ್ಯಾಕ್ಸ್ವೆಲ್ ಅವರನ್ನು ಮೂರುಬಾರಿ ಸಿಕ್ಸರ್ ಗೆ ಎತ್ತಿದ ರಾಬಿನ್ ತಂಡದ ಮೊತ್ತ ಮೂರಂಕಿ ಗೆ ದಾಟಿಸಿದರು.


16ನೇ ಓವರ್ ನಲ್ಲಿ ಹಾಜಲ್ ವುಡ್ ಚೆಂಡನ್ನು ಸಿಕ್ಸರ್ ಗೆ ಅಟ್ಟಿದ ಉತ್ತಪ್ಪ ನೂರು ರನ್ ಗಳ ಜೊತೆಯಾಟ ಪೂರೈಸಿದರು. ಸಿರಾಜ್ ಹಾಕಿದ 17ನೇ ಓವರ್ನಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಯನ್ನೂ ಸಿಡಿಸಿದರು. 18ನೇ ಓವರ್ ನಲ್ಲಿ ಶಿವಂ 2 ಸಿಕ್ಸರ್ ಗಳಿಸಿದರು. ಆದರೆ ಉತ್ತಪ್ಪ ವಿಕೆಟ್ ಕಳೆದುಕೊಂಡರು. ಕೊನೆಯ ಓವರಿನಲ್ಲಿ ಎರಡು ಸಿಕ್ಸರ್ ಗಳ ಮೂಲಕ ಶಿವಂ ಶತಕದತ್ತ ದಾಪುಗಾಲು ಹಾಕಿದರು. ಆದರೆ ಕೊನೆ ಎಸೆತದಲ್ಲಿ ಎಡವಿದರು. ಸಿಕ್ಸರ್ ಗೆಂದು ಎತ್ತಿದ ಚೆಂಡು ಲಾಂಗ್ ಆನ್ ನಲ್ಲಿ ಫಫ್ ಡುಪ್ಲೆಸಿ ಬಳಿ ಸಾಗಿತು. ಕ್ಯಾಚ್ ಕೈಚೆಲ್ಲಿದರು. ಆದರೆ ದುಬೆ ಶತಕದ ಕನಸು ನನಸಾಗಲಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...