Sunday, October 6, 2024
Sunday, October 6, 2024

ತೇಜಸ್ವಿಯವರ ನೆನಪಿನಲ್ಲಿ..

Date:

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು 1938ರಲ್ಲಿ ಸೆಪ್ಟೆಂಬರ್ 8 ಶಿವಮೊಗ್ಗದ ಕುಪ್ಪಳ್ಳಿಯಲ್ಲಿ ಜನಿಸಿದರು. ಇವರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.

ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು.
ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಸಾಹಿತ್ಯವನ್ನು ಪ್ರಾರಂಭಿಸಿದರು.

ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.
ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ. ಅವರ ತಾಯಿ ಹೇಮಾವತಿ.

ಸ್ನಾತಕೊತ್ತರ ಪದವಿಯ ನಂತರ ಓರಗೆಯ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು.

ಕೃಷಿಯ ಜೊತೆಜೊತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಅವರೊಬ್ಬ ಸಮಾಜವಾದಿ ಚಿಂತಕ. ಸಮಾಜದಲ್ಲಿ ತಾಂಡವವಾಡುತ್ತಿದ್ದ ಬಡತನ, ಅಸಮಾನತೆ, ಶೋಷಣೆಯ ಬಗ್ಗೆ ಸಾಹಿತ್ಯದ ಮೂಲಕ ಸದಾ ಧ್ವನಿ ಎತ್ತುತ್ತಿದ್ದ ಅದ್ಬುತ ಲೇಖಕ.

ಇಡೀ ಬದುಕಿನ ತುಂಬಾ ರಚಿಸಿದ ಸಾಹಿತ್ಯದಲ್ಲಿ ಕಲೆ, ಸಂಸ್ಕೃತಿ, ಪರಿಸರ ಮತ್ತು ಕೃಷಿಯ ವಿಷಯಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ಹತ್ತಾರು ಕೃತಿಗಳನ್ನು ರಚಿಸಿದ ಮಹಾನ್ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ತುಂಬಾ ಸರಳ ವ್ಯಕ್ತಿತ್ವ ನೇರ ನಡೆ-ನುಡಿಯವರು.

ಪಟ್ಟಣ ಜೀವನವನ್ನು ಅಷ್ಟೊಂದು ಇಷ್ಟ ಪಡದೇ ಸದಾ ಪರಿಸರದೊಟ್ಟಿಗೆ ಬದುಕು ಕಳೆದ ಪರಿಸರ ಪ್ರೇಮಿ ಎಂದರೂ ತಪ್ಪಾಗಲಾರದು.

ಯಾವುದೇ ಕಾಲ್ಪನಿಕ ವಸ್ತು ವಿಷಯವನ್ನು ತಮ್ಮ ಕೃತಿಗಳಲ್ಲಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳದೆ ಅವರ ಸುತ್ತಮುತ್ತಲಿನ ದೈನಂದಿನ ಬದುಕಿನಲ್ಲಿ ನೋಡಿದ, ಕೇಳಿದ ವಿಚಾರಗಳನ್ನು ಸಾಹಿತ್ಯದ ಮೂಲಕ ಕುತೂಹಲ ಕೆರಳಿಸುವ ರೀತಿಯಲ್ಲಿ ಕಾದಂಬರಿಗಳನ್ನು ಸೃಷ್ಟಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಚಿದಂಬರ ರಹಸ್ಯ, ಜುಗಾರಿ ಕ್ರಾಸ್ ಪತ್ತೆದಾರಿ ಕಾದಂಬರಿಗಳು ಸಾಹಿತ್ಯ ಪ್ರೇಮಿಗಳ ಮನದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ.ಅಬಚೂರಿನ ಫೋಷ್ಟಾಫೀಸು, ತಬರನ ಕಥೆ ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ. ಇವರ ಪಾಕಕ್ರಾಂತಿ ಮತ್ತು ಇತರ ಕತೆಗಳು ಪುಸ್ತಕ ಓದುಗರನ್ನು ಬೇರೆಯದ್ದೇ ಲೋಕಕ್ಕೆ ಕೊಂಡೊಯ್ಯುತ್ತವೆ.

ಇವರ ಮತ್ತೊಂದು ಕಾದಂಬರಿ ಕಿರಗೂರಿನ ಗಯ್ಯಾಳಿಗಳು ಚಲನಚಿತ್ರವಾಗಿ ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ರಾಷ್ಟ್ರಕವಿಯಾಗಿದ್ದ ಕುವೆಂಪು ಅವರ ಮುದ್ದಿನ ಮಗನಾಗಿದ್ದ ತೇಜಸ್ವಿ ಅವರದ್ದು ಸದಾ ನಿರ್ಲಿಪ್ತ ಭಾವ. ಅವರಿಗೆ ವ್ಯವಸಾಯದ ಚಟುವಟಿಕೆಯಲ್ಲಿ ಸಾಹಿತ್ಯದ ಮೇಲಿದ್ದಷ್ಟೆ ತೀವ್ರ ಆಸಕ್ತಿ ಮತ್ತು ಪ್ರೀತಿ ಇತ್ತು.

ಮೂಡಿಗೆರೆಯಲ್ಲಿದ್ದ ಅವರ ಒಡೆತನದ ಕಾಫಿ ತೋಟದಲ್ಲಿ ಕೆಲಸದಾಳುಗಳೊಟ್ಟಿಗೆ ತೇಜಸ್ವಿಯವರು ಸಹ ಕೂಲಿಕಾರರಂತೆ ಕೆಲಸ ಮಾಡುತ್ತಿದ್ದರಂತೆ.

ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ.
ಅರ್ಥಪೂರ್ಣ ಬದುಕನ್ನು ಕಳೆದ ಮಹಾನ್ ಕವಿ ತನ್ನ 69ನೆ ವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿ ತಮ್ಮ ಕೃತಿಗಳನ್ನು ಸಾಹಿತ್ಯ ಪ್ರೇಮಿಗಳಲ್ಲಿ ಜೀವಂತವಾಗಿ ಉಳಿಸಿ ಹೋಗಿರುವ ಮಹಾನ್ ಚೇತನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪುಣ್ಯ ಸ್ಮರಣೆ ಇಂದು.

ಅವರ ಸರಳ ವ್ಯಕ್ತಿತ್ವದ ಜೀವನ ನಮ್ಮೆಲ್ಲರಿಗೂ ಜೀವಂತ ಆದರ್ಶ. ತಮ್ಮ ಬರವಣಿಗೆಯಿಂದ ಅದೆಷ್ಟೋ ಜೀವಗಳಿಗೆ ಸ್ಪೂರ್ತಿ ಇವರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D Satya Prakash ಯಾವುದೇ ಸಿನಿಮಾ ಭಾವನೆಗಳ ಮೇಲಿ‌ನ ಆಟವಾಗಬಾರದು- ಡಿ.ಸತ್ಯಪ್ರಕಾಶ್

D. Satya Prakash ಸಿನಿಮಾ ಎನ್ನುವುದು ಭಾವನಾತ್ಮಕ ಜೊತೆಗೆ ವಿಚಿತ್ರವೂ ಹೌದುಖ್ಯಾತ...

Press Distributors ಪತ್ರಿಕಾ ವಿತರಕರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸಹಕಾರ ಅಗತ್ಯ- ಜಿ.ಕೆ.ಹೆಬ್ಬಾರ್

Press Distributors ಶಿಕಾರಿಪುರ ನಿನ್ನೆ ಮಧ್ಯಾಹ್ನ ಹಠ ತ್ ಲಘು ಹೃದಯಘಾತವಾಗಿ...