Sunday, December 14, 2025
Sunday, December 14, 2025

ಕೀವ್ ನ ಪ್ರತೀ ಸಣ್ಣಭಾಗವನ್ನೂ ರಕ್ಷಿಸುತ್ತೇವೆ- ಮೇಯರ್ ವಿಟಾಲಿ

Date:

ರಷ್ಯಾದ ಮುಂದೆ ಮಂಡಿಯೂರುವುದಕ್ಕಿಂತ ಸಾಯುವುದೇ ಲೇಸು ಎಂದು ಕೀವ್ ಮೇಯರ್ ಹೇಳಿದ್ದಾರೆ.

ಕೀವ್ ನಗರದ ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ ಸುತ್ತುವರಿದಿದ್ದ ರಷ್ಯಾದ ಸೈನ್ಯವನ್ನು ಹಿಮ್ಮೆಟ್ಟಿಸಿರುವುದಾಗಿ ಕೀವ್ ನಗರದ ಮೇಯರ್ ತಿಳಿಸಿದ್ದಾರೆ.

ಉಕ್ರೇನ್ ರಾಜಧಾನಿಯನ್ನ ರಷ್ಯಾಗೆ ಒಪ್ಪಿಸಲ್ಲ. ಬದಲಾಗಿ ಇಲ್ಲಿನ ಪ್ರತಿ ಕಟ್ಟಡವನ್ನು ರಕ್ಷಣೆ ಮಾಡುವುದಾಗಿ ಮೇಯರ್ ವಿಟಾಲಿ ಕ್ಲಿಟ್ಸ್ಚ್ ಕೊ ಪ್ರತಿಜ್ಞೆ ಮಾಡಿದರು. ಕೀವ್ ನಗರದ ಉತ್ತರ ಮತ್ತು ಪೂರ್ವ ಹೊರವಲಯದಲ್ಲಿ ರಷ್ಯಾ ಯುದ್ಧಕ್ಕಿಳಿದಿತ್ತು. ಇದೀಗ ಕೀವ್ ನಮ್ಮ ತೆಕ್ಕೆಯಲ್ಲಿ ಸುರಕ್ಷಿತವಾಗಿದೆ. ಈಗಾಗಲೇ ಸಣ್ಣ ನಗರಗಳಾದ ಮಕರಿವ್ ಮತ್ತು ಇರ್ಪಿನ್ ಉಕ್ರೇನ್ ಸೇನೆಯಿಂದ ರಕ್ಷಿಸಲ್ಪಟ್ಟಿದೆ ಎಂದಿದ್ದಾರೆ.

ಕಳೆದ ಫೆಬ್ರವರಿ 28 ರಂದು ರಷ್ಯಾ ಸೇನಾ ಪಡೆ ಕೀವ್ ಹೊರ ವಲಯಗಳವರೆಗೆ ನುಗ್ಗಿ ಬಂದಿತ್ತು. ಅದ್ರೆ ತಿಂಗಳು ಕಳೆದ್ರೂ ರಷ್ಯಾ ಕೀವ್ ನಗರವನ್ನ ವಶಕ್ಕೆ ಪಡೆಯಲು ವಿಫಲವಾಗಿದ್ದು, ಉಕ್ರೇನ್ ಪಡೆ ಹೊಡೆದೋಡಿಸಿದೆ. ರಾಜಧಾನಿ ಕೀವ್ ಉಕ್ರೇನ್ ಹೃದಯದಂತಿದ್ದು, ಇದನ್ನ ತನ್ನ ತೆಕ್ಕೆಗೆ ಪಡೆಯಲು ರಷ್ಯಾ ಹವಣಿಸುತ್ತಿದೆ. ಆದರೆ ಈ ಯತ್ನದಲ್ಲಿ ವಿಫಲವಾಗಿದ್ದು, ಕೀವ್ ನಗರದ ಪ್ರತಿ ಕಟ್ಟಡ, ಪ್ರತಿ ರಸ್ತೆ , ಪ್ರತಿ ಸಣ್ಣ ಭಾಗವನ್ನೂ ನಾವು ಉಳಿಸಿಕೊಳ್ಳಲು ಹೋರಾಡುವುದಾಗಿ ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಚ್ ಕೊ ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...