Sunday, February 9, 2025
Sunday, February 9, 2025

ಕೋವಿಡ್ ಸೋಂಕು ತಗ್ಗಿದಂತೆ ಕೊಲ್ಲಿ ದೇಶಗಳಿಗೆ ಕಾರ್ಮಿಕರ ಪ್ರಯಾಣ

Date:

ಕೊರೋನಾ ಬಿಕ್ಕಟ್ಟಿನ ಸಂದರ್ಭ 6 ಕೊಲ್ಲಿ ರಾಷ್ಟ್ರಗಳಿಂದ ಏನು ಲಕ್ಷ ಮಂದಿ ಭಾರತೀಯ ಕಾರ್ಮಿಕರು ತವರಿಗೆ ಮರಳಿದ್ದಾರೆ.

ಒಂದೇ ಭಾರತ ಅಭಿಯಾನದ ಅಡಿಯಲ್ಲಿ ಕಾರ್ಮಿಕರು ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಸಂಸತ್ತಿಗೆ ತಿಳಿಸಿದ್ದಾರೆ.

ಹೀಗೆ ಬಂದವರಲ್ಲಿ ಹಲವಾರು ಮಂದಿ ಕೋವಿಡ್ ಸಂಖ್ಯೆ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಮತ್ತೆ ಕೊಲ್ಲಿ ರಾಷ್ಟ್ರಗಳಿಗೆ ತೆರಳಿದ್ದಾರೆ ಎಂದು ಜೈಶಂಕರ್ ಅವರು ತಿಳಿಸಿದ್ದಾರೆ. ಕೊರೋನಾ ಸಂದರ್ಭ ಯುಎಇ‌ಯಿಂದ 3.30 ಲಕ್ಷ, ಸೌದಿ ಅರೇಬಿಯಾದಿಂದ 1.37 ಲಕ್ಷ, ಕುವೈತ್ ನಿಂದ 97 ಸಾವಿರ, ಒಮಾನ್ ನಿಂದ 72 ಸಾವಿರ ಮಂದಿ ಭಾರತಕ್ಕೆ ಹಿಂತಿರುಗಿದ್ದರು. ಹೀಗಾಗಿದ್ದರೂ‌, ಕೊರೋನಾ‌ ಸಂಖ್ಯೆ ಹಿಡಿಕೆಯ ನಂತರ ಬಹಳಷ್ಟು ಮಂದಿ ಮತ್ತೆ ಕೊಲ್ಲಿ ರಾಷ್ಟ್ರಗಳಿಗೆ ಮರಳಿದ್ದಾರೆ.

ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ನಡುವೆ ಏರ್ ಬಬ್ಬಲ್ಸ್ ವ್ಯವಸ್ಥೆಯ ಅಡಿಯಲ್ಲಿ ವಿಮಾನ ಹಾರಾಟಕ್ಕೆ ಅನುಕೂಲ ಕಲ್ಪಿಸಿದ್ದ ರಿಂದ ಇದು ಸಾಧ್ಯವಾಗಿದೆ ಎಂದು ಅವರು ವಿವರಿಸಿದ್ದಾರೆ.

ಹೀಗೆ ಕೊಲ್ಲಿ ರಾಷ್ಟ್ರಗಳಿಗೆ ವಾಪಸ್ ಹೋಗಲು ಬಯಸುವ ಕಾರ್ಮಿಕರಿಗೆ ಅಗತ್ಯವನ್ನು ಮತ್ತು ಬೆಂಬಲವನ್ನು ಸರ್ಕಾರ ಮುಂದುವರಿಸಿದೆ. ಯುಎಇ ನಲ್ಲಿರುವ ಭಾರತೀಯ ಕಾರ್ಮಿಕರ ಕೌಶಲ್ಯ ಅಭಿವೃದ್ಧಿ ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಲ್ಲಿ ದೇಶಗಳಿಗೆ 13 ಸಲ ಭೇಟಿ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕೆಲವು ಮೆಲುಕುಗಳು

ಲೇ: ಗೋಪಾಲ್ ಯಡಗೆರೆ.ಹಿರಿಯ ವರದಿಗಾರರು. ಕನ್ನಡಪ್ರಭ. ಶಿವಮೊಗ್ಗ Klive Special Article ...

Warrant Officer Manjunath ಸ್ಕೈ ಡೈವಿಂಗ್ ಸಂದರ್ಭದಲ್ಲಿ‌ ಪ್ಯಾರಾಚ್ಯೂಟ್ ತೆರೆಯದೇ ಏರ್ ಫೋರ್ಸ್ ಅಧಿಕಾರಿ ಮಂಜುನಾಥ್ ಮರಣ

Warrant Officer Manjunath ಸ್ಕೈ ಡೈವಿಂಗ್ ವೇಳೆ ಪ್ಯಾರಚ್ಯೂಟ್ ತೆರೆಯದೆ ಏರ್ಫೋರ್ಸ್...

Guarantee scheme ರಾಜ್ಯ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರ ಮೆಚ್ಚುಗೆ

Guarantee scheme ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ ಐದು...

DC Shivamogga ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ‌ಕ್ಕೆ ಒತ್ತು‌ ನೀಡಲಾಗುವುದು- ಗುರುದತ್ತ ಹೆಗಡೆ

DC Shivamogga ಕೈಗಾರಿಕಾ ಪ್ರದೇಶಗಳಲ್ಲಿ ಕುಡಿಯುವ ನೀರು, ಬೀದಿ ದೀಪ,...