ಕದ್ದ ಮೊಬೈಲ್ ಗಳನ್ನು ಕೇರಳದ ಮಲ್ಲಪುರಂ ಮತ್ತು ಮಹಾರಾಷ್ಟ್ರದ ಪುಣೆಯ ಮಾರಾಟ ಮಾಡುವ ಜಾಲ ಭದ್ರಾವತಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಇಲಾಖೆಯು ಅಂಥವರನ್ನು ಹುಡುಕುವುದರಲ್ಲಿ ನಿರತವಾಗಿದೆ.
ಭದ್ರಾವತಿಯಲ್ಲಿ ಕೆಲವರನ್ನು ಬಂಧಿಸಿದ್ದು, ಅವರು ಕೇರಳ ಮತ್ತು ಪುಣೆ ನಡುವೆ ಕದ್ದ ಮೊಬೈಲ್ ಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದರು. ಜೊತೆಗೆ ಸಂತೆ , ಇತ್ಯಾದಿ ಜನನಿಬಿಡ ಪ್ರದೇಶದಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಬಂಧಿಸಲಾಗಿದೆ. ಕೇರಳದ ಮಲ್ಲಪುರಂ, ಪುಣೆಗೆ ಒಯ್ದು ಇಎಂಇಐ ಬದಲಾವಣೆ ಮಾಡಿ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಶಿವಮೊಗ್ಗದ ಎಸ್ ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಅವರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯು ಕಾರ್ಯಾಚರಣೆ ನಡೆಸಿ ಆರು ತಿಂಗಳ ಹಿಂದೆ 12 ಜನರನ್ನು ಬಂಧಿಸಿತ್ತು. ಅದರಲ್ಲಿ ಒಬ್ಬ ಮಧ್ಯವರ್ತಿ ದಂದೆ ಮಾಡುತ್ತಿದ್ದ. ಇನ್ನುಳಿದವರು ಸ್ಥಳೀಯವಾಗಿ ಮೊಬೈಲ್ ಗಳನ್ನು ಕಳುವು ಮಾಡುತ್ತಿದ್ದರು. ಇವರು ತರಕಾರಿ ಮಾರುಕಟ್ಟೆ, ಸಾರ್ವಜನಿಕ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿಕೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮಾಲೀಕರಿಗೆ ಗೊತ್ತಾಗದ ಹಾಗೆ ಜೇಬಿನಲ್ಲಿನ ಮೊಬೈಲ್ ಗಳಿಗೆ ಕನ್ನ ಹಾಕುವ ಗ್ಯಾಂಗ್ ಒಂದೆಡೆಯಾದರೆ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುವ ಗ್ಯಾಂಗ್ ಇನ್ನೊಂದು ಕಡೆ. ಈ ಎರಡೂ ಬಗೆಯ ಗ್ಯಾಂಗ್ ಗಳು ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಪೊಲೀಸರು ಅಂಥವರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೂಡಾ ಕೈಗೊಳ್ಳುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರಾವತಿಯಲ್ಲಿ ಮೊಬೈಲ್ ಕಳ್ಳರ ಗ್ಯಾಂಗ್ ಅರೆಸ್ಟ್
Date: