ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾಗಿರುವ ಕೆ.ಸಿ. ನಾರಾಯಣಗೌಡ ಅವರು ಶಿವಮೊಗ್ಗಕ್ಕೆ ಗಣರಾಜ್ಯೋತ್ಸವದ ಪ್ರಯುಕ್ತ ಭೇಟಿ ನೀಡಿದರು. ಈ ವೇಳೆ ಡಿಎಆರ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿದರು. ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆಯಿಂದ ಬಂದವರು. ಶಿವಮೊಗ್ಗ ಜಿಲ್ಲೆ ಝಿರೋ ದಿಂದ ಅಭಿವೃದ್ಧಿ ಮಾಡಿ ಉತ್ತುಂಗ ಸ್ಥಾನಕ್ಕೆ ಕೊಂಡೊಯ್ಯುವ ಮೂಲಕ ಕರ್ನಾಟಕಕ್ಕೂ ದೊಡ್ಡಮಟ್ಟದ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಾನೀಗ ಉಸ್ತುವಾರಿಯಾಗಿಬಂದು ಎಲ್ಲಾ ಖುಷಿ ಹೊಂದುವ ಭಾಗ್ಯ ನನಗೆ ಸಿಕ್ಕಿದೆ. ಹಾಗೂ ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ಸಂಸದರಾಗಿರುವ ಶ್ರೀಬಿ.ವೈ.ರಾಘವೇಂದ್ರ ಅವರಿಂದ ಕಲಿಯಬೇಕು ಎಂದು ಸಚಿವ ನಾರಾಯಣಗೌಡ ಹೇಳಿದರು.
ಕರ್ನಾಟಕದ ಸಂಸದರಾಗಿ ಅನೇಕ ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರದಿಂದ ಹೊಸ ಹೊಸ ಬಜೆಟ್ ಗಳನ್ನು ತಂದಿದ್ದಾರೆ ಎಂದರು
ಇದುವರೆಗೂ ಐದು ಬಾರಿ ಶಿವಮೊಗ್ಗ ಜಿಲ್ಲೆಗೆ ರಾಘವೇಂದ್ರ ಅವರ ನೇತೃತ್ವದಲ್ಲಿ ಬಂದಿದ್ದೆ. ಪ್ರತಿ ಬಾರಿ ಬಂದಾಗಲೂ ಒಂದು ಹೊಸ ಹೊಸ ವಿಷಯ ಖುಷಿಯನ್ನು ಕೊಡುತ್ತಿದ್ದಾರೆ.
ಕೇಂದ್ರ ಸರ್ಕಾರದಿಂದ ತಂದಿರುವ ಯೋಜನೆಗಳನ್ನು ನಾವು ಸಹ ಜೊತೆ ಸೇರಿಕೊಂಡು ಒಂದು ಉತ್ತಮ ಸ್ಥಾನಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತೇನೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಮತ್ತು ಶಿವಮೊಗ್ಗಕ್ಕೆ ಅಂತರಾಳದ ಸಂಬಂಧ ಇದೆ ಎಂದು ಸಚಿವರು ತಿಳಿಸಿದರು.
ಅಭಿವೃದ್ಧಿ ಉತ್ತಮ ಸ್ಥಾನಕ್ಕೆ ಬಂದಿದೆ ಅವರಿಂದ ಸಲಹೆ ಪಡೆದಿದ್ದೇನೆ. ಜಿಲ್ಲಾಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಜಿಲ್ಲೆಯಲ್ಲಿ ಎಲ್ಲಾ ಹಿರಿಯ ನಾಯಕರು ಇರುವುದರಿಂದ ಅವರೊಡನೆ ಸೇರಿಕೊಂಡು ಅಭಿವೃದ್ಧಿಗೊಳಿಸುತ್ತೇನೆ ಎಂದರು.
ತಿಂಗಳಲ್ಲಿ ನಾಲ್ಕರಿಂದ ಐದು ದಿನಗಳ ಕಾಲ ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ತಿಳಿಸಿದರು.
ಕೇಂದ್ರ ಸರ್ಕಾರದ ಬಜೆಟ್ ಕುರಿತಂತೆ ಬಿ.ವೈ.ರಾಘವೇಂದ್ರ ಅವರು ಮಾತನಾಡಿ ಮಲೆನಾಡು ಮತ್ತು ಉತ್ತರ ಕರ್ನಾಟಕ ರೈಲ್ವೆ ಸಂಪರ್ಕ ಕಾಮಗಾರಿಗೆ 250 ಕೋಟಿ ರೂ. ಬಜೆಟ್ ನಲ್ಲಿ ತಿಳಿಸಲಾಗಿದ್ದು, ಹಣವನ್ನು ಇನ್ನು ಬಳಕೆ ಮಾಡಿಲ್ಲ. ಟೆಂಡರ್ ಪ್ರೋಸಸ್ ನಲ್ಲಿದೆ ಎಂದು ಹೇಳಿದರು