Friday, April 18, 2025
Friday, April 18, 2025

ಪ್ರೊ ಕಬಡ್ಡಿ ಲೀಗ್ ಗೆಲುವಿನಲೆಯಲ್ಲಿ ವಾರಿಯರ್ಸ್-ಪಲ್ಟನ್

Date:

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಸೋಮವಾರ 4 ತಂಡಗಳ ನಡುವೆ ನಡೆಯಿತು.

ಪ್ಯಾಂಥರ್ಸ್ ವಿರುದ್ಧ ವಾರಿಯರ್ಸ್ ಗೆ ರೋಚಕ ಜಯ
ಜೈಪುರ್ ಪಿಂಕ್ ಪ್ಯಾಂಥರ್ಸ್ (22) ಮತ್ತು ಬೆಂಗಾಲ್ ವಾರಿಯರ್ಸ್ (41) ತಂಡಗಳ ನಡುವೆ ನಡೆಯಿತು.
ಬೆಂಗಾಲ್ ತಂಡದ ಡಿಫೆನ್ಸ್ ವಿಭಾಗದ ರಣ್ ಸಿಂಗ್ 4 ಪಾಯಿಂಟ್ಸ್ ಗಳಿಸಿದರೆ ವಿಶಾಲ್ ಮಾನೆ ಮತ್ತು ಅಭೋಜರ್ ಮಿಘಾನಿ ತಲಾ 2 ಪಾಯಿಂಟ್ಸ್ ಕಲೆ ಹಾಕಿದರು.
ಹಾಗೆಯೇ ಮೊಹಮ್ಮದ್ ನವಿಭಕ್ಷ್ 6 ಪಾಯಿಂಟ್ಸ್ ಗಳಿಸಿದರೆ ಸುಕೇಶ್ ಹೆಗಡೆ 4 ಪಾಯಿಂಟ್ಸ್ ಕಲೆಹಾಕಿ ತಂಡಕ್ಕೆ ನೀಡಿದರು.
ಇವರೆಲ್ಲರ ಉತ್ತಮ ಆಟ ಪ್ರದರ್ಶನದಿಂದ ಬೆಂಗಾಲ್ ತಂಡವು 13 ಅಂಕಗಳ ಅಂತರದಿಂದ ಜೈಪುರ್ ತಂಡವನ್ನು ಮಣಿಸಿತು.

ಡೆಲ್ಲಿ ವಿರುದ್ಧ ಪಲ್ಟನ್ ಗೆ ಭರ್ಜರಿ ಜಯ
ದಬಾಂಗ್ ಡೆಲ್ಲಿ(25) ಮತ್ತು ಪುಣೇರಿ ಪಲ್ಟನ್(42) ತಂಡಗಳ ನಡುವೆ ನಡೆಯಿತು.
ಪುಣೇರಿ ಪರ ಮೋಹಿತ್ ಗೋಯತ್ 10 ಪಾಯಿಂಟ್ಸ್ ಗಳಿಸಿದರು. ಹಾಗೆಯೇ ಅಸ್ಲಾಂ ಇನಾಮದಾರ್ 8 ಪಾಯಿಂಟ್ಸ್ ಮತ್ತು ನಿತಿನ್ ತೋಮರ್ ಹಾಗೂ ಡಿಫೆಂಡರ್ ಸೊಮ್ ವೀರ್ ತಲಾ 6 ಪಾಯಿಂಟ್ಸ್ ಗಳಿಸುವುದರ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
ಇದರಿಂದ ಪಲ್ಟನ್ ತಂಡವು 17 ಅಂಕಗಳ ಅಂತರದಿಂದ ಡೆಲ್ಲಿ ತಂಡವನ್ನು ಬಗ್ಗುಬಡಿಯಿತು.

 ಪ್ರೊ ಕಬಡ್ಡಿ ಲೀಗ್ ಆಯೋಜಕ ಕಂಪನಿ ಮಶಾಲ್ ರವರು ಎರಡು ತಂಡಗಳ ಕೆಲವು ಆಟಗಾರರಲ್ಲಿ ಕೋವಿಡ್  ಧೃಡಪಟ್ಟ ಕಾರಣ ತಮ್ಮ ತಮ್ಮ ತಂಡಗಳಲ್ಲಿ ಆಡುವ ಅಗತ್ಯವಿರುವ ಆಟಗಾರರನ್ನು ಮುಂದೆ ನಡೆಯಲಿರುವ ಪಂದ್ಯಗಳಿಗೆ ಕಣಕ್ಕಿಳಿಸುವುದು ಕಷ್ಟವಾಗುತ್ತದೆ ಆದ್ದರಿಂದ ಆ ತಂಡಗಳ ಮುಂದಿನ ದಿನಾಂಕಕ್ಕೆ ಮರುನಿಗದಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
 ಮರುನಿಗದಿ ಯಾಗಿರುವ ಪಂದ್ಯಗಳ ಪ್ರಕಾರ 25 ರಿಂದ 28 ರವರೆಗೆ ಪ್ರತಿದಿನ ಒಂದೇ ಪಂದ್ಯ ನಡೆಯಲಿದೆ ಹಾಗೂ 29 ಮತ್ತು 30 ರಂದು ಎರಡು ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
   ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮದಲ್ಲಿಟ್ಟುಕೊಂಡು ಕೆಲವು ಪಂದ್ಯಗಳನ್ನು ಮರುನಿಗದಿ ಮಾಡಲಾಗಿದೆ. ಕೋವಿಡ್ ಖಚಿತಪಟ್ಟಿರುವ ಆಟಗಾರರ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರೊ ಕಬಡ್ಡಿ ಲೀಗ್ ಮಂಡಳಿಯ ಆಯೋಜಕ ಮಶಾಲ್ ತಿಳಿಸಿದ್ದಾರೆ.

ಇಂದು ನಡೆಯುವ ಪಂದ್ಯ:
೧. ಹರಿಯಾಣ ಸ್ಟೀಲರ್ಸ್ ಮತ್ತು ತೆಲುಗು ಟೈಟನ್ಸ್
ಸಮಯ:7.30

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....