Monday, July 13, 2026
Monday, July 13, 2026

ಅಮೇರಿಕ ಕೆನಡಾ ಗಡಿಯಲ್ಲಿ ನಾಲ್ವರು ಭಾರತೀಯರ ಸಾವು

Date:

ಕೆನಡಾ-ಅಮೆರಿಕ ಗಡಿಯಲ್ಲಿ ಅತಿಯಾದ ಶೀತ ಗಾಳಿಯಿಂದಾಗಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.
ಇದೇ ಗಡಿಯಲ್ಲಿ ಅಮೆರಿಕ ಪೊಲೀಸರು ಕೆನಡಾದ ಒಬ್ಬನನ್ನು ಮಾನವ ಕಳ್ಳಸಾಗಣೆ ಆರೋಪದಲ್ಲಿ ಬಂಧಿಸಿದ್ದಾರೆ.
ಅವರು ಭಾರತೀಯರು ಅಕ್ರಮವಾಗಿ ಅಮೆರಿಕ ಗಡಿ ಪ್ರವೇಶಿಸಲು ತೆರಳುವಾಗ ಒಬ್ಬರು ದಾರಿತಪ್ಪಿ ಬೇರ್ಪಟ್ಟಿದ್ದಾರೆ. ನಾಲ್ವರು ಅತಿಯಾದ ಚಳಿಯಿಂದ ಮೃತಪಟ್ಟಿದ್ದಾರೆ. ಬಹುಶಃ ಅವರೆಲ್ಲರೂ 11 ಗಂಟೆ ಕಾಲ ನಡೆದಿದ್ದಾರೆ. ಡಿ ಗುಂಪು ಅವರನ್ನು ಕರೆದೊಯ್ಯಬೇಕಿತ್ತು. ಅಷ್ಟರಲ್ಲಿ ಚಳಿ ತಾಳಲಾಗದೆ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧಿಕಾರಿಗಳು ಶಂಕಿಸಿದ್ದಾರೆ.
ಶುಕ್ರವಾರ ಅಮೆರಿಕ ಪೊಲೀಸರು ಗಡಿಯಲ್ಲಿ ಕೆನಡಾದ ಸ್ಟೀವ್ ಶಾಂಡ್ ಎಂಬುವನನ್ನು ಬಂಧಿಸಿದ್ದಾರೆ. ಈತನು ಬುಧವಾರ ದಾಖಲೆ ಇಲ್ಲದ ಇಬ್ಬರು ಭಾರತೀಯರನ್ನು ವಾಹನದಲ್ಲಿ ಕರೆದುಕೊಂಡು ಹೋಗುವಾಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಹಾಗಾಗಿ ಕೆನಡಾ- ಅಮೆರಿಕ ಗಡಿಯಲ್ಲಿ ಮಾನವ ಕಳ್ಳಸಾಗಣೆ ಆರೋಪ ಕೇಳಿಬಂದಿದೆ.
ಮಿನ್ನೆಸೋಟ ಗಡಿಯ ಕೆನಡಾ ಪ್ರದೇಶದಲ್ಲಿ ಇಬ್ಬರು ತರುಣರು, ಒಬ್ಬ ಬಾಲಕಿ ಹಾಗೂ ಒಂದು ಶಿಶು ಮೃತಪಟ್ಟಿದ್ದು, ಇವರೆಲ್ಲರೂ ಭಾರತೀಯರೆಂದು ತಿಳಿದು ಬಂದಿದೆ.
ಕಳೆದ ಮಂಗಳವಾರ ನಾಲ್ವರೂ ಮೃತಪಟ್ಟಿದ್ದಾರೆ. ಮೈನಸ್ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದರಿಂದ ಚಳಿಯಲ್ಲಿ ಮರಗಟ್ಟಿ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಕೆರೆ ತುಂಬಿಸಿದ ಏತ ನೀರಾವರಿ: ಉಡುಗಣಿ- ತಾಳಗುಂದ- ಹೊಸೂರು ಗ್ರಾಮಸ್ಥರ ಕಣ್ಣಲ್ಲಿ ಆನಂದ ಭಾಷ್ಪ

B. Y. Raghavendra ಶಿಕಾರಿಪುರ ತಾಲೂಕಿನ ಕೃಷಿ ರಂಗದ ಇತಿಹಾಸದಲ್ಲೇ ಅತ್ಯಂತ...

U.T. Khader ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ಭೇಟಿ: ಪ್ರತೀ ವಾರ್ಡಿನ ರೋಗಿಗಳೊಂದಿಗೆ ಕ್ಷೇಮ ವಿಚಾರಣೆ

U.T. Khader ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ...

Klive Special Article ಸಕಲ ವಿದ್ಯಾಸಂಪನ್ನ, ಮಹಾಮಹಿಮ ಶ್ರೀವಿಜಯೀಂದ್ರ ತೀರ್ಥರು. ...

ದಿನದ ಒಳ್ಳೆಯಮಾತು(ಯತಿಗಳ ಸ್ಮರಣೆ) ವಿಜಯೀಂದ್ರತೀರ್ಥ ಗುರುಸಾರ್ವಭೌಮರು Klive Special Article ಶ್ರೀವಿಜಯೀಂದ್ರತೀರ್ಥಗುರುಗಳು ಕಲಿಯುಗ ಕಲ್ಪತರು...