ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯು ಭಾರತ ಮತ್ತು ರಾಜಸ್ಥಾನ ತಂಡಗಳ ನಡುವೆ ಪಂದ್ಯ ನಡೆಯಿತು. ರಾಜಸ್ಥಾನದ ವಿರುದ್ಧ ಕರ್ನಾಟಕ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ದಾಪುಗಾಲಿಟ್ಟಿದೆ.
ಜೈಪುರದ ಕೆ. ಎಲ್. ಸೈನಿ ಕ್ರೀಡಾಂಗಣದ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಎದುರಾಳಿ ತಂಡಕ್ಕೆ ಬ್ಯಾಟಿಂಗ್ ಆಡಲು ಅವಕಾಶ ಮಾಡಿಕೊಟ್ಟಿತು.
ಮೊದಲಿಗೆ ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 41.4 ಓವರ್ ಗಳಲ್ಲಿ 199 ರನ್ ಗಳಿಸಿಕೊಂಡಿತು. 200 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಆಡಿದ ಕರ್ನಾಟಕ ತಂಡ ಆರಂಭಿಕ ಬ್ಯಾಟರ್ ‘ದೇವದತ್ತ ಪಡಿಕಲ್ ‘ ತಂಡದ ಮೊತ್ತ 25 ಆಗಿದ್ದಾಗ ಔಟಾದರು. ಸಮರ್ಥ್ ಜೊತೆಗೂಡಿದ ಕೃಷ್ಣಮೂರ್ತಿ ಸಿದ್ದಾರ್ಥ್ 75 ರನ್ ಸೇರಿಸಿ, ತಂಡಕ್ಕೆ ಆಸರೆಯಾದರು. ಸಮರ್ಥ್ ಔಟಾದ ನಂತರ ಸಿದ್ದಾರ್ಥ್ ಮತ್ತು ಮನೀಷ್ ಪಾಂಡೆ ಆಟ ಕಳೆಗಟ್ಟಿತು. ಇಬ್ಬರು 104 ರನ್ ಗಳ ಜೊತೆಯಾಟವಾಗಿ ಸುಲಭ ಜಯ ತಂದುಕೊಟ್ಟರು.
5 ಸಿಕ್ಸರ್ ಮತ್ತು 9 ಬೌಂಡರಿ ಸಿಡಿಸಿ 109 ಎಸೆತಗಳಲ್ಲಿ 109 ರನ್ ಗಳಿಸಿದ ನಾಯಕ ದೀಪಕ್ ಹೂಡಾ ಏಕಾಂಗಿಯಾಗಿ ಹೋರಾಡಿದರು.
ಆತಿಥೇಯ ರಾಜಸ್ಥಾನ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ “ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ” ‘ಕ್ವಾರ್ಟರ್ ಫೈನಲ್’ ಪ್ರವೇಶಿಸಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.