ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಟೂರ್ನಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಶ್ರೀಕಾಂತ್ ಸಿಂಗಪುರದ ಲೋಹ್ ಯೂ ಎದುರು ನೇರ ಗೇಮ್ ಗಳಿಂದ ಸೋತರು. ಆದರೆ ಚಾಂಪಿಯನ್ ಶಿಪ್ ನಲ್ಲಿ ದೇಶಕ್ಕೆ ಮೊಟ್ಟಮೊದಲ ಬೆಳ್ಳಿ ಪದಕ ಗಳಿಸಿಕೊಟ್ಟರು. 28 ವರ್ಷದ ಶ್ರೀಕಾಂತ್ 43 ನಿಮಿಷಗಳಲ್ಲಿ (15-21,20-22) ರಲ್ಲಿ ಎದುರಾಳಿಗೆ ಮಣಿದರು.
ವಿಶ್ವ ಚಾಂಪಿಯನ್ ಶಿಪ್ ನ ಪುರುಷರ ವಿಭಾಗದಲ್ಲಿ ಇದೇ ಮೊದಲ ಬಾರಿ ಭಾರತ 2 ಪದಕ ಗೆದ್ದುಕೊಂಡಿದೆ, ಶನಿವಾರ ನಡೆದ ಸೆಮಿಫೈನಲ್ ನಲ್ಲಿ ಶ್ರೀಕಾಂತ್ (17-21,21-14,21-17) ರಲ್ಲಿ ಭಾರತದವರೇ ಆದ ‘ಲಕ್ಷ್ಯ ಸೇನ್’ ವಿರುದ್ಧ ಗೆದ್ದಿದ್ದರು. ಲಕ್ಷ್ಯ ಕಂಚಿನ ಪದಕ ಗಳಿಸಿದರು. ಪುರುಷರ ವಿಭಾಗದಲ್ಲಿ ಈ ಹಿಂದೆ ‘ಪ್ರಕಾಶ್ ಪಡುಕೋಣೆ’ ಮತ್ತು ‘B’ ಸಾಯಿ ಪ್ರಣೀತ್’ ಕಂಚಿನ ಪದಕದ ಸಾಧನೆ ಮಾಡಿದ್ದಾರೆ.
12ನೇ ಶ್ರೇಯಾಂಕದ ಶ್ರೀಕಾಂತ್ ಅವರನ್ನು 24 ವರ್ಷದ ಲೋಹ್ ಅವರು ಪ್ರಬಲ ಆಕ್ರಮಣಕಾರಿ ಆಟದ ಮೂಲಕ ಕಾಡಿದರು, ನೆಟ್ ಬಳಿ ಅಮೋಘ ‘ಡ್ರಾಪ್ ‘ ಮೂಲಕ ಪಾಯಿಂಟ್ ಗಳಿಸಿದ ‘ಲೋಹ್ ‘ ಆರಂಭದ ಗೇಮ್ ನಲ್ಲಿ (3-1) ರ ಮುನ್ನಡೆ ಸಾಧಿಸಿದರು.
2 ನೇ ಗೇಮ್ ನಲ್ಲಿ ಇಬ್ಬರು ಜಿದ್ದಾಜಿದ್ದಿಯ ಹೋರಾಟ ನಡೆಸಿ (4-4) ರ ಸಮಬಲ ಸಾಧಿಸಿದರು. ನಂತರ ಶ್ರೀಕಾಂತ್ ತಮ್ಮ ಸಹಜ ಆಟದ ಮೂಲಕ (7-4) ರಲ್ಲಿ ಮುನ್ನಡೆಸಿದರು. ಆದರೆ ಮತ್ತೆ ತಪ್ಪುಗಳನ್ನು ಎಸಗಿ (9-9) ರ ಸಮಬಲ ಸಾಧಿಸಲು ಎದುರಾಳಿಗೆ ಅವಕಾಶ ಮಾಡಿಕೊಟ್ಟರು.
ನಂತರ ಶ್ರೀಕಾಂತ್ ಅವರಿಗೆ ಸಿಡಿದೇಳಲು ಆಗಲಿಲ್ಲ. ಹೋರಾಡಿ ಸೋತ ಭಾರತದ ಕಿದಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. “ಆದರೆ ಬ್ಯಾಡ್ಮಿಂಟನ್ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾದರು”.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.