ಈ ವರ್ಷ ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬಯಲುಸೀಮೆ ಭಾಗದ ದಶಕಗಳಿಂದಲೂ ಬತ್ತಿ ಹೋಗಿದ್ದ ಹಲವು ನದಿಗಳು ಮೈದುಂಬಿ ಹರಿದಿದ್ದವು.
ಬಯಲುಸೀಮೆ ಭಾಗಗಳಲ್ಲಿ ನೀರು ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಪ್ರವಾಹೋಪಾದಿಯಲ್ಲಿ ನದಿಗಳಲ್ಲಿ ಹರಿದ ನೀರು ಮಳೆ ನಿಂತ ಕೆಲವೇ ದಿನಗಳಲ್ಲಿ ಬರಿದಾಗಿವೆ.
ಹತ್ತು ವರ್ಷಗಳ ಬಳಿಕ ಸುರಿದ ದಾಖಲೆ ಮಳೆಗೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಗಳ ನದಿಗಳಲ್ಲಿ ಪ್ರಸ್ತುತ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಭಾಗಗಳಲ್ಲಿನ ಅರ್ಕಾವತಿ, ಚಿತ್ರಾವತಿ, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಪಾಲಾರ್, ಕುಶಾವತಿ ನದಿಗಳ ಬಡಲು ಈಗ ನೀರಿಲ್ಲದೆ ಸೊರಗಿದೆ.
“ಬಯಲುಸೀಮೆ ಜಿಲ್ಲೆಗಳಿಗೆ ಕೆರೆಗಳೇ ಜೀವನಾಧಾರ. ಮಳೆ ಬರಲಿ ಬಾರದಿರಲಿ ಕೆರೆಗಳ ನಿರ್ವಹಣೆಯನ್ನು ನಿರಂತರವಾಗಿ ಮಾಡಬೇಕು. 40 ವರ್ಷಗಳ ನಂತರ ಸುರಿದ ಮಳೆ ನೀರನ್ನು ನಮ್ಮ ಕೆರೆಗಳಲ್ಲಿ ಹಿಡಿದಿಟ್ಟುಕೊಳ್ಳಲು ಆಗಿಲ್ಲ” ಎಂದು ಶಾಶ್ವತ ಇರುವ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.
“ಪರಿಸರವಾದಿ ಚೌಡಪ್ಪ ಅವರು ಈ ಬಾರಿ ಸುರಿದ ದಾಖಲೆ ಮಳೆ ನೀರನ್ನು ಸಂಗ್ರಹ ಮಾಡಿಕೊಳ್ಳುವ ವ್ಯವಸ್ಥೆ ಇದ್ದಿದ್ದರೆ, 20 ಟಿಎಂಸಿಗೂ ಹೆಚ್ಚು ನೀರನ್ನು ಸಂಗ್ರಹಿಸಬಹುದಿತ್ತು” ಎಂದು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.