ಕೊರೋನಾ ಎರಡನೇ ಅಲೆಯಾ ಪರಿಣಾಮ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಎರಡನೇ ತ್ರೈಮಾಸಿಕ ಅಂತ್ಯಕ್ಕೆ ರಾಜ್ಯ ಸರ್ಕಾರದ ಸ್ವಂತ ತೆರಿಗೆ ಸಂಗ್ರಹದಲ್ಲಿ 3,105 ಕೋಟಿ ರೂ. ಕೊರತೆಯಾಗಿದೆ.
ವಿಧಾನಸಭೆಯಲ್ಲಿ ನಡೆದ ಮುಖ್ಯಮಂತ್ರಿಗಳ ಪರವಾಗಿ ಸಚಿವ ಜೆ. ಸಿ. ಮಾಧುಸ್ವಾಮಿ ಅವರು ಮಂಡಿಸಿದ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನೆ ವರದಿಯಲ್ಲಿ ಉಲ್ಲೇಖವಿದೆ.
ಈ ವರ್ಷದ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ರಾಜಸ್ವ ಮೂಲದಿಂದ 86,136 ಕೋಟಿ ರೂ. ಸಂಗ್ರಹ ಗುರುವಿದ್ದರೂ 83,031 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧದಿಂದಾಗಿ ನೊಂದಣಿ ಹಾಗೂ ಮುದ್ರಾಂಕ, ಮೋಟಾರು ವಾಹನ ತೆರೆಗೆ ಆದರೆ ಆದಾಯ ಸಂಗ್ರಹದಲ್ಲೂ ಕುಂಠಿತವಾಗಿದೆ.
ಕೊರೊನಾ ಹರಡುವಿಕೆ ತೀವ್ರತೆ ಪರಿಣಾಮ ಚೇತರಿಕೆ ಯಾಗುತ್ತಿರುವ ಅಂಶವೂ ದಾಖಲಾಗಿದೆ.
ಪ್ರಸಕ್ತ ಸಾಲಿನ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲವು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ.26.66 ರಷ್ಟಾಗಲಿದೆ. ಮಾರ್ಚ್ ಕೊನೆಯ ವೇಳೆಗೆ ಬಾಕಿ ಇದ್ದ 3.36 ಲಕ್ಷ ಕೋಟಿ ರೂ. ಹೊರೆಯುವ 4. 45 ಕೋಟಿ ರೂ. ಗೆ ಏರಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ತೆರಿಗೆಗಳಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಿದ್ದ 24,273 ಕೋಟಿ ರೂ
.ಗಳಲ್ಲಿ ಸೆಪ್ಟೆಂಬರ್ ವರೆಗೆ ಕೇವಲ 9,488 ಕೋಟಿ ಮೊತ್ತವನ್ನಷ್ಟೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅಂದರೆ ನಿಗದಿತ ಮೊತ್ತದ ಶೇ.39ರಷ್ಟನ್ನು ಮಾತ್ರ ಕೇಂದ್ರ ನೀಡಿದೆ ಎಂದು ದಾಖಲಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.